Quantcast
Channel: VijayKarnataka
Viewing all articles
Browse latest Browse all 6795

ದಾರಿ ದೀಪ: ಮೂಢನಂಬಿಕೆ ವಿಪರೀತ ಬೇಡ

$
0
0

*ಸ್ವಂತ ಮನೆ ಪೂಜೆಗೆ ಮೂರು ಜನ ಹೋಗಿ ಮಾಡಿದ್ದು ಅಪಶಕುನವೇ ಗುರೂಜಿ?

ನಂದಕುಮಾರ್ ಎಸ್.ವಿ, ಬೆಂಗಳೂರು

ನಂಬಿಕೆಯ ವಿಪರೀತ ಮೂಢನಂಬಿಕೆ-ಮೂಢತನದ ವಿಪರೀತ ಅಪನಂಬಿಕೆ! ಇದನ್ನು ಯಾರು ಅರ್ಥ ಮಾಡಿಕೊಳ್ಳುವರೋ ಅವರು ಮಾತ್ರ ನಿಶ್ಚಯತೆಗೆ ಬಂದು ಜೀವನಕ್ಕೊಂದು ಸಾರ್ಥ ಪಡೆಯಬಲ್ಲರು. ನಿಮ್ಮ ಮಗನ ಮದುವೆ ವಿಳಂಬ ಆಗುವುದಕ್ಕೂ ಮೂರು ಜನ ಮನೆ ಪೂಜೆಗೆ ಹೋಗುವುದಕ್ಕೂ ಯಾವ ಸಂಬಂಧ? ಯಾರು ನಿಮಗೆ ಈ ಕಸರೆ ಎಲ್ಲ ಹೇಳುವರೋ ಅಂಥವರನ್ನು ಮೊದಲು ದೂರ ಮಾಡಿ. ಈಗ ಮಗನಿಗೆ ನಡೆವ ದೆಸೆ ಇತರೆ ಸಮಯ ಮದುವೆ-ಮಂಗಲ ಕಾರ್ಯಕ್ಕೆ ಸೂಕ್ತವಿಲ್ಲ ಅಷ್ಟೇ ಹೊರತು, ನಿಮ್ಮ ಮನೆಯ ದೋಷವಲ್ಲ. ಯುಗಾದಿ ನಂತರ ಹೆಚ್ಚು ಪ್ರಯತ್ನಿಸಿ, ಇದೇ ವರ್ಷ ಆಗುವುದು. ನಂತರ ನಮಗೆ ಪತ್ರ ಬರೆವುದನ್ನು ಮರೆಯಬೇಡಿ!

*ತೀರಾ ಅನಾರೋಗ್ಯ-ವೃದ್ಧೆ ಅತ್ತೆಯ ನೋಡಿಕೊಳ್ಳುವ ಜವಾಬ್ದಾರಿ-ಜೀವನ ಬೇಸರಿಸಿದೆ.

ಪ್ರಭಾವತಿ, ಜಯನಗರ

ನೀವು ದಂಪತಿಗಳೇ ವೃದ್ಧರು, ಅದರ ಮೇಲೆ ಈ ಪರಿಸ್ಥಿತಿ ಶೋಚನೀಯವೇ ಸರಿ. ಆದರೆ ನಾವು ತಂದ-ಕೊಡು-ಕೊಂಬುದು ಎಂಬ ಋಣ ಹರಿಯಬೇಕಲ್ಲ ತಾಯಿ! ಅವರಿಗೆ ಶರೀರ ಋಣ-ನಿಮಗೆ ಬಂಧು ಋಣ ತೀರಿಸಲು ದೈವ ಸಹಾಯ ಬೇಕು. ಸಾಧ್ಯವಾದರೆ ಮನೆಯಲ್ಲಿ ಅಥವಾ ದೇವಾಲಯದಲ್ಲಿ ಶನಿ ಪ್ರಧಾನ ಗ್ರಹಶಾಂತಿ ಸಹಿತ ಮೃತ್ಯುಂಜಯ ಹೋಮ ಮಾಡಿಸಿ. ಇಹ-ಪರ ಎರಡಕ್ಕೂ ಶುಭವೇ.

*ಈಚೆಗೆ ಮದುವೆ ಆಗಿ ಹೊಂದಾಣಿಕೆ ಇಲ್ಲ. ಮುಂದೆ ಏನು ಮಾಡಲಿ?

ಸಹನಾ ಜೆ.ಕೆ, ಚಿತ್ರದುರ್ಗ

ಹತ್ತಾರು ವರ್ಷ ದಾಂಪತ್ಯದಲ್ಲೇ ಹೊಂದಾಣಿಕೆ ಇರದು. ಇನ್ನು ನಿಮಗೆ ವರ್ಷದಲ್ಲೇ ಕಿರಿಕಿರಿ ಏನು ಆಶ್ಚರ್ಯವಿಲ್ಲ. ಸಹೋದರರು, ಸಹೋದರಿಯರು, ತಂದೆ, ತಾಯಿಯರೊಂದಿಗೆ ಅನೇಕ ವರ್ಷದ ಸ್ನೇಹದಲ್ಲಿ, ಇಲ್ಲಿ ಏಕೆ ಹೊಂದಾಣಿಕೆ ಬಾರದು? ಇದನ್ನು ಆಯಾ ಸಂಬಂಧದಲ್ಲಿನ ಇಬ್ಬರೂ ಆಗಾಗ್ಗೆ ತಮ್ಮೊಳಗೆ ಮತ್ತು ಪರಸ್ಪರ ಚರ್ಚಿಸರು! ಆದರೆ ಮನದಲ್ಲೇ ಮಸೆಯುವರು! ಇತರರೊಂದಿಗೆ ಹಳಿಯುವರು ಸಹ! ಅಹಂ ರಹಿತ ನಡೆ, ಕ್ಷಮೆ, ಜೀವನ ಪ್ರತಿ ವಿಶ್ವಾಸ-ಇದರಿಂದ ಪರಸ್ಪರ ಪ್ರೀತಿ ಬೆಳೆವುದೇ ಹೊರತು, ಸಂಬಂಧ ಮಾತ್ರದಿಂದ ಅಲ್ಲ.

*ಪತ್ನಿಯಿಂದ ಸದಾ ಕಿರಿಕಿರಿ ತೊಂದರೆ-ಪರಿಹಾರ ಏನು?

ಜಗದೀಶ ಕೆ.ಸಿ/ಜಯಂತ್ ಆರ್.ಎಲ್ ಶಾಮನೂರು

ನಿಮಗೂ ಈ ಮೇಲಿನ ಉತ್ತರವೇ ದಾರಿಯಾಗಬಲ್ಲದು. ನೀವೆಷ್ಟು ತಿಳಿದು ಪರಸ್ಪರ ವ್ಯವಹರಿಸುವಿರಿ ಎಂಬುದರ ಮೇಲೆ ನಿಂತಿದೆ. ಆದ ಮದುವೆಯಲ್ಲಿ ಹದ ಕಾಣಲಾರಿರಿ-ಮುಂದೆ ಇನ್ನೊಂದು ಸಂಬಂಧ ತಡಕಾಡುವಿರಿ! ಇರುವುದರಲ್ಲಿ ಜೀವನ ಅಡಗಿದೆ. ಪತ್ನಿಯು ಪತಿಗೆ ಸವಾಲಾಗಬಾರದು. ಪತಿಯು ಪತ್ನಿಗೆ ಸೋಮಾರಿಯಾಗಿ ಕಾಣಬಾರದು. ಇದನ್ನರ್ಥ ಮಾಡಿಕೊಳ್ಳಿ. ತಾನೇ ಸರಿಯಾಗುವುದು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>