Quantcast
Channel: VijayKarnataka
Viewing all articles
Browse latest Browse all 6795

ಶನಿ ಮಂಗಳ ಯೋಗ

$
0
0

ವೈದ್ಯಕೀಯ ಜ್ಯೋತಿಷ್ಯ ಫಲದಂತೆ ಶನಿ ಮಂಗಳ ಯೋಗ ಎಂದರೆ ರಕ್ತ ಹೆಪ್ಪುಗಟ್ಟುವುದು. ರಕ್ತ ದಪ್ಪ ಆಗಲಿದೆ. ವೃಶ್ಚಿಕ ರಾಶಿಯಲ್ಲಿ ಶನಿ ಮಂಗಳ ಯೋಗ ಎಂದರೆ ಸ್ತ್ರೀಯರಿಗೆ ಗರ್ಭಕೋಶ ಸಂಬಂಧ ಅನಾರೋಗ್ಯ ಉಂಟಾಗಲಿದೆ.

- ರತ್ನರಾಜ್ ಜೈನ್

ಮಂಗಳ ಗ್ರಹವು ಒಂದು ರಾಶಿಯಲ್ಲಿ ಒಂದೂವರೆ ತಿಂಗಳುಗಳ ಕಾಲವಿದ್ದು ಪೂರ್ಣ 12 ರಾಶಿಗಳನ್ನು ಸಂಚರಿಸಲು 18 ತಿಂಗಳುಗಳ ಕಾಲ ತೆಗೆದುಕೊಳ್ಳುವುದು. ಆದರೆ ಕೆಲವೊಮ್ಮೆ ವಕ್ರಗತಿ ಉಂಟಾದರೆ ಒಂದೇ ರಾಶಿಯಲ್ಲಿ 6 ತಿಂಗಳುಗಳ ಕಾಲ ಇರುವನು.

ಮಂಗಳ ಶನಿ ಗ್ರಹಗಳು ಒಂದೇ ರಾಶಿಯಲ್ಲಿದ್ದರೆ ಅಥವಾ ಶನಿ ಇರುವ ರಾಶಿಯಿಂದ 7 ನೇ ರಾಶಿಯಲ್ಲಿ ಮಂಗಳವಿದ್ದರೆ ಇದನ್ನೇ ಶನಿ ಮಂಗಳ ಯೋಗ ಎನ್ನುವರು.

ಶನಿ ಮಂಗಳ ಯೋಗ ವಿಶ್ವಕ್ಕೆ ಹಾಗೂ ದೇಶಕ್ಕೆ ಅಪಾಯ ಸೂಚಿಸುತ್ತದೆ. ಈ ಹಿಂದೆ ಇದೇ ಸ್ಥಿತಿ ಉಂಟಾದಾಗ 1992 ರಲ್ಲಿ ಉತ್ತರ ಪ್ರದೇಶದ ಅಜಂಗಢದಲ್ಲಿ ಭೂಕಂಪನ, 1993ರಲ್ಲಿ ಲಾತೂರು ಮತ್ತು 1999ರಲ್ಲಿ ಟರ್ಕಿ ದೇಶದಲ್ಲಿ ಭೂಕಂಪನ ಉಂಟಾಯಿತು. ಈ ಫಲದಂತೆ ಭೂಮಿಯ ಉಷ್ಣತೆ ಏರಲಿದೆ. ಸಮುದ್ರದಲ್ಲಿ ವಾಯುಭಾರ ಕುಸಿತದ ಫಲದಂತೆ ಚಂಡಮಾರುತ ಉಂಟಾಗುವುದು.

ಈ ವರ್ಷ ಫೆ.20 ರಿಂದ ಸೆ.18 ರ ಕಾಲದಲ್ಲಿ ಶನಿ ಮತ್ತು ಮಂಗಳ ಗ್ರಹಗಳು ವೃಶ್ಚಿಕ ರಾಶಿಯಲ್ಲಿದ್ದು ಉತ್ತರ ಭಾರತದ ವಾಯುವ್ಯ ಈಶಾನ್ಯ ಭಾಗಗಳಲ್ಲಿ ಭೂಕಂಪನ ಉಂಟಾಗಬಹುದು. ಭೂಮಿಯ ಉಷ್ಣತೆ ಏರುವ ಸಾಧ್ಯತೆ ಇದೆ. ಸಮುದ್ರದಲ್ಲಿ ವಾಯುಭಾರ ಕುಸಿತದ ಫಲದಂತೆ ವಿಪರೀತ ಚಂಡಮಾರುತದ ಹಾವಳಿ ಉಂಟಾಗಬಹುದು.

ವೈದ್ಯಕೀಯ ಜ್ಯೋತಿಷ್ಯ ಫಲದಂತೆ ಶನಿ ಮಂಗಳ ಯೋಗ ಎಂದರೆ ರಕ್ತ ಹೆಪ್ಪುಗಟ್ಟುವುದು. ರಕ್ತ ದಪ್ಪ ಆಗಲಿದೆ. ವೃಶ್ಚಿಕ ರಾಶಿಯಲ್ಲಿ ಶನಿ ಮಂಗಳ ಯೋಗ ಎಂದರೆ ಸ್ತ್ರೀಯರಿಗೆ ಗರ್ಭಕೋಶ ಸಂಬಂಧ ಅನಾರೋಗ್ಯ ಉಂಟಾಗಲಿದೆ. ಮುಂದಕ್ಕೆ ಹುಟ್ಟುವ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀಳಬಹುದು. ಭ್ರೂಣಾವಸ್ಥೆಯ ಮಗುವಿನ ಮೇಲೂ ಪರಿಣಾಮ ಬೀಳಬಹುದು. ಪುರುಷರಾದರೆ ಮೂಲವ್ಯಾಧಿ ಅನಾರೋಗ್ಯ, ಮೂತ್ರ ಸಂಬಂಧ ತೊಂದರೆ, ಸಾಂಕ್ರಾಮಿಕ ರೋಗ ಭಯ, ಮೂತ್ರಕೋಶ ದೋಷ ಉಂಟಾಗುವ ಸಾಧ್ಯತೆ ಇದೆ.

ವಿವಾಹ ಆಗಲಿರುವ ಸ್ತ್ರೀ ಪುರುಷರು ವಿವಾಹದ ಮೊದಲು ಇಬ್ಬರ ರಕ್ತದ ಗುಂಪು ಪಡೆದು ತಜ್ಞ ವೈದ್ಯರ ಸಲಹೆ ಪಡೆದು ಮುಂದೆ ಸಂತಾನ ಫಲ ಪ್ರಾಪ್ತ ಆಗಲಿದೆಯೇ? ಎಂದು ತಿಳಿದುಕೊಳ್ಳುವುದು ಉತ್ತಮ. ಆದಷ್ಟು ಶನಿವಾರ ಮತ್ತು ಮಂಗಳವಾರ ದಿನಗಳಲ್ಲಿ ಕೆಂಪು ದಂಟಿನ ಸೊಪ್ಪು, ಕೆಂಪು ಹರಿವೆ ಸೊಪ್ಪಿನ ಪಲ್ಯ ಮಾಡುವುದು ಉತ್ತಮ. ಮಾಂಸಾಹಾರ ಸೇವನೆ ಕಡಿಮೆ ಮಾಡಿದರೆ ಇನ್ನೂ ಒಳ್ಳೆಯದು.

ಆಸಕ್ತರು ಈ ಸಮಯ ಕಾಲದಲ್ಲಿ ಶ್ರೀ ಉಗ್ರನರಸಿಂಹ ದೇವರ ಮಂತ್ರವನ್ನು ಪ್ರತಿ ದಿನ 9 ಬಾರಿ, ಶನಿವಾರ ಮತ್ತು ಮಂಗಳವಾರ 108 ಸಲ ಪಠಿಸಬೇಕು.

ಕೆಂಪು ನೀಲಿ ಮಿಶ್ರಿತ ಹರಳಿನ ಉಂಗುರವನ್ನು ಪುರುಷರು ಬಲಗೈಯ ಮಧ್ಯದ ಬೆರಳು, ಸ್ತ್ರೀಯರು ಎಡಗೈಯ ಮಧ್ಯದ ಬೆರಳಲ್ಲಿ ಮಂಗಳವಾರ ಅಥವಾ ಶನಿವಾರ ದಿನ ಧರಿಸತಕ್ಕದ್ದು.

ಶನಿ ಮಂಗಳ ಯೋಗ ಕಾಲದಲ್ಲಿ ರಾಜಕಾರಣಿಗಳು, ಮಂತ್ರಿ ಮಹೋದಯರು ಯಾವುದೇ ರೀತಿಯ ಹೂವಿನಹಾರ, ಹೂವುಗುಚ್ಛ, ಯಾವುದೇ ರೀತಿಯ ಉಡುಗೊರೆ ವಸ್ತುಗಳನ್ನು ಸ್ವೀಕರಿಸಬಾರದು. ಹಾಗೇನಾದರು ಸ್ವೀಕರಿಸುವುದಾದರೆ ಪರೀಕ್ಷಿಸುವುದು ಉತ್ತಮ. ಕಾರಣ ಅಪಮೃತ್ಯು ಎದುರಿಸುವ ಸಾಧ್ಯತೆ ಇದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>