Quantcast
Channel: VijayKarnataka
Viewing all articles
Browse latest Browse all 6795

ಸುಧಾರಣೆ ಇಲ್ಲವೇ ನಾಶ: ಜೇಟ್ಲಿ

$
0
0

ಗುರ್‌ಗಾಂವ್ : ಆರ್ಥಿಕ ಸುಧಾರಣೆಗೆ ತೆರೆದುಕೊಳ್ಳದಿದ್ದಲ್ಲಿ ನಾಶ ಖಂಡಿತ ಎಂದು ರಾಜ್ಯಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಎಚ್ಚರಿಸಿದ್ದಾರೆ. ಉದ್ಯಮ ಸ್ನೇಹಿ ನೀತಿಗಳಿದ್ದರೆ ಮಾತ್ರ ಹೂಡಿಕೆ ಹರಿದುಬರಲು ಸಾಧ್ಯ. ಜಡ್ಡುಗಟ್ಟಿದ ನೀತಿಗಳನ್ನು ಹೂಡಿಕೆದಾರರು ಇಷ್ಟಪಡುವುದಿಲ್ಲ. ಎಲ್ಲಿ ತಮಗೆ ಹೆಚ್ಚು ಅನುಕೂಲಕರವಾದ ವಾತಾವರಣ ಇದೆಯೋ ಅತ್ತ ಅವರು ಹೋಗುತ್ತಾರೆ. ಆದ್ದರಿಂದ ಅಭಿವೃದ್ಧಿ ಹೊಂದುವ ಆಸೆಯಿದ್ದರೆ ನೀತಿಗಳಲ್ಲಿ ಸುಧಾರಣೆ ತರಬೇಕು ಎಂದು ಜೇಟ್ಲಿ ವಿವರಿಸಿದ್ದಾರೆ.

ದೇಶೀಯ ಹಾಗೂ ಜಾಗತಿಕ ಹೂಡಿಕೆದಾರರ 'ಹ್ಯಾಪನಿಂಗ್ ಹರಿಯಾಣಾ' ಸಮಾವೇಶದಲ್ಲಿ ಮಾತನಾಡಿದ ಅವರು, ''ಹೂಡಿಕೆದಾರರಿಗೆ ಅಗತ್ಯವಾದ ಆರ್ಥಿಕ, ಔದ್ಯಮಿಕ ಹಾಗೂ ರಾಜಕೀಯ ಪರಿಸರ ನಿರ್ಮಾಣ ಮಾಡುವವರು ಲಾಭ ಹೊಂದುತ್ತಾರೆ. ಯಾರು ಬದಲಾವಣೆಗೆ ತೆರೆದುಕೊಳ್ಳುವುದಿಲ್ಲವೋ, ಆ ರಾಜ್ಯದ ಜನತೆ ಪ್ರಯೋಜನದಿಂದ ವಂಚಿತರಾಗುತ್ತಾರೆ'' ಎಂದು ಎಚ್ಚರಿಸಿದರು.''ಬದಲಾಗಿ ಇಲ್ಲವೇ ಹಾಳಾಗಿ ಹೋಗಿ ಎಂಬುದು ಇಂದಿನ ಸತ್ಯವಾಗಿದೆ'' ಎಂಬ ಎಚ್ಚರಿಕೆಯ ಮಾತುಗಳನ್ನೂ ಆವರು ಆಡಿದರು.

''ಸಹಕಾರ ಒಕ್ಕೂಟ ವ್ಯವಸ್ಥೆಯ ಜೊತೆಗೆ ಭಾರತವು ಸ್ಪರ್ಧಾ ಒ್ಕಕೂಟ ವ್ಯವಸ್ಥೆಯಾಗಿಯೂ ಬದಲಾಗುತ್ತಿದೆ. ಭವಿಷ್ಯವು ಸ್ಪರ್ಧಾ ಒಕ್ಕೂಟ ವ್ಯವಸ್ಥೆಯದ್ದೇ ಆಗಲಿದೆ. ಏಕೆಂದರೆ ಹೂಡಿಕೆ ಆಕರ್ಷಿಸಲು ಕೇಂದ್ರ- ರಾಜ್ಯ ಸಂಬಂಧಗಳಿಗಿಂತ ಮುಖ್ಯವಾಗಿ, ರಾಜ್ಯರಾಜ್ಯಗಳ ನಡುವಣ ಸ್ಪರ್ಧೆ ಏರ್ಪಡಲಿದೆ'' ಎಂದು ಜೇಟ್ಲಿ ಹೇಳಿದರು.

ಈ ಸಂದರ್ಭದಲ್ಲಿ ಜಾಟರಿಗೆ ಮೀಸಲಾತಿ ಕುರಿತ ಪ್ರಶ್ನೆಗೆ, ''ಕಪ್ಪು ಮೋಡ ಕರಗಿದೆ'' ಮತ್ತು ರಾಜ್ಯಕ್ಕೆ ಪುಟಿದೇಳಬಲ್ಲ ಸಾಮರ್ಥ್ಯವಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>