ವಯಸ್ಸು 60, ನಾಲ್ಕು ಗಂಡು ಮಕ್ಕಳಿದ್ದಾರೆ. ಅವರೆಲ್ಲರಲ್ಲಿ ಎರಡನೆಯವನ ಮೇಲೆ ನನಗೆ ಪ್ರೀತಿ ಜಾಸ್ತಿ. ಅವನು ಚಿಕ್ಕಂದಿನಿಂದಿಲೂ ದುಡಿಯುವ ಕಾರಣಕ್ಕೆ ಮನೆಯಿಂದ ಹೊರಗಿದ್ದ ಕಾರಣಕ್ಕೆ ಹೆಚ್ಚು ಪ್ರೀತಿ ಉಂಟಾಗಿರಬಹುದುದು. ಮೊದಲನೆಯವ ಮನೆಯಲ್ಲೇ ಇದ್ದು ಬೆಳೆದವ. ಸಾಧು ವ್ಯಕ್ತಿತ್ವ ಆತನದು. ಕಳೆದ ವರ್ಷ ಇವರಿಬ್ಬರಿಗೂ ಜತೆಯಾಗಿ ಮದುವೆ ಮಾಡಿಸಿದೆವು. ಎರಡನೇ ಮಗನ ಮೇಲಿನ ಮೋಹದಿಂದಾಗಿ ನಾನು ಮೊದಲನೆ ಮಗನ ಪತ್ನಿಯನ್ನು ನಿರ್ಲಕ್ಷಿಸತೊಡಗಿದೆ. ಎರಡನೆಯವನ ಹೆಂಡತಿಗೆ ಹೆಚ್ಚಾಗಿ ತಿನ್ನಲು ಕೊಡುವುದು ಇತ್ಯಾದಿಗಳನ್ನು ಮಾಡಿದೆ. ಇದಕ್ಕೆ ಮೊದಲ ಸೊಸೆ ಆಕ್ಷೇಪಿಸಿದಳು. ಈ ಕಾರಣಕ್ಕೆ ನನಗೆ ಮತ್ತು ಅವಳಿಗೆ ಸಾಕಷ್ಟು ಬಾರಿ ಜಗಳವಾಗಿ ಮಾತು ನಿಂತುಹೋಗಿತ್ತು. ಇದರಿಂದ ಬೇಸೆತ್ತ ದೊಡ್ಡ ಮಗ, ಸ್ವಲ್ಪ ದೂರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಲು ಆರಂಭಿಸಿದ. ಆದರೆ, ದೊಡ್ಡಮಗ ಮನೆಯಿಂದ ಹೊರಗೆ ಹೋದ ತಕ್ಷಣ ಎರಡನೇ ಸೊಸೆ ಬೇಕಾಬಿಟ್ಟಿಯಾಗಿ ಆಡತೊಡಗಿದಳು. ನಾನು ಕೊಟ್ಟ ಸಲುಗೆಯನ್ನು ದುರುಪಯೋಗ ಪಡಿಸಿಕೊಂಡಳು. ಹೇಳದೆ ಕೇಳದೆ ತವರಿಗೆ ಹೋಗುವುದು ಇತ್ಯಾದಿ ಮಾಡತೊಡಗಿದಳು. ಅವಳ ಇಂತಹ ಕೆಲಸದಿಂದ ಕೋಪಗೊಂಡ ನಾನು ಸಾಕಷ್ಟು ಬಾರಿ ಬೈದಿದ್ದೆ. ಅವಳೂ ನನ್ನ ಜತೆ ಜಗಳಕ್ಕೆ ನಿಂತಿದ್ದಳು. ಆದರೆ, ಕೆಲವು ದಿನದ ಹಿಂದೆ ನನ್ನನ್ನು ಅವಾಚ್ಯವಾಗಿ ಬೈದು ಎರಡನೇ ಮಗನನ್ನು ಕರೆದುಕೊಂಡು ತವರು ಮನೆಯಲ್ಲಿ ಹೋಗಿ ನಿಂತಿದ್ದಾಳೆ. ಹೆಂಡತಿಯ ಗುಲಾಮನಾಗಿರುವ ಮಗನೂ ಮನೆಗೆ ಬರುತ್ತಿಲ್ಲ. ನೀನು ಬರದಿದ್ದರೆ ಬೇಡ , ಮಗನನ್ನಾದರೂ ಕಳಿಸು ಎಂದರೂ ಕೇಳುತ್ತಿಲ್ಲ. ಈಗ ಇಬ್ಬರು ಮಕ್ಕಳೂ ಮನೆಯಲ್ಲಿ ಇಲ್ಲ. ನನಗೆ ನನ್ನ ಬಗ್ಗೆಯೇ ಜಿಗುಪ್ಸೆ ಬಂದಿದೆ. ಏನು ಮಾಡಲಿ ನಾನು?
- ನಿಮ್ಮ ದೀರ್ಘ ಪತ್ರ ಓದಿದ ಬಳಿಕ ತಿಳಿಯುವುವುದೇನೆಂದರೆ, ನೀವು ನಿಮ್ಮ ಮಕ್ಕಳ ಮೇಲೆಯೇ ಪಕ್ಷಪಾತದ ನೋಟ ಹೊಂದಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ! ದೂರದಲ್ಲಿ ಕೆಲಸಕ್ಕಿದ್ದು, ಆಗಾಗ ಮನೆಗೆ ಬರುವಾಗ ದುಡ್ಡು-ಸೀರೆ ತರುತ್ತಾನೆ ಎಂದ ತಕ್ಷಣಕ್ಕೆ ಆ ಮಗ ಅತ್ಯಂತ ಪ್ರೀತಿ ಪಾತ್ರನಾಗುವುದಿಲ್ಲ. ನಿತ್ಯವೂ ಮನೆಯಲ್ಲಿದ್ದು ನೀವು ಹೇಳಿದ ಕೆಲಸ ಮಾಡುತ್ತಿದ್ದ ಮಗ ಕೆಲಸಕ್ಕೆ ಬಾರದವನೂ ಅಲ್ಲ. ಮಕ್ಕಳ ಮೇಲೆ ಸರಿ, ಅವರ ಹೆಂಡತಿಯರ ಮಧ್ಯೆಯೂ ನೀವು ತಾರತಮ್ಯ ಯಾಕೆ ಮಾಡಿದಿರಿ ಎಂಬುದು ಗೊತ್ತಾಗುತ್ತಿಲ್ಲ. ಇಬ್ಬರೂ ನಿಮ್ಮ ಸೊಸೆಯಂದಿರೇ ಅಲ್ಲವೇ? ತವರು ಮನೆಯನ್ನು ಬಿಟ್ಟು ಬಂದಿರುವ ಅವರನ್ನು ಮಕ್ಕಳಂತೆ, ಸರಿಸಮನಾಗಿ ನೋಡುವುದನ್ನು ಬಿಟ್ಟು ಅವರಿಗೆ ನಿರಾಶೆ ಮಾಡಿದಿರಿ. ಈ ರೀತಿ ನಿಮ್ಮ ತಪ್ಪುಗಳ ಸರಣಿ ಮುಂದುವರಿಯುತ್ತದೆ. ಆದದ್ದು ಆಗಿಹೋಯಿತು. ಈಗಲೂ ಕಾಲ ಮಿಂಚಿಲ್ಲ. ಮತ್ತೆ ಸೊಸೆಯಂದಿರನ್ನು ಮನೆಗೆ ಕರೆಸಿಕೊಳ್ಳಲು ಅವಕಾಶ ಇದೆ. ಅದಕ್ಕಾಗಿ ನೀವು ಬದಲಾಗಬೇಕು. ಇಬ್ಬರೂ ಸೊಸೆಯಿಂದಿರ ಬಳಿಗೆ ಹೋಗಿ ನನ್ನಿಂದ ತಪ್ಪಾಗಿದೆ ಎಂದು ಹೇಳಿಬಿಡಿ. ಇಲ್ಲಿ ನಾನು ಹಿರಿಯಳು, ಗೌರವಕ್ಕೆ ಧಕ್ಕೆ ಅಂದುಕೊಳ್ಳಬಾರದು. ಇನ್ನು ಮುಂದೆ ಇಂತಹ ತಪ್ಪುಗಳಿಗೆ ನಾನು ಅವಕಾಶ ಕೊಡುವುದಿಲ್ಲ ಎಂದು ಅವರಿಬ್ಬರಿಗೂ ಭರವಸೆ ಕೊಡಿ. ಮಕ್ಕಳನ್ನು ಮನೆಗೆ ಕರೆಸಿ ಮಾತನಾಡಿ. ನಿಮ್ಮ ಸೊಸೆಯಂದಿರಿಗೂ ಒಳ್ಳೆಯ ಮನಸ್ಸು ಇರಬಹುದು. ನೀವು ಪ್ರೀತಿಯಿಂದ ಕರೆದರೆ ಮನೆಗೆ ವಾಪಸ್ ಬರದಿರುತ್ತಾರೆಯೇ? ಸರಿ, ಒಂದು ವೇಳೆ ಬಂದರೂ ನಿಮ್ಮ ಹಳೆ ಚಾಳಿಯನ್ನು ಮುಂದುವರಿಸಬೇಡಿ..
* ಹೆಸರು ಬೇಡ, ಕಲಘಟಗಿ
ನಾನು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದಳು. ತನ್ನ ತಾಯಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ತಂದೆ ಮನೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ನಾನು ನಿತ್ಯವೂ ಮನೆಯಿಂದ 30 ಕಿಲೋ ಮೀಟರ್ ಆಚೆ ಇರುವ ಕಾಲೇಜಿಗೆ ವ್ಯಾಸಂಗಕ್ಕಾಗಿ ಹೋಗುತ್ತಿದ್ದೇನೆ. ಇನ್ನೊಂದು ವರ್ಷದಲ್ಲಿ ಅಂತಿಮ ವರ್ಷದ ಬಿಎಸ್ಸಿ ಮುಗಿಯುತ್ತದೆ. ನಾನು ನಿತ್ಯವೂ ಕಾಲೇಜಿಗೆ ಪ್ರಯಾಣ ಮಾಡುವ ಖಾಸಗಿ ಬಸ್ಸಿನ ಕಂಡಕ್ಟರ್ ಒಬ್ಬನನ್ನು ಪ್ರೀತಿಸುತ್ತೇನೆ. ಆತ ಹಿಂದೂ ಧರ್ಮಕ್ಕೆ ಸೇರಿದವ. ಆತನೂ ಎಂ.ಎ ಮಾಡಿದ್ದು ಐದು ಬಸ್ಸುಗಳ ಮಾಲೀಕನಾಗಿರುವುದರಿಂದ ಅವನದೇ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತ ತುಂಬಾ ಒಳ್ಳೆಯ ವ್ಯಕ್ತಿ ಎಂಬುದನ್ನು ನಾನು ಕಂಡು ಬಲ್ಲೆ. ಹೀಗಾಗಿ ಅವನ ಮೇಲೆ ಪ್ರೀತಿ ಮೂಡಿದೆ. ಸಾಕಷ್ಟು ಬಾರಿ ಕದ್ದು ಮುಚ್ಚಿ ಜತೆಯಾಗಿ ತಿರುಗಿದ್ದೇವೆ. ನನ್ನ ಪದವಿ ಮುಗಿದ ಬಳಿಕ ಮದುವೆಯಾಗೋಣ ಎಂದು ಅಂದುಕೊಂಡಿದ್ದೇವೆ. ಅವರ ಮನೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಮಾಡಿದರೂ ವಿರೋಧ ಎದುರಿಸುವುದು ಗ್ಯಾರಂಟಿ. ನನ್ನ ಮನೆಯಲ್ಲಿ ವಿಷಯ ಹೇಳಿದ್ದೇನೆ. ಆದರೆ ನನ್ನ ಹೆತ್ತವರು ಆತ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವುದಾದರೆ ಮಾತ್ರ ಮದುವೆ ಮಾಡಿಸಿಕೊಡುತ್ತೇವೆ ಎಂದು ಹಠ ಹಿಡಿದಿದ್ದಾರೆ. ಆವನ ಮನೆಯಲ್ಲಿ ಹೇಳಿದರೆ ಆತನನ್ನ ಮನೆಯಿಂದಲೇ ಹೊರಹಾಕುವ ಸಾಧ್ಯತೆ ಇದೆ. ಒಂದು ವೇಳೆ ನಾವು ಮದುವೆಯಾದರೆ ಗತಿ ಏನು?
- ನೀವಿಬ್ಬರೂ ಪ್ರಾಪ್ತರಾಗಿರುವುದರಿಂದ ವಿವಾಹ ಮಾಡಿಕೊಳ್ಳುವುದಕ್ಕೆ ಕಾನೂನಿಗೆ ಸಂಬಂಧಿಸಿದ ಹಾಗೆ ಯಾವುದೇ ತಕರಾರು ಇಲ್ಲ. ಜಾತಿ, ಧರ್ಮ ಅನ್ನುವುದು ಕೇವಲ ಆಚಾರ ಮತ್ತು ನಂಬಿಕೆಗೆ ಸೀಮಿತವಾಗಿರುವ ವಿಷಯವಾಗಿರುವುದರಿಂದ ಅದಕ್ಕೂ ಮದುವೆಗೂ ಸಂಬಂಧ ಇಲ್ಲ. ಅದೂ ಅಲ್ಲದೆ ನೀವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಮದುವೆಯಾಗುವವರು. ಹೀಗಾಗಿ ಅದಕ್ಕೆ ಧರ್ಮದ ಅಡ್ಡಿಯೂ ಇರದು. ಮದುವೆಯಾದ ಮೇಲೆ ನೀವು ನಿಮ್ಮಿಷ್ಟದಂತೆ ಇರಬಹುದು. ಯಾವುದೇ ಧರ್ಮವನ್ನು ತರುವುದೂ ಬೇಡ. ಅದಕ್ಕೆ ಅವಕಾಶ ಕೊಟ್ಟರೆ ಮುಂದೆ ಸಮಸ್ಯೆ ಎದುರಾಗುತ್ತದೆ. ನಿಮಗೆ ಯಾರ ಮೇಲೆ ನಂಬಿಕೆಯೋ ಅವರನ್ನು ನಂಬಿ. ಈ ವಿಚಾರದಲ್ಲಿ ಪರಸ್ಪರ ಒತ್ತಾಯ, ಆಗ್ರಹ ಬೇಡ. ನಿಮ್ಮ ಹೆತ್ತವರ ವಿಚಾರಕ್ಕೆ ಬಂದಾಗ, ಧರ್ಮ ಮತ್ತು ಜಾತಿಯ ಮೇಲಿನ ಪ್ರೀತಿ ಇನ್ನೂ ಸಾಕಷ್ಟು ಜನರ ಮನಸ್ಸಲ್ಲಿ ಇರುವ ಕಾರಣಕ್ಕೇ ಆವರು ಆ ರೀತಿ ಹೇಳುತ್ತಿದ್ದಾರೆ. ನಿಮ್ಮ ತಾಯಿ ಶಿಕ್ಷಕಿಯಾಗಿರುವುದರಿಂದ ಅವರಿಗೆ ವಿದ್ಯೆಯ ಕೊರತೆ ಇರದು. ಹೀಗಾಗಿ ಅವರಲ್ಲಿ ಕುಳಿತು ಈ ವಿಚಾರದ ಬಗ್ಗೆ ಚರ್ಚಿಸಿ. ನಮಗೆ ಧರ್ಮದ ಚೌಕಟ್ಟಿನಿಂದ ಮುಕ್ತಿ ಪಡೆಯುವ ಅಭಿಲಾಷೆ ಇದೆ ಎಂಬುದನ್ನು ಅರ್ಥ ಮಾಡಿಸಿ. ನಿಮ್ಮ ಮಗಳಾಗಿ ಇರುತ್ತೇನೆ, ನಿಮ್ಮ ಆಚರಣೆಗೆ ಅಡ್ಡಿ ಬರುವುದಿಲ್ಲ ಎಂಬುದನ್ನು ಖಾತ್ರಿಪಡಿಸಿ. ಅವರು ಅದಕ್ಕೆ ಒಪ್ಪುವ ಸಾಧ್ಯತೆ ಹೆಚ್ಚಿದೆ. ಒಪ್ಪದಿದ್ದರೆ ತಾತ್ಕಾಲಿಕವಾಗಿ ಅವರ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಲೇಬೇಕಾಗುತ್ತದೆ. ಕಾಲ ಕ್ರಮೇಣ ಅವರ ಮನಸ್ಸು ಶಾಂತವಾದ ಮೇಲೆ ಮತ್ತೆ ನಿಮ್ಮನ್ನು ಸೇರಿಸಿಕೊಳ್ಳಬಹುದು. ನೀವು ಪ್ರೀತಿಸುವ ಹುಡುಗನ ಮನೆಯಲ್ಲಿ ವಿಚಾರ ಗೊತ್ತಾದರೆ ಮನೆಯಿಂದ ಹೊರಗೆ ಹಾಕುವ ಸಾಧ್ಯತೆ ಇದೆ ಎಂದು ಹೇಳಿದ್ದೀರಿ. ಪರಸ್ಪರ ಪ್ರೀತಿಸಿರುವ ನೀವು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧವಾಗಿರುವುದರಿಂದ ಇಂತಹ ಸಮಸ್ಯೆಯನ್ನು ಎದುರಿಸಲೇಬೇಕಾಗುತ್ತದೆ. ನೀವು ಹೇಳಿದ ಪ್ರಕಾರ ನಿಮ್ಮ ಪ್ರಿಯಕರ ಎಂ.ಎ ಪಾಸು ಮಾಡಿದ್ದಾನೆ. ನೀವು ಬಿ.ಎಸ್ಸಿ ಓದಿದ್ದೀರಿ. ನಿಮಗೆ ಎಲ್ಲಾದರೂ ನೌಕರಿ ಸಿಗಬಹುದು. ಕೆಲಸ ಮಾಡುತ್ತಾ ಕಲಿಯುತ್ತಾ ಹೋಗಿ. ಇನ್ನೊಂದು ವಿಚಾರ. ನಮ್ಮ ದೇಶದ ಕಾನೂನಿನ ಪ್ರಕಾರ ನಿಮ್ಮ ನಡುವಿನ ಸಂಬಂಧ ತಪ್ಪಲ್ಲ. ಅದು ನಿಮಗೆ ರಕ್ಷಣೆ ಕೊಟ್ಟೇಕೊಡುತ್ತದೆ. ಅಂತಿಮವಾಗಿ ಒಂದು ಮಾತು. ಎಲ್ಲದಕ್ಕೂ ಮೊದಲೊಮ್ಮೆ ಸರಿಯಾಗಿ ಯೋಚಿಸಿ.
* ರೂಪಶ್ರೀ, ಹಾಸನ
ನನ್ನ ಮದುವೆಯಾಗಿ ಒಂದೂವರೆ ವರ್ಷದಲ್ಲಿ ನನ್ನ ಪತಿ ತೀರಿಕೊಂಡಿದ್ದು, ಆ ಬಳಿಕ ಈಗ 3 ವರ್ಷವಾಗಿದೆ. ನನಗೊಂದು ಹೆಣ್ಣು ಮಗುವಿದ್ದು ಅದಕ್ಕೀಗ ಮೂರೂವರೆ ವರ್ಷ ತುಂಬಿದೆ. ಪತಿ ತೀರಿಕೊಂಡ ಬಳಿಕ ಯಾರೂ ಗತಿ ಇಲ್ಲ ಎನ್ನುವ ಆತಂಕದಿಂದ ನಾನು ಖಿನ್ನಳಾಗಿದ್ದೆ. ಇದಕ್ಕೆ ಬೇಸರಗೊಂಡಿರುವ ನನ್ನ ಹೆತ್ತವರು ನನಗೆ ಮರುಮದುವೆ ಮಾಡಲು ಹೊರಟಿದ್ದಾರೆ. ಮದುವೆಯಾಗಲು ಮುಂದೆ ಬಂದ ವ್ಯಕ್ತಿಯು ವಿವಾಹಿತನಾಗಿದ್ದು, ಮೊದಲ ಪತ್ನಿಗೆ ವಿಚ್ಛೇದನ ನೀಡಿ ನನ್ನನ್ನು ಮದುವೆಯಾಗಲು ಹೊರಟಿದ್ದಾರೆ. ಆದರೆ, ಒಂದು ಷರತ್ತನ್ನು ಹಾಕಿದ್ದಾರೆ- ಮಗುವನ್ನು ತಾಯಿಯ ಮನೆಯಲ್ಲಿ ಬಿಟ್ಟು ಬರಬೇಕು ಅಂತ! ಇದ್ಯಾಕೆ ಹೀಗೆಂದರೆ, ಹೆಣ್ಣು ಮಗುವಾಗಿದ್ದರಿಂದ ಮುಂದೆ ಮದುವೆ ಮಾಡಲು ಖರ್ಚು ಮಾಡಬೇಕಾದೀತು ಎನ್ನುತ್ತಾರೆ. ಆದರೆ, ನನಗೆ ಮಗುವನ್ನು ಬಿಡಲು ಮನಸ್ಸಿಲ್ಲ. ಆಸರೆ ಯಾರೂ ಇಲ್ಲದ ಕಾರಣಕ್ಕೆ ಮದುವೆ ಮಾಡಿಕೊಳ್ಳಲು ಆಸಕ್ತಿಯಿದೆ. ನಾನೀಗ ಗೊಂದಲದಲ್ಲಿದ್ದು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ.
- ನೀವು ಈ ಮದುವೆಗೆ ಒಪ್ಪದೆ ಇರುವುದೇ ಸೂಕ್ತ. ಯಾಕೆಂದರೆ, ನಿಮ್ಮನ್ನು ಮದುವೆಯಾಗಲು ಬಯಸಿದ ವ್ಯಕ್ತಿಯೂ ಹೆಣ್ಣು ಮಗುವೆಂಬ ಕಾರಣಕ್ಕೆ ಈ ಮೊದಲಿನ ನಿಮ್ಮ ಮಗುವನ್ನು ನಿರ್ಲಕ್ಷಿಸಿದ್ದರೆ ಆತ ಎಂತಹ ವ್ಯಕ್ತಿಯಾಗಿರಬಹುದು ಎಂದು ಅನುಮಾನ ಬರುತ್ತದೆ. ನೀವು ಮಗುವನ್ನು ಬಿಟ್ಟು ಹೋದಿರಾದರೆ, ಅದು ತಬ್ಬಲಿಯಾದೀತು. ನಿಮಗೆ ಆಸರೆಯಿಲ್ಲ ಎನ್ನುವುದು ಸತ್ಯವೇ ಆದರೂ ನಿಮ್ಮ ಮಗುವನ್ನು ನೋಡಿಕೊಳ್ಳಲು ಹಿಂಜರಿಯುತ್ತಿರುವ ವ್ಯಕ್ತಿಯು ಮುಂದೆ ನಿಮ್ಮನ್ನು ಸಾರಾಸಗಟವಾಗಿ ತಿರಸ್ಕರಿಸಬಹುದು. ಆಗ ನೀವು ಮತ್ತು ನಿಮ್ಮ ಮಗು ಇಬ್ಬರೂ ಅನಾಥರಾಗುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಮಗುವಿನೊಂದಿಗೆ ನೀವು ಆರಾಮ ಜೀವನ ನಡೆಸಿ. ಅವಳಿಗೆ ಒಳ್ಳೆಯ ವಿದ್ಯೆ, ಧೈರ್ಯ ಕೊಡಿ. ದೊಡ್ಡವಳಾದ ಮೇಲೇ ಆಕೆ ನಿಮ್ಮನ್ನು ಚೆನ್ನಾಗಿ ನೋಡಿಕೊಂಡಾಳು. ಈ ಮಧ್ಯೆ ಯಾರಾದರೂ ಒಳ್ಳೆಯ ವ್ಯಕ್ತಿಗಳು ನಿಮ್ಮನ್ನು ಮದುವೆಯಾಗಲು ಮುಂದೆ ಬರಬಹುದು. ಆಗ ಯೋಚಿಸಿ ನೋಡಿ. ಕೆಲವೊಮ್ಮೆ ನಿಮ್ಮಂತಹ ನೊಂದವರನ್ನು ದುರ್ಬಳಕೆ ಮಾಡಿಕೊಳ್ಳಲು ಕೆಲವರು ಹೊಂಚು ಹಾಕುತ್ತಿರುತ್ತಾರೆ. ಅಂತಹದ್ದಕ್ಕೆಲ್ಲ ಅವಕಾಶ ಕೊಡಬೇಡಿ. ಮುಂದೊಂದು ದಿನ ನಿಮಗೆ ಒಳ್ಳೆಯ ದಿನವಾಗಬಹುದು.
ಪ್ರೈವೇಟ್ ಕಂಪನಿ
ಪ್ರೈವೇಟ್ ಕಂಪನಿ
* ಅಲಮೇಲು, ಊರು ಬೇಡ
ನನ್ನ ಸ್ವಂತ ಊರು ಮಡಿಕೇರಿ. ಇತ್ತೀಚೆಗೆ ನನ್ನ ಮದುವೆಯಾಗಿದ್ದು ಗಂಡನ ಮನೆಗೆ ಬಂದಿದ್ದೇನೆ. ನನ್ನ ಪತಿಗೆ ನಾಲ್ವರು ಸಹೋದರರು, ಮೂರು ಸಹೋದರಿಯರು. ನನ್ನ ಪತಿ ಕೊನೆಯವರು. ಎಲ್ಲ ಸಹೋದರರಿಗೆಮತ್ತು ಇಬ್ಬರು ಸಹೋದರಿಯರಿಗೆ ಮದುವೆಯಾಗಿದೆ. ನನ್ನ ಪತಿ ಮತ್ತು ಅವರ ಸಹೋದರರೆಲ್ಲರೂ ಸಮೀಪದ ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಉತ್ತಮ ಸಂಪಾದನೆ ಇದೆ. ಮಾವ ಕೂಡಾ ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ನಿಲ್ಲಿಸಿದ್ದಾರೆ. ಆದರೆ, ಅವರಿಗೆ ವಿದ್ಯಾಭ್ಯಾಸ ಕಡಿಮೆ. ನಾನು ಪಿಯುಸಿ ತನಕ ವಿದ್ಯಾಭ್ಯಾಸ ಮಾಡಿದ್ದೇನೆ. ನನ್ನ ಪತಿ ಮತ್ತು ಅವರ ಸಹೋದರರೆಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಎಲ್ಲರೂ ದುಡಿದು ವಾರಕ್ಕೊಮ್ಮೆ ಸಿಕ್ಕಿದ ಸಂಬಳವನ್ನು ಅವರ ತಂದೆಗೆ ಕೊಡುತ್ತಾರೆ. ಅವರು ಅದರಲ್ಲಿ ಮನೆಯ ಖರ್ಚಿಗೆ ಬೇಕಾದ್ದನ್ನು ತೆಗೆದುಕೊಂಡು, ಮಿಕ್ಕಿದನ್ನು ಸಮಾನವಾಗಿ ಹಂಚುತ್ತಾರೆ. ಇದು ನನಗೆ ಇಷ್ಟವಾಗುತ್ತಿಲ್ಲ. ಸಂಪಾದನೆ ಮಾಡಿರುವುದರಲ್ಲಿ ನನ್ನ ಗಂಡನ ಕೈಯಲ್ಲಿ ಏನೂ ಉಳಿತಾಯ ಇರುವುದಿಲ್ಲ. ನಮಗೂ ನಮ್ಮ ದುಡ್ಡಿನಲ್ಲಿ ಹಕ್ಕು ಅನ್ನೋದು ಇರುವುದಿಲ್ಲ. ಅಗತ್ಯಕ್ಕೆ ಬೇಕಾದರೆ ಮಾವನವರ ಮುಂದೆ ಕೈ ಒಡ್ಡಿ ನಿಲ್ಲುವ ಪರಿಸ್ಥಿತಿ ಬಂದಿದೆ. ಭವಿಷ್ಯಕ್ಕಾಗಿ ಏನೂ ಕೂಡಿಡದಿದ್ದರೆ ಹೇಗೆ ಎನ್ನುವ ಚಿಂತೆ ಮೂಡಿದೆ. ಸಾಕಷ್ಟು ಬಾರಿ ಬೇರೆ ಮನೆ ಮಾಡೋಣ ಎಂದು ಗಂಡನಿಗೆ ಒತ್ತಾಯ ಮಾಡಿದೆ. ಆದರೆ, ಅವರು ಅಪ್ಪನ ಮಾತು ಮೀರುತ್ತಿಲ್ಲ. ನನಗೆ ಇಲ್ಲಿ ಬದುಕುವುದು ಇಷ್ಟವಿಲ್ಲ. ನಾನೇನು ಮಾಡಬಹುದು.
- ನೀವು ಒಂದು ಒಳ್ಳೆಯ ಸಂಸಾರವನ್ನು ಹಾಳು ಮಾಡಲು ಹೊರಟಿದ್ದೀರಿ. ಈಗಲೇ ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದೆ ನಿಮ್ಮ ಕುಟುಂಬದಲ್ಲಿ ಆಗುವ ಎಲ್ಲ ಅನಾಹುತಗಳಿಗೂ ನೀವೇ ಹೊಣೆಯಾಗುತ್ತೀರಿ. ಯಾಕೆಂದರೆ ತುಂಬು ಸುಖೀ ಸಂಸಾರ ಅನ್ನುವುದು ಇತ್ತೀಚೆಗಿನ ದಿನಗಳಲ್ಲಿ ಬಲು ಅಪರೂಪ. ಅದೂ ಎಲ್ಲರೂ ಅನ್ನೋನ್ಯವಾಗಿರುವಾಗ ನೀವ್ಯಾಕೆ ಅದಕ್ಕೆ ಹುಳಿ ಹಿಂಡುತ್ತೀರಿ. ಇಷ್ಟು ವರ್ಷಗಳ ಕಾಲ ಅವರು ಚೆನ್ನಾಗಿಯೇ ಇದ್ದರು ಎಂದಾದ ಮೇಲೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರ್ಥ. ಹೀಗಿರುವಾಗ ನಿಮಗೆ ಅದರಲ್ಲಿ ಸಮಸ್ಯೆ ತೋರಿದರೆ, ಅದರಲ್ಲಿ ನಿಮ್ಮ ತಪ್ಪನ್ನು ಹುಡುಕಬಹುದೇ ಹೊರತು ಬೇರೆ ಯಾವ ಕಾರಣವೂ ಇರುವುದಿಲ್ಲ. ನಿಮ್ಮ ಗಂಡನ ಸಹೋದರರು ಹಲವು ವರ್ಷಗಳಿಂದ ಅವರ ಅಪ್ಪ ಹೇಳಿದ ರೀತಿಯಲ್ಲಿ ಸಮರ್ಪಕವಾಗಿ ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಈ ಮಧ್ಯೆ ಸಾಕಷ್ಟು ಆರ್ಥಿಕ ಸಮಸ್ಯೆಗಳು ಎದ್ದಿರಬಹುದು. ಆದನ್ನೂ ಅವರ ತಂದೆಯೇ ನಿಭಾಯಿಸಿರುತ್ತಾರೆ. ಹೀಗಿರುವಾಗ ಆರ್ಥಿಕವಾಗಿ ನಾವು ಹಿಂದೆ ಉಳಿಯುತ್ತೇವೆ ಎನ್ನುವ ಭಯ ಬೇಡ ಎಂದು ಅನಿಸುತ್ತದೆ. ಒಂದು ವೇಳೆ ನಿಮ್ಮ ಮಾವನ ಕೈಯಲ್ಲಿ ಹಣವೇನಾದರೂ ಪೋಲಾಗುತ್ತಿದೆ ಎಂದು ಅನಿಸಿದರೆ, ಅದನ್ನು ನಿಧಾನವಾಗಿ ಪ್ರಶ್ನಿಸಿ ಆರ್ಥಿಕ ವಿಚಾರವನ್ನು ಹೇಗೆ ಸರಿಯಾಗಿ ನಿಭಾಯಿಸಬಹುದು ಎಂಬುದನ್ನು ಅವರಿಗೆ ಹೇಳಿ. ಅವರು ಅವಿದ್ಯಾವಂತರು ಎನ್ನುವ ಕಾರಣಕ್ಕೆ ದಡ್ಡರೇನಲ್ಲ. ನೀವು ಪಿಯುಸಿ ಕಲಿತಿದ್ದೀರಿ ಎಂದಮಾತ್ರಕ್ಕೆ ಬುದ್ಧಿವಂತರೂ ಅಲ್ಲ! ನಿಮ್ಮ ತವರು ಮನೆಯಲ್ಲಿ ಕಡಿಮೆ ಜನ ಇದ್ದ ಕಾರಣಕ್ಕೆ ನಿಮಗೆ ಇಲ್ಲಿ ಹೆಚ್ಚು ಜನಸಂಖ್ಯೆಯನ್ನು ಕಂಡು ಸ್ವಾತಂತ್ರ್ಯ ಇಲ್ಲ ಎಂದು ಅನಿಸಿರಬಹುದು. ಇನ್ನೊಂದಿಷ್ಟು ದಿನ ಇವರ ಜತೆ ಬಾಳಿ. ನಿಮಗೂ ಎಲ್ಲರೊಂದಿಗೆ ಹೊಂದಾಣಿಕೆಯಾಗಬಹುದು. ನಿಮ್ಮಲ್ಲಿರುವ ಹೆಚ್ಚುಗಾರಿಕೆಯನ್ನು ಬಿಟ್ಟು, ಎಲ್ಲರ ಜತೆ ಸೇರಿ ಕೆಲಸ ಮಾಡಿ. ಇದರಿಂದ ನಿಮಗೆ ಹೆಚ್ಚು ಸಂತಸವಾಗುತ್ತದೆಯೇ ಹೊರತು ನಷ್ಟವೇನಿಲ್ಲ.
----
* ಸುಮಯಾ, ಮೈಸೂರು
ಗಂಡ ತೀರಿಕೊಂಡು ನಾಲ್ಕು ವರ್ಷಗಳಾಯಿತು. ಮೂವರು ಮಕ್ಕಳು. ಮೊದಲೆರಡು ಹೆಣ್ಣು, ಕೊನೆಯವ ಮಗ. ಹೆಣ್ಣು ಮಕ್ಕಳು ದೂರದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಬಳವೂ ಚೆನ್ನಾಗಿಯೇ ಇದೆ. ಆದರೆ, ನನ್ನ ಮೊದಲು ಮಗಳು ಸ್ವಭಾವತಃ ಸ್ವಲ್ಪ ಜೋರು. ಸಿಟ್ಟು ಬಂದರೆ ಹಿರಿಯರು-ಕಿರಿಯರೆನ್ನದೆ ಬೈದು ಬಿಡುತ್ತಾಳೆ. ನಮ್ಮ ಸಂಬಂಧಿಕರಿಗೆಲ್ಲರಿಗೂ ಅವಳ ಈ ಬುದ್ಧಿ ಗೊತ್ತಿದೆ. ಅದುವೇ ಅವಳ ಮದುವೆಗೆ ಅಡ್ಡಿ ಮಾಡುತ್ತಿದೆ. ಅವಳನ್ನು ನೋಡಲು ಹುಡುಗರು ಯಾರಾದರೂ ಬಂದರೂ ಅವಳು ಜೋರು ಎನ್ನುವ ಸುದ್ದಿ ತಲುಪಿ, ಸಂಬಂಧ ಕುದುರಿಸಲು ಇಚ್ಛೆಪಡುವುದಿಲ್ಲ. ಹೀಗಾಗಿ ಸಾಕಷ್ಟು ಬಾರಿ ನಮಗೆ ನಿರಾಸೆಯಾಗಿದೆ. ಅದೇ ರೀತಿ ಎರಡನೇ ಮಗಳು ಹುಟ್ಟಿನಿಂದ ಸಿಕ್ಕಾಬಟ್ಟೆ ಸಾಧು ಸ್ವಭಾವದವಳಾಗಿದ್ದಳು. ಆದರೆ, ಪದವಿ ಮುಗಿಸಿ ಕೆಲಸಕ್ಕೆ ಹೊರಗೆ ಹೋದ ಬಳಿಕ ಸ್ವಲ್ಪ ಜೋರಾಗಿದ್ದಾಳೆ ಎಂದು ಅನಿಸುತ್ತಿದೆ. ಹಿಂದೆ ನಾನು ಏನು ಹೇಳಿದರೂ ಸುಮ್ಮನಿರುತ್ತಿದ್ದ ಅವಳು ಇತ್ತೀಚಿನ ದಿನಗಳಲ್ಲಿ ರಜೆಗೆಂದು ಮನೆಗೆ ಬಂದವಳು ಸಿಡುಕುತ್ತಾ ಇರುತ್ತಾಳೆ. ಮೊದಲ ಮಗಳ ಸ್ವಭಾವದಿಂದ ಈಗಾಗಲೇ ನನಗೆ ಸಮಸ್ಯೆ ಎದುರಾಗಿದ್ದು, ಎರಡನೆಯವಳೂ ಅದೇ ರೀತಿ ಆದರೆ ನನ್ನ ಪರಿಸ್ಥಿತಿ ಏನಾದೀತು ಎನ್ನುವ ಭಯ ಉಂಟಾಗಿದೆ.
- ಮಕ್ಕಳು ಬೆಳೆಯುತ್ತಾ ಮನೆಯ ಹಿರಿಯರನ್ನು ನೋಡಿ ಕಲಿಯುತ್ತದೆ. ಅದಲ್ಲದಿದ್ದರೆ, ಅವರ ಸ್ವಭಾವಕ್ಕೆ ವಂಶವಾಹಿನಿಗಳೂ ಕಾರಣವಾಗಿರುತ್ತದೆ. ಹೀಗಾಗಿ ನಿಮ್ಮ ದೊಡ್ಡ ಮಗಳು ಸ್ವಲ್ಬ ಜೋರಾಗಿ ಇರಬಹುದು. ಮಕ್ಕಳ ಕೆಲವು ಸ್ವಭಾವಗಳು ಕೆಲವೊಂದು ಬಾರಿ ಅಸಹನೀಯ ಎಂದು ಅನಿಸಿದರೆ ತಕ್ಷಣ ಅದನ್ನು ಬದಲಿಸುವಂತೆ ಚಿಕ್ಕದಿರುವಾಗಲೇ ಹೇಳಬೇಕು. ಇಲ್ಲದಿದ್ದರೆ, ಅದು ಬೆಳೆದ ದೊಡ್ಡ ಸಮಸ್ಯೆಯಾಗುತ್ತದೆ. ನಿಮ್ಮ ಮಗಳು ಚಿಕ್ಕಂದಿನಿಂದಲೇ ಜೋರು ಅಂದಮೇಲೆ ಅದನ್ನು ಅಲ್ಲಿಂದಲೇ ಸರಿ ಮಾಡಬಹುದಾಗಿತ್ತು. ಮಕ್ಕಳ ಮೇಲಿನ ಪ್ರೀತಿಯಿಂದ ಅವರನ್ನು ತಿದ್ದದಿದ್ದರೆ ದೊಡ್ಡವರಾದ ಮೇಲೆ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಡೆದದ್ದು ನಡೆದು ಹೋಗಿದೆ. ಇನ್ನು ಚಿಂತಿಸಿ ಫಲವಿಲ್ಲ. ಈಗಲಾದರೂ ಸುಧಾರಿಸಿಕೊಳ್ಳುವಂತೆ ಮಗಳಿಗೆ ಹೇಳಿ. ಅವಳ ಜತೆ ನಿನ್ನ ಸ್ವಭಾವವನ್ನು ತಿದ್ದಿಕೊಳ್ಳಬೇಕು ಎಂದು ಹೇಳಬೇಕು. ಸ್ವಭಾವದಿಂದಲೇ ಬದುಕಿಗೆ ಏನಾದರೂ ತೊಂದರೆಯಾದರೆ ನಾನು ಹೊಣೆಯಾಗುವುದಿಲ್ಲ ಎಂದು ಎಚ್ಚರಿಕೆ ನೀಡಿ. ಖಂಡಿತಾ ಅವರು ಬದಲಾಗುತ್ತಾರೆ. ನಿಮ್ಮ ಸಾಧು ಸ್ವಭಾವದ ನಿಮ್ಮ ಸಣ್ಣ ಮಗಳು ಸ್ವಲ್ವ ಸಿಡುಕುತನ ಕಲಿತುಕೊಂಡಿದ್ದಾಳೆ ಎಂದು ಅಷ್ಟೇನೂ ಚಿಂತೆ ಮಾಡಬೇಡಿ. ಮೊದಲು ಮನೆಯಲ್ಲಿದ್ದಳು, ಎಲ್ಲವೂ ಸರಿಯಾಗಿತ್ತು. ಆದರೆ, ಈಗ ಹೊರಗೆ ಕೆಲಸಕ್ಕೆ ಹೋಗಿದ್ದಾಳೆ. ಆಫೀಸಲ್ಲೋ, ನಾಲ್ಕುಮಂದಿಯ ಜತೆಗಿರುವಾಗಲೋ ಕೆಲವೊಂದು ಒತ್ತಡಗಳನ್ನು ಎದುರಿಸಿರುತ್ತಾರೆ. ಅದರಿಂದಾಗಿ ಸ್ವಭಾವ ಸ್ವಲ್ಪ ಬದಲಿಸಿರುತ್ತಾರೆ. ಆದರೂ ಈ ಬುದ್ಧಿಯನ್ನು ಇನ್ನಷ್ಟು ಹೆಚ್ಚು ಮಾಡಬೇಡ ಎಂದು ಈಗಲೇ ಹೇಳಿ. ಅದಕ್ಕೆ ಅಕ್ಕನಿಗೆ ಆಗುತ್ತಿರುವ ತೊಂದರೆಯನ್ನು ಉದಾಹರಿಸಿ. ಇದರಿಂದ ಹೆಚ್ಚೇನೂ ಸಮಸ್ಯೆ ಆಗದು.
-----
* ಶಂಕ್ರಣ್ಣ, ಬಿಜಾಪುರ
ಕಾರಿನ ಶೋರೂಮ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ. ನನಗೆ ಇತ್ತೀಚೆಗೆ ಮದುವೆಯಾಗಿದೆ. ನನ್ನ ಅಕ್ಕನ ಮಗಳನ್ನೇ ಮದುವೆ ಮಾಡಿಕೊಟ್ಟಿದ್ದಾರೆ. ಆದರೆ, ಇದೇ ನನ್ನ ಬದುಕಿಗೆ ಮುಳವಾಗಿದೆ ಎಂದು ಅನಿಸುತ್ತಿದೆ. ಯಾಕೆಂದರೆ, ನನಗೆ ಈ ಮದುವೆ ಸುತರಾಂ ಇಷ್ಟ ಇರಲಿಲ್ಲ. ಆದರೆ ಮನೆಯವರೆಲ್ಲರೂ ಒತ್ತಾಯ ಮಾಡಿ ಮದುವೆ ಮಾಡಿಸಿದ್ದಾರೆ. ನನ್ನ ಪತ್ನಿ ನೋಡಲು ಸ್ವಲ್ಪವೂ ಸುಂದರವಾಗಿಲ್ಲ. ಅದರ ಜತೆಗೆ ನಾಲ್ಕು ಮಂದಿಯ ಜತೆಗೆ ಬೆರೆತೂ ಗೊತ್ತಿಲ್ಲ. ನನಗೆ ಮದುವೆ ಮಾಡಿಕೊಟ್ಟಿರುವ ನನ್ನ ಅಕ್ಕನ ಮಗಳನ್ನು ನನ್ನ ಅಣ್ಣನಿಗೆ ಮದುವೆ ಮಾಡಿಕೊಡಲು ಎಲ್ಲರೂ ನಿಶ್ಚಯಿಸಿದ್ದರು. ಆದರೆ, ಅವನು ಒಪ್ಪದೇ ಬೇರೆ ಹುಡುಗಿಯನ್ನು ಮದುವೆಯಾಗಿದ್ದಾನೆ. ಅದಕ್ಕಾಗಿ ನನಗೆ ಮದುವೆ ಮಾಡಿದ್ದಾರೆ. ನನಗೆ ಇಷ್ಟ ಇರದಿದ್ದರೂ ಮನೆಯವರ ಒತ್ತಾಯಕ್ಕೆ ಮಣಿದು ಮದುವೆಯಾಗಬೇಕಾಯಿತು. ಎಂಗೇಜ್ಮೆಂಟ್ ಆದಮೇಲೂ ನಾನು ಎರಡು ವರ್ಷಗಳ ಕಾಲ ಮದುವೆಯನ್ನು ಮುದೂಡಿದೆ. ಆದರೂ ಅದರಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಆದರೆ, ಮದುವೆಯಾದ ಮೇಲೆ ಒಂದೇಒಂದು ಸಲವೂ ಆಕೆಯನ್ನು ನಾನು ಮಟ್ಟಿಲ್ಲ. ಇಬ್ಬರೂ ಅಪರಚಿತರಂತೆ ಇದ್ದೇವೆ. ನನ್ನ ಮನೆಗೆ ಯಾವುದೇ ಗೆಳೆಯರನ್ನು ಕರೆದುಕೊಂಡು ಬರಲೂ ನನಗೆ ಆಗುತ್ತಿಲ್ಲ. ಏನು ಮಾಡಲಿ ಹೇಳಿ?
- ಬದುಕನ್ನು ಎದುರಿಸಲು ಧೈರ್ಯ ಸಾಲದಿರುವುದರಿಂದಲೇ ಈ ಸಮಸ್ಯೆ ನಿಮಗೆ ಎದುರಾಗಿದೆ. ಯಾಕೆಂದರೆ ಇನ್ನೊಬ್ಬರ ಒತ್ತಾಯಕ್ಕೆ ಮಣಿದು, ಏನೋ ಆಗುತ್ತದೆ ಎಂದು ಹೆದರಿ ಮದುವೆಯಾಗಿ ಈಗ ಬೇಡ ಅಂದರೆ ಅದು ಹೇಗೆ ಸರಿಯಾಗುತ್ತದೆ? ನಿಮಗೆ ಮದುವೆ ಇಷ್ಟವಿಲ್ಲ ಎಂದಾದರೆ, ಅದನ್ನು ಮೊದಲೇ ಹೇಳಿಬಿಡಬಹುದಿತ್ತು. ಇದರಿಂದ ಸಣ್ಣ ಪರಿಣಾಮ ಉಂಟಾಗುತ್ತಿತ್ತೇ ಹೊರತು ಇನ್ನೇನೂ ಆಗುತ್ತಿರಿಲಿಲ್ಲ. ಅಬ್ಬಬ್ಬಾ ಅಂದರೆ. ನಿಮ್ಮ ಅಕ್ಕ ಮಾತು ಬಿಡುತ್ತಿದ್ದರಷ್ಟೆ. ಆದರೆ ಇಷ್ಟವಿಲ್ಲದಿದ್ದರೂ ಮದುವೆಯಾಗಿ ಜೀವನಪೂರ್ತಿ ನೋವು ಅನುಭವಿಸುವ ಪರಿಸ್ಥಿತಿಯನ್ನು ನೀವು ತಂದುಕೊಂಡಿದ್ದೀರಿ. ಮದುವೆ ಬಳಿಕ ಅವಳು ಚೆನ್ನಾಗಿಲ್ಲ, ಅವಳನ್ನು ನಾನು ಮುಟ್ಟಿಲ್ಲ ಎಂದು ಹೇಳುತ್ತಾ ಕೂರುವುದರಿಂದ ಯಾವುದೇ ಲಾಭವಾಗದು. ನೀವು ಈಗ ಈ ಹುಡುಗಿ ಬೇಡ ಎಂದು ಬಿಟ್ಟು ಬೇರೆ ಮದುವೆಯಾಗಬಹುದು. ಆದರೆ, ಅಕ್ಕನ ಮಗಳಾಗಿರುವ ಅವಳಿಗೆ ಯಾರು ಗತಿ? ಅವಳನ್ನು ಮದುವೆಯಾಗಲು ಯಾರಾದರೂ ತಯಾರಿದ್ದಾರೆಯೇ? ನಿಮ್ಮ ಸಮಾಧಾನಕ್ಕೆ ಇನ್ನೊಂದು ವಿಚಾರ ಹೇಳುತ್ತೇನೆ ಕೇಳಿ. ಅಂದಚೆಂದವನ್ನು ಕಟ್ಟಿಕೊಂಡು ಯಾವ ಸಂಸಾರವೂ ಉದ್ಧಾರವಾಗಿಲ್ಲ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ಮಾಡುವುದರಿಂದ ಮಾತ್ರ ದಾಂಪತ್ಯ ಫಲಪ್ರದವಾಗುತ್ತದೆ. ಚೆಂದವಿಲ್ಲದ ಹುಡುಗಿಯನ್ನು ಮದುವೆಯಾಗಲು ಧೈರ್ಯ ಮಾಡಿದ್ದೇನೆ ಎನ್ನುವ ಹೆಮ್ಮೆ ಇರಲಿ. ಅಣ್ಣ ತಿರಸ್ಕರಿಸಿದ ಹುಡುಗಿಯಯನ್ನು ಮದೆವೆಯಾದೆನಲ್ಲ ಎನ್ನುವ ಹಿಂಜರಿಕೆ ಬೇಡ. ನೀವು ಇದೇ ರೀತಿ ಕೀಳರಿಮೆ ಇಟ್ಟುಕೊಂಡು ಆಕೆಯನ್ನು ಮನೆಯೊಳಗೆ ಇಟ್ಟಿರುವುದು ಎಳ್ಳಷ್ಟೂ ಸರಿಯಲ್ಲ. ಹೀಗಾಗಿ ಹೊರಗೆಲ್ಲ ಕರೆದುಕೊಂಡು ಹೋಗಿ. ಸ್ವಲ್ಪ ಸುತ್ತಾಡಿಸಿ. ಅಂದಚೆಂದದ ಬಟ್ಟೆಬರೆಗಳನ್ನು ಹಾಕಲು ಹೇಳಿ. ನಾಲ್ಕು ಜನರಲ್ಲಿ ಮಾತನಾಡಿಸಿ. ಕೆಲವು ದಿನಗಳಲ್ಲಿ ಅವರು ನಿಮ್ಮ ಬೇಡಿಕೆಗಳನ್ನೆಲ್ಲ ಪೂರೈಸಿ, ಉತ್ತಮ ಪತ್ನಿಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ.
ಇಲ್ಲಿ ಹಿರಿಯರಿಗೂ ಒಂದು ಕಿವಿಮಾತಿದೆ. ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆಯ ವಿಷಯದಲ್ಲಿ ಅನಗತ್ಯ ಒತ್ತಡ ಹೇರುವುದರಿಂದ ಅಪಾಯಗಳೇ ಜಾಸ್ತಿ.
ಪ್ರೈವೇಟ್ ಕಂಪನಿ
* ಶಂಕ್ರಣ್ಣ, ಬಿಜಾಪುರ
ಕಾರಿನ ಶೋರೂಂ ಒಂದರಲ್ಲಿ ಕೆಲಸ ಮಾಡುತಿದ್ದೇನೆ. ಇತ್ತೀಚೆಗೆ ಮದುವೆಯಾಗಿದೆ. ನನ್ನ ಅಕ್ಕನ ಮಗಳನ್ನೇ ಮದುವೆ ಮಾಡಿಕೊಟ್ಟಿದ್ದಾರೆ. ಆದರೆ, ಇದೇ ನನ್ನ ಬದುಕಿಗೆ ಮುಳವಾಗಿದೆ ಎಂದು ಅನಿಸುತ್ತಿದೆ. ಯಾಕೆಂದರೆ, ನನಗೆ ಈ ಮದುವೆ ಸುತರಾಂ ಇಷ್ಟ ಇರಲಿಲ್ಲ. ಆದರೆ, ಮನೆಯವರೆಲ್ಲರೂ ಒತ್ತಾಯ ಮಾಡಿ ಮದುವೆ ಮಾಡಿಸಿದ್ದಾರೆ. ನನ್ನ ಪತ್ನಿ ನೋಡಲು ಸ್ವಲ್ಪವೂ ಸುಂದರವಾಗಿಲ್ಲ. ಜತೆಗೆ ನಾಲ್ಕು ಮಂದಿಯ ಜತೆಗೆ ಬೆರೆತೂ ಗೊತ್ತಿಲ್ಲ. ನನಗೆ ಮದುವೆ ಮಾಡಿಕೊಟ್ಟಿರುವ ನನ್ನ ಅಕ್ಕನ ಮಗಳನ್ನು ನನ್ನ ಅಣ್ಣನಿಗೆ ಮದುವೆ ಮಾಡಿಕೊಡಲು ಎಲ್ಲರೂ ನಿಶ್ಚಯಿಸಿದ್ದರು. ಆದರೆ, ಅವನು ಒಪ್ಪದೇ ಬೇರೆ ಹುಡುಗಿಯನ್ನು ಮದುವೆಯಾಗಿದ್ದಾನೆ. ಅದಕ್ಕಾಗಿ ನನಗೆ ಮದುವೆ ಮಾಡಿದ್ದಾರೆ. ನನಗೆ ಇಷ್ಟ ಇರದಿದ್ದರೂ ಮನೆಯವರ ಒತ್ತಾಯಕ್ಕೆ ಮಣಿದು ಮದುವೆಯಾಗಲೇ ಬೇಕಾಯಿತು. ಎಂಗೇಜ್ಮೆಂಟ್ ಆದ 2 ವರ್ಷ ಮದುವೆಯನ್ನು ಮುಂದೂಡಿದೆ. ಆದರೆ, ಅವರ ಒತ್ತಾಯದಿಂದ ಮುಕ್ತಿ ಸಿಗದ ಕಾರಣ ಮದುವೆಯಾಗಲೇಬೇಕಾಯಿತು. ಆದರೆ, ಮದುವೆಯಾದ ಮೇಲೆ ಒಂದು ದಿನ ಕೂಡಾ ಆಕೆಯನ್ನು ನಾನು ಮಟ್ಟಿಲ್ಲ. ಇಬ್ಬರೂ ಅಪರಚಿತರಂತೆ ಇದ್ದೇವೆ. ನನ್ನ ಮನೆಗೆ ಯಾವುದೇ ಗೆಳೆಯರನ್ನು ಕೆರೆದುಕೊಂಡು ಬರಲು ನನಗೆ ಇಷ್ಟವಾಗುತ್ತಿಲ್ಲ. ಏನು ಮಾಡಲಿ ಹೇಳಿ?
- ಇಲ್ಲಿ ನಿಮ್ಮನ್ನು ಈ ದುಸ್ಥಿತಿಗೆ ತಂದಿರುವ ನಿಮ್ಮ ಮನೆಯ ಹಿರಿಯರಿಗೆ ಛೀಮಾರಿ ಹಾಕಬೇಕಾಗಿದೆ. ಯಾಕೆಂದರೆ, ನಿಮಗೆ ಇಷ್ಟವಿಲ್ಲದ ಮದುವೆಯನ್ನು ಅವರು ಮಾಡಿರುವುದು ಸರಿಯಲ್ಲ. ಅದೂ ಅಲ್ಲದೆ ರಕ್ತ ಸಂಬಂಧಿಗಳು ಮದುವೆಯಾಗು ವುದರಿಂದ ಹುಟ್ಟುವ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬುದನ್ನು ವಿಜ್ಞಾನ ಸಾಬೀತು ಪಡಿಸಿದೆ. ಇಷ್ಟೆಲ್ಲ ಗೊತ್ತಿರುವಾಗ ತಮ್ಮ ಜಬಾವ್ದಾರಿ ಕಡಿಮೆ ಮಾಡಿಕೊಳ್ಳಲು ನಿಮ್ಮ ಬದುಕನ್ನು ನರಕಕ್ಕೆ ದೂಡಿರುವುದು ಅವರು ಮಾಡಿರುವ ದೊಡ್ಡ ತಪ್ಪು. ಇದರ ಜತೆಗೆ ನೀವು ಕೂಡ ಕೆಲವೊಂದು ವಿಚಾರಗಳಲ್ಲಿ ಎಡವಿದ್ದೀರಿ. ಯಾಕೆಂದರೆ ಇನ್ನೊಬ್ಬರ ಒತ್ತಾಯಕ್ಕೆ ಮಣಿದು, ಏನೋ ಆಗುತ್ತದೆ ಎಂದು ಮದುವೆಗೆ ಒಪ್ಪಿಕೊಂಡು, ಈಗ ಬೇಡ ಅಂದರೆ ಅದನ್ನು ಹೇಗೆ ಒಪ್ಪಿಕೊಳ್ಳುವುದು? ನಿಮಗೆ ಮದುವೆ ಇಷ್ಟವಿಲ್ಲ ಎಂದಾದರೆ ಅದನ್ನು ಮೊದಲೇ ಹೇಳಿಬಿಡಬಹುದಿತ್ತು. ಆದರೆ, ಇಷ್ಟವಿಲ್ಲದಿದ್ದರೂ ಮದುವೆಯಾಗಿ ಜೀವನಪೂರ್ತಿ ನೋವು ಅನುಭವಿಸುವ ಪರಿಸ್ಥಿತಿ ನೀವು ತಂದುಕೊಂಡಿದ್ದೀರಿ. ಮದುವೆ ಬಳಿಕ ಅವಳು ಚೆನ್ನಾಗಿಲ್ಲ, ಅವಳನ್ನು ನಾನು ಮುಟ್ಟಿಲ್ಲ ಎಂದು ಹೇಳುತ್ತಾ ಕೂರುವುದರಿಂದ ಏನು ಲಾಭ ಹೇಳಿ? ನೀವು ಈಗ ಈ ಹುಡುಗಿ ಬೇಡ ಎಂದು ಬಿಟ್ಟು ಬೇರೆ ಮದುವೆಯಾದರೆ, ಅಕ್ಕನ ಮಗಳಾಗಿರುವ ಅವರಿಗ್ಯಾರು ಗತಿ? ನಿಮ್ಮ ಸಮಾಧಾನಕ್ಕೆ ಇನ್ನೊಂದು ವಿಚಾರ ಹೇಳುತ್ತೇನೆ ಕೇಳಿ. ಅಂದಚೆಂದ ಕಟ್ಟಿಕೊಂಡು ಯಾವ ಸಂಸಾರವು ಮಂದುವರಿದದ್ದಿಲ್ಲ. ಕೇವಲ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ಮಾಡುವುದರಿಂದ ಮಾತ್ರ ದಾಂಪತ್ಯ ಫಲಪ್ರದವಾಗುತ್ತದೆ. ಚಂದವಿಲ್ಲದ ಹುಡುಗಿಯನ್ನು ಮದುವೆಯಾಗಲು ಧೈರ್ಯ ಮಾಡಿದ್ದೇನೆ ಎನ್ನುವ ಹೆಮ್ಮೆ ಇರಲಿ. ಅಣ್ಣ ತಿರಸ್ಕರಿಸಿದ ಹುಡುಗಿಯಯನ್ನು ಮದೆವೆಯಾದೆನಲ್ಲ ಎನ್ನುವ ಕೀಳರಿಮೆ ಬೇಡ. ನೀವು ಇದೇ ರೀತಿ ಕೀಳರಿಮೆ ಇಟ್ಟುಕೊಂಡು ಆಕೆಯನ್ನು ಮನೆಯೊಳಗೆ ಇಟ್ಟರೆ ನೀವಿಬ್ಬರೂ ಉದ್ಧಾರವಾಗಲಿಕ್ಕಿಲ್ಲ. ಹೀಗಾಗಿ ನಿಮ್ಮ ಪತ್ನಿಯನ್ನು ಸುಧಾರಿಸುವ ಪ್ರಯತ್ನ ಮಾಡಿ. ಅವರನ್ನು ಹೊರಗೆ ಕರೆದುಕೊಂಡು ಹೋಗಿ. ಸುಂದರವಾದ ಬಟ್ಟೆ ಬರೆಗಳನ್ನು ಹಾಕಲು ಹೇಳಿ. ನಾಲ್ಕು ಜನರಲ್ಲಿ ಮಾತನಾಡಿಸಿ. ಕೆಲವು ದಿನಗಳಲ್ಲಿ ಅವರು ನಿಮ್ಮ ಬೇಡಿಕೆಗಳನ್ನೆಲ್ಲ ಪೂರೈಸುವ ಉತ್ತಮ ಪತ್ನಿಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ.
**
* ಸುನೀತಾ, ಬಾಗಲಕೋಟೆ
ಸರ್, ನನ್ನ ತಂದೆ ಕೇಂದ್ರ ಸರ್ಕಾರದ ಇಲಾಖೆಯೊಂದರಲ್ಲಿ ಕೆಲಸ ನಿರ್ವಹಿಸಿ ಈಗ ನಿವೃತ್ತಿಯಾಗಿದ್ದಾರೆ. ನಾವು ಮೂವರು ಮಕ್ಕಳು. ನನಗೆ ಇಬ್ಬರು ತಮ್ಮಂದಿರಿದ್ದಾರೆ. ನನ್ನ ಪ್ರಾಥಮಿಕ ವಿದ್ಯಾಭ್ಯಾಸದ ವೇಳೆ ಕಲಿಕೆಯಲ್ಲಿ ಸಾಕಷ್ಟು ಮುಂದಿದ್ದು, ಸುಮಾರು 9ನೇ ತರಗತಿ ತನಕವೂ ತರಗತಿಯಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಗಳಿಸುತ್ತಿದ್ದೆ. ಆದರೆ, ಎಸ್ಎಸ್ಎಲ್ಸಿಗೆ ಬಂದಾಗ ನನ್ನಲ್ಲಿದ್ದ ಆತ್ಮವಿಶ್ವಾಸ ಕುಸಿದು ಅಂಕಗಳಲ್ಲಿ ಕುಸಿತ ಪ್ರಾರಂಭವಾಯಿತು. ಕಷ್ಟಪಟ್ಟು ಆ ತರಗತಿಯನ್ನು ಮುಗಿಸಿದೆ. ಇದಕ್ಕಾಗಿ ತಂದೆಯಿಂದ ಬೈಗುಳ ಕೇಳಬೇಕಾಯಿತು. ಆನಂತರದಲ್ಲಿ ಕಲಿಕೆ ಎಂದರೆ ಅಲರ್ಜಿಯಾಗತೊಡಗಿತು. ಈ ನಡುವೆ ತಂದೆಗೆ ನಾನು ವಿಜ್ಞಾನವನ್ನೇ ಕಲಿಯಬೇಕು ಎನ್ನುವ ಒತ್ತಾಸೆ. ಅದಕ್ಕೆ ಪಿಯುಸಿಯಲ್ಲಿ ವಿಜ್ಞಾನವನ್ನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡೆ. ಅಲ್ಲಿಂದ ಮೇಲಿನ ನನ್ನ ಕಷ್ಟ ಹೇಳಿತೀರದು. ಎರಡನೇ ವರ್ಷದಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿ, ಒಂದು ವರ್ಷ ವ್ಯರ್ಥವಾಯಿತು. ಸಪ್ಲಿಮೆಂಟರಿ ಪರೀಕ್ಷೆ ಮೂಲಕ ಪಾಸಾಗಿ ಡಿಗ್ರಿಗೆ ಹೋದೆ. ಅಲ್ಲೂ ಅಂತಿಮವಾಗಿ ನಾಲ್ಕು ವಿಷಯಗಳು ತೇರ್ಗಡೆಯಾಗದೆ ಬಾಕಿ ಉಳಿದವು. ನಂತರದ ವರ್ಷದಲ್ಲಿ ಅದನ್ನು ಪೂರ್ತಿ ಮಾಡಿದೆ. ನನ್ನ ತಂದೆಯ ವಿಜ್ಞಾನ ಆಸೆ ಮುಗಿಯದ ಕಾರಣ ಇಂಡಸ್ಟ್ರಿಯಲ್ ಕೆಮೆಸ್ಟ್ರಿಯಲ್ಲಿ ಫಿಝಿಕ್ಸ್ ಎಂಎ ಮುಗಿಸಿದೆ. ಇಲ್ಲೂ ಒಳ್ಳೆಯ ಅಂಕಗಳು ಬರಲಿಲ್ಲ. ಹೀಗಾಗಿ ಉದ್ಯೋಗ ದೊರೆಯಲಿಲ್ಲ. ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರೂ ಏನೂ ಲಾಭವಾಗಿಲ್ಲ. ಈಗ ತಂದೆಯವರು ವಿಜ್ಞಾನದಲ್ಲಿ ಬಿ.ಎಡ್ ಮಾಡು ಎಂದು ಒತ್ತಾಯ ಮಾಡುತ್ತಿದ್ದಾರೆ. ಅದಕ್ಕಾಗಿ ಎಲ್ಲ ತಯಾರಿಯೂ ನಡೆದಿದೆ. ಆದರೆ ನನಗೆ ಕಲಿಕೆ ಮುಂದುವರಿಸಲು ಮನಸ್ಸಿಲ್ಲ. ಎಲ್ಲಾದರೂ ಓಡಿಹೋಗೋಣ ಎಂದು ಅನಿಸುತ್ತದೆ. ಏನು ಮಾಡಲಿ?
- ನಿಮಗೆ ಹೈಸ್ಕೂಲ್ ನಂತರದಲ್ಲಿ ಉತ್ತಮ ಅಂಕ ಸಿಗದಿರುವುದಕ್ಕೆ ಓದಿನಲ್ಲಿ ನಿಮಗೆ ಉಂಟಾದ ನಿರಾಸಕ್ತಿಯೇ ಕಾರಣ. ನಿಮ್ಮ ತಂದೆ ಕಲಿಯಲೆಂದು ಹಾಕುತ್ತಿದ್ದ ಅನಗತ್ಯ ಮತ್ತು ಅನಾರೋಗ್ಯಕರ ಒತ್ತಡದಿಂದಾಗಿ ನಿಮಗೆ ಈ ರೀತಿ ಆಗಿದೆ ಎನ್ನುವುದು ನಿಸ್ಸಂಶಯ. ಯಾಕೆಂದರೆ, ಸಾಕಷ್ಟು ಹೆತ್ತವರು ತಮ್ಮ ಮಕ್ಕಳಿಗೆ ಓದು ಎಂದು ಸಿಕ್ಕಾಬಟ್ಟೆ ಒತ್ತಾಯ ಮಾಡಿರುವುದರಿಂದ ಮಕ್ಕಳು ಕಲಿಕೆಯಲ್ಲಿನ ಆಸಕ್ತಿಯನ್ನೇ ಕಳೆದುಕೊಂಡ ಪ್ರಸಂಗಗಳು ನಮ್ಮ ಮುಂದಿವೆ. ಆದರೆ, ಪಿಯುಸಿ ನಂತರದಲ್ಲಿ ಆದ ಸೋಲಿಗೆ ನೀವೂ ಸ್ವಲ್ಪ ಕಾರಣರಾಗುತ್ತೀರಿ. ಯಾಕೆಂದರೆ, ಒಂದು ಬಾರಿಯ ಸೋಲನ್ನು ನೀವು ಹಿನ್ನಡೆ ಎಂದು ಭಾವಿಸಿಕೊಂಡು ಅದರ ಹಿಂದೆಯೇ ಸಾಗುತ್ತಾ ಹೋದಿರಿ. ಹೀಗಾಗಿ ಪಿಯುಸಿ, ಡಿಗ್ರಿ ಎಲ್ಲ ಕಡೆಯೂ ನೀವು ಎರಡೆರಡು ವಿಷಯಗಳನ್ನು ಉಳಿಸಿಕೊಂಡಿರಿ. ಹೀಗಾಗಿ ನಿಮ್ಮ ಜೀವನದ ಅಮೂಲ್ಯ ಎರಡು ವರ್ಷಗಳು ನಷ್ಟವಾದವು ಎನ್ನುವ ಆತಂಕ ಈಗಲೂ ಇದೆ. ಇದರ ಮಧ್ಯೆ ನಿಮ್ಮ ತಂದೆಗೆ ಅವರ ನಿರೀಕ್ಷೆಗಳನ್ನು ನೀವು ಪೂರೈಸಲಿಲ್ಲ ಎನ್ನುವ ನಿರಾಶೆ ಇದೆ ಎನ್ನುವುದನ್ನು ಅವರು ಮಾಡುತ್ತಿರುವ ಒತ್ತಾಯದಿಂದ ತಿಳಿಯಬಹುದು. ಅದಕ್ಕಾಗಿ ಮತ್ತೆ ಮತ್ತೆ ಏನಾದರೂ ಒಂದು ವಿಷಯವನ್ನು ಕಲಿತು ಉದ್ಯೋಗ ಪಡೆಯಲಿ ಎಂದು ಬೇರೆ ಬೇರೆ ತರಗತಿಗಳಿಗೆ ಸೇರಿಸುತ್ತಿದ್ದಾರೆ. ಈಗ ಅದೆಲ್ಲ ಹಳೆ ವಿಷಯ. ಭೂತಕಾಲದ ಎಲ್ಲ ಘಟನೆಗಳನ್ನೂ ಬಿಟ್ಟುಬಿಡಿ. ಎಲ್ಲಾದರೂ ಓಡಿಹೋಗುವ ಆಲೋಚನೆಯನ್ನೂ ಕೈಬಿಡಿ. ಈಗ ಒಂದು ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯವ ಅವಕಾಶ ನಿಮಗೆ ಸಿಕ್ಕಿದೆ, ಬಳಸಿಕೊಳ್ಳಿ. ಮೊದಲನೆಯದು ನೀವೀಗ ಬಿ.ಎಡ್ಗೆ ಸೇರಿಕೊಳ್ಳುವುದು ಅನಿವಾರ್ಯ. ಏಕೆಂದರೆ, ನೀವಿನ್ನೂ ಬಾಳಿ ಬದುಕಬೇಕಾಗಿದೆ. ಹೀಗಾಗಿ ಅಲ್ಲಿ ಉತ್ತಮ ಅಂಕಗಳನ್ನು ತೆಗೆದು ಎಲ್ಲಾದರೂ ಉದ್ಯೋಗ ಪಡೆಯುವ ನಿರ್ಧಾರ. ಎರಡನೆಯದು ನಿಮ್ಮ ಹಿಂದಿನ ಅಂಕಗಳಿಂದ ನಿರಾಶೆ ಹೊಂದಿರುವ ನಿಮ್ಮ ತಂದೆಯವರ ನಿರೀಕ್ಷೆಗೆ ತಕ್ಕಂತೆ ಮಾರ್ಕ್ಸ್ ತೆಗೆದು ಉದ್ಯೋಗವೊಂದನ್ನು ಪಡೆಯುವುದು. ಅದಕ್ಕಾಗಿ ಇಂದಿನಿಂದಲೇ ನೀವು ಮತ್ತೆ ಉತ್ಸಾಹದಿಂದ ಕೆಲಸ ಮಾಡಬೇಕಿದೆ. ಪ್ರತಿಫಲ ದೊರೆತೇ ದೊರೆಯುತ್ತದೆ. ಮುಂದೆ ಅವಕಾಶ ಸಿಕ್ಕಾಗ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನಾದರೂ ಹೊಸ ಹುಮ್ಮಸ್ಸಿನಿಂದ ಬರೆಯಿರಿ. ಒಮ್ಮೆ ನಿಮಗೆ ಆತ್ಮವಿಶ್ವಾಸ ಮೂಡಿದರೆ ಮತ್ತೆಂದೂ ಹಿನ್ನಡೆಯಾಗದು. ನಿಮ್ಮನ್ನು ನೀವೇ ನಂಬಲಾಗದಷ್ಟು ಬದಲಾಗುವುದು ಖಂಡಿತ.
ಪ್ರೈವೇಟ್ ಕಂಪನಿ
ನನ್ನಂತಹ ಹಲವರ ಪರವಾಗಿ ನಿಮ್ಮೊಂದಿಗೆ ನನ್ನ ನೋವನ್ನು ತೋಡಿಕೊಳ್ಳುತ್ತಿದ್ದೇನೆ. ಇದು ಎಲ್ಲ ನಿರದ್ಯೋಗಿ ಯುವಕ- ಯುವತಿಯರ ನೋವಿನ ಕತೆಯೂ ಆಗಿದೆ. ಎಲ್ಲೂ ಉದ್ಯೋಗ ಇಲ್ಲ ಎಂದಾದ ಸಮಯದಲ್ಲಿ ಪತ್ರಿಕೆಯೊಂದರಲ್ಲಿ ಜಾಬ್ ಅನ್ನುವ ಹೆಸರಲ್ಲಿ ಬಂದಿರುವ ಜಾಹೀರಾತು ಬಹಳ ಆಕರ್ಷಿಸಿತ್ತು. ಮರುದಿನವೇ ಅಲ್ಲಿಗೆ ಹೋದ ನನಗೆ ಮಾರ್ಕೇಟಿಂಗ್ ಕೆಲಸ ಮಾಡುವಂತೆ ಹೇಳಿದರು. ಇದೂ ಮೋಸದ ವ್ಯಾಪಾರವಾಗಿದೆ. 50 ರೂಪಾಯಿಯ ವಸ್ತುಗಳನ್ನು 150 ರೂಪಾಯಿಗೆ ಮಾರುವ ರೀತಿಯ ವ್ಯವಹಾರ. ನನ್ನಂತೆಯೇ ಎಸ್ಎಸ್ಎಲ್ಲಸಿ, ಪಿಯುಸಿ, ಡಿಗ್ರಿ ಹೀಗೆ ವಿವಿಧ ಪದವಿಗಳನ್ನು ಮುಗಿಸಿ ಉದ್ಯೋಗ ಸಿಗದ ಹಲವರು ಇದ್ದರು. ಈ ವಂಚನೆ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಸರ್ಕಾರಿ ಕೆಲಸಲ್ಲಿ ಇದ್ದವರಿಗೆ ಹೋಗಿ ಟೋಪಿ ಹಾಕುವ ಕಲೆಯನ್ನು ನಮಗೆ ಹೇಳಿಕೊಡುತ್ತಾರೆ. ಇದು ತಪ್ಪು ಅನ್ನುವುದು ನಮಗೆ ಗೊತ್ತಿದ್ದರೂ ಹೊರಬರಲು ನಮ್ಮ ಬಡತನ ಮತ್ತು ನಿರದ್ಯೋಗ ಬಿಡುತ್ತಿಲ್ಲ. ಅದೇ ರೀತಿ ಇಲ್ಲಿ ಹಿರಿಯ ಕೆಲವು ಅಧಿಕಾರಿಗಳು ಎನಿಸಿದವರು ಯುವತಿಯರ ಮೇಲೆ ಕಾಮದ ಕಣ್ಣು ಬೀರುತ್ತಾರೆ. ಅಂತವರ ಕಾಟ ತಾಳಲಾರದೆ ಸಾಕಷ್ಟ ಮಂದಿ ಉದ್ಯೋಗ ಬಿಟ್ಟದ್ದು ಇದೆ. ನನ್ನಂತವರು ಬಡತದ ಕಾರಣಕ್ಕಾಗಿ ಅವರ ಕಿರುಕುಳವನ್ನು ಸಹಿಸಿಕೊಂಡು ಅಲ್ಲಿಯೇ ಇದ್ದೇವೆ. ಈ ಬಗ್ಗೆ ಕಂಪನಿಯ ಮಾಲೀಕ ಎನಿಸಿಕೊಂಡವರಿಗೆ ಗೊತ್ತಿದ್ದರೂ ಅವರು ಸುಮ್ಮನಿದ್ದಾರೆ. ಇಂತವರಿಗೆ ಶಿಕ್ಷೆ ನೀಡಲು ಆಗುವುದಿಲ್ಲವೇ? ಪರಿಹಾರ ಏನು?
ನಿಮ್ಮ ಅಳಲಿಗೆ ನಾವು ಕೊಡುವ ಉತ್ತರ, ನಿಮ್ಮ ಹಾಗೆ ವಂಚನೆಯ ಜಾಲದಲ್ಲಿ ಸಿಕ್ಕಿರುವ ಹಲವು ಯುವಕ, ಯುವತಿಯರಿಗೆ ಪರಿಹಾರವನ್ನು ನೀಡಬಲ್ಲುದು ಎಂಬುದು ನಮ್ಮ ಭಾವನೆ. ನಿಮ್ಮನ್ನೂ ಸೇರಿಸಿ ನಿಮ್ಮಂತಹ ಹಲವರ ಬಗ್ಗೆ ನೀವು ಕಾಳಜಿ ವಹಿಸಿರುವುದಕ್ಕೆ ಮೊದಲು ಅಭಿನಂದನೆಗಳು. ನಿಮಗೆ ಪರಿಹಾರ ಹೇಳುವುದಾದರೆ, ಕಿರುಕುಳ ಸಹಿಸಿಕೊಂಡು ಯಾವ ಕಾರಣಕ್ಕೂ ಅಲ್ಲಿ ಇರಲು ಹೋಗಬೇಡಿ. ತಕ್ಷಣಕ್ಕೆ ಆ ಕಂಪನಿ ಬಿಟ್ಟು, ಕಡಿಮೆ ಸಂಬಳವಾದರೂ ಸರಿ ಉತ್ತಮ ಕೆಲಸದ ವಾತಾವರಣ ಇರುವ ಕಡೆ ಸೇರಿಕೊಳ್ಳಿ. ಇದನ್ನು ಬಿಟ್ಟು ಬೇರೆ ಯಾವುದೇ ಕಡೆ ಕೆಲಸ ಸಿಗುವುದಿಲ್ಲ ಎಂದು ಅಂದುಕೊಳ್ಳಬೇಡಿ. ಪ್ರಯತ್ನವನ್ನು ಮುಂದುವರಿಸಿ. ಯಶಸ್ವಿ ಆಗಿಯೇ ಆಗುತ್ತೀರಿ. ಅದೇ ರೀತಿ ನಿಮ್ಮ ಜತೆ ಇನ್ನೂ ಹಲವಾರು ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದೀರಿ. ಅವರಿಗೂ ತಾವು ಮೋಸ ಹೋಗಿರುವ ಬಗ್ಗೆ ಅರಿವು ಇರಬಹುದು. ಅವರಿಗೂ ಕೆಲಸ ಬಿಟ್ಟು ಹೋಗುವಂತೆ ಹೇಳಿ. ಅದೇ ರೀತಿ ಇನ್ನು ಮುಂದೆ ಅಲ್ಲಿಗೆ ಯಾರಾದರೂ ಕೆಲಸಕ್ಕೆ ಸೇರುತ್ತಾರೆ ಎಂದು ಗೊತ್ತಾದರೂ ಅವರಿಗೆ ಪರಿಸ್ಥಿತಿಯನ್ನು ವಿವರಿಸಿ ಅವರ ಬದುಕನ್ನು ಉಳಿಸುವ ಕೆಲಸ ನಿಮ್ಮ ಮುಂದಾಳತ್ವದಲ್ಲೇ ಆಗಲಿ. ಮತ್ತೆ ಹೆಣ್ಣುಬಾಕ ನಿಮ್ಮ ಬಾಸ್ಗೆ ಶಿಕ್ಷೆಯಾಗುವುದಿಲ್ಲವೇ ಎಂದು ಕೇಳುತ್ತೀರಿ. ನಿಮ್ಮಂತವರು ಅದರ ಬಗ್ಗೆ ದೂರು ಕೂಡದೆ ಅಥವಾ ಪ್ರತಿಭಟನೆ ಮಾಡದೆ, ಶಿಕ್ಷೆ ಕೊಡಲು ಯಾರಿಗೂ ಸಾಧ್ಯವಿಲ್ಲ. ಮತ್ತೆ ನಿಮ್ಮ ಬಾಸ್ಗೆ ಇದರ ಬಗ್ಗೆ ಗೊತ್ತಿದ್ದರೂ ಸುಮ್ಮನಿರುವುದಕ್ಕೆ ಅವರು ಕೂಡಾ ಇದರಲ್ಲಿ ಶಾಮೀಲಾಗಿರುವುದು ಕಾರಣವಾಗಿರುತ್ತದೆ. ಅವರಿಗೆ ಈ ರೀತಿಯ ಅಕ್ರಮ ವ್ಯವಹಾರ ನಡೆಸಲು ಅಂತಹ ಬಾಸ್ನ ಸಹಾಯ ಇರಲೇಬೇಕು. ಇನ್ನೊಬ್ಬರಿಗೆ ಮೋಸ ಮಾಡುವಂತೆ ನಿಮಗೆ ಅಷ್ಟು ಸ್ಪಷ್ಟ್ವಾಗಿ ಹೇಳವ ಆತನನ್ನು ಮಾಲೀಕ ಯಾವ ಕಾರಣಕ್ಕೂ ಕೈ ಬಿಡಲಾರ. ಇನ್ನು ನಿಮ್ಮಂತಹ ಜನರ ಬಗ್ಗೆ ಸಾಮೂಹಿಕವಾಗಿ ಹೇಳುವುದಾದರೆ, ಪತ್ರಿಕೆಗಳಲ್ಲಿ, ಪತ್ರಿಕೆಗಳ ಸೀಟಿನ ಹಿಂದೆ ಹೀಗೆ ಆಕರ್ಷಣೀಯ ವೇತನದೊಂದಿಗೆ ಉದ್ಯೋಗ ಅನ್ನುವ ಜಾಹೀರಾತನ್ನು ನೋಡಿದ ತಕ್ಷಣ ಇನ್ನು ಮುಂದೆ ಅವುಗಳನ್ನು ಹುಡುಕುತ್ತಾ ಹೋಗಬಾರದು. ಆ ರೀತಿಯ ಒಂದು ಕಂಪನಿ ಇದೆಯೋ ಇಲ್ಲವೋ ಎಂಬುದನ್ನು ಮೊದಲು ಅರಿತು ಆ ಬಳಿಕವಷ್ಟೇ ಅರ್ಜಿ ಗುಜರಾಯಿಸಿ. ಅದೇ ರೀತಿ ಕೆಲವು ನಯವಂಚಕರು ಯುವಕರ ಎಸ್ಎಸ್ಎಲ್ಸಿ ಅಂಕಪಟ್ಟಿಯ ಮೂಲ ಪ್ರತಿಯನ್ನೇ ಕೊಡಬೇಕು ಎಂದು ಕೇಳುತ್ತಾರೆ. ನಂತರದಲ್ಲಿ ಅವುಗಳನ್ನು ವಾಪಸ್ ಕೊಡದೆ ಜೀವನ ಪರ್ಯಂತ ನೀವು ಕೆಲಸ ಬಿಟ್ಟು ಹೋಗದ ಹಾಗೆ ಶೋಷಣೆ ಮಾಡುತ್ತಾರೆ. ಅತ್ತ ಸಂಬಳವೂ ಇಲ್ಲ ಇತ್ತ ಮೂಲಕ ಅಂಕ ಪ್ರತಿಯೂ ಇಲ್ಲ ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿ ನೀವು ಇರುವಂತಾದೀತು. ಹೀಗಾಗಿ ಮೂಲ ಅಂಕ ಪ್ರತಿಯನ್ನು ಕೊಡುವ ತಪ್ಪು ಮಾಡಬೇಡಿ. ಯಾವುದೇ ಕಂಪನಿಯು ಅಂಕಪಟ್ಟಿಯ ಮೂಲ ಪ್ರತಿಯನ್ನು ಇಟ್ಟುಕೊಳ್ಳುವುದಿಲ್ಲ. ಅಟೆಸ್ಟೆಡ್ ಕಾಪಿಯನ್ನು ಮೊದಲಿಗೆ ಕೇಳುತ್ತಾರೆ. ಕೆಲಸಕ್ಕೆ ಆಯ್ಕೆಯಾದಿರಿ ಎಂದಾದರೆ ನಂತರದ ಅದು ಹೊಂದಾಣಿಕೆಯಾಗುತ್ತದೋ ಎಂಬುದನ್ನು ಪರಿಶೀಲಿಸುತ್ತಾರೆ. ಅದೇ ರೀತಿ ಒಂದೆರಡು ತಿಂಗಳು ಕೆಲಸ ಮಾಡಿದ ಮೇಲೆ ಸಂಬಳ ಕೊಟ್ಟಿಲ್ಲ ಎಂದಾದರೆ, ಮತ್ತೆ ಅಲ್ಲಿ ನಿಲ್ಲುವ ಸಾಹಸಕ್ಕೆ ಕೈ ಮಾಡಬೇಡಿ. ಸಂಬಳ ಕೊಡಿ, ನಂತರ ಕೆಲಸ ಮಾಡುತ್ತೇವೆ ಎಂದು ಹೇಳಿ. ಇಂತಹ ಸಂದರ್ಭದಲ್ಲಿ ಒಗಟ್ಟು ಪ್ರದರ್ಶಿಸಿ. ನಿಮಗೆ ಕೆಲವು ಸರ್ಕಾರಿ ಇಲಾಖೆಗಳು ಅಥವಾ ಸಮಾಜ ಸೇವಾ ಸಂಸ್ಥೆಗಳು ನೆರವು ಕೊಡಬಲ್ಲುದು. ಕಾನೂನಿನ ಮೂಲಕ ಹೋರಾಟ ನಡೆಸಿ. ವಂಚಕರನ್ನು ಸದೆಬಡಿಯಿರಿ. ನಿಮ್ಮಂತಹ ಯುವಕರು ಬಲಿಪಶು ಆಗುವುದನ್ನು ತಪ್ಪಿಸಿ.
* ನವೀನ (ಉಪ್ಪಿ) ನಾಗಮಂಗಲ
ಸರ್ ಚಿಕ್ಕಂದಿನಿಂದಲೇ ನಾನು ಕಲಿಯುವುದರಲ್ಲಿ ಬುದ್ಧಿವಂತ ಹುಡುಗ. ಎಸ್ಎಸ್ಎಲ್ಸಿ ಉತ್ತಮ ಅಂಕ ಗಳಿಸಿದ ನಾನು ಪಿಯುಸಿಯಲ್ಲಿ ಕಾಮರ್ಸ್ ವಿಷಯ ಆಯ್ಕೆ ಮಾಡಿಕೊಂಡೆ. ಪ್ರಾರಂಭದಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ನನ್ನನ್ನು ಹುಡುಗಿಯೊಬ್ಬಳು ಪ್ರೀತಿಸುತ್ತೇನೆ ಎಂದು ಹೇಳಿದರು. ಅದನ್ನು ನಂಬಿಕೊಂಡು, ಪ್ರೀತಿಯ ಬಲೆಯಲ್ಲಿ ಬಿದ್ದ ನಾನು ಕಲಿಯುವುದರಲ್ಲಿ ಆಸಕ್ತಿ ಕಳೆದುಕೊಂಡೆ. ಪರೀಕ್ಷೆ ಹತ್ತಿರ ಬಂದರೂ, ಆ ಹುಡುಗಿಗೆ ಪತ್ರ ಬರೆಯುತ್ತಾ, ಎಸ್ಎಂಎಸ್ ಕಳಿಸುತ್ತಾ ಸಮಯ ಕಳೆದೆ. ಹೀಗಾಗಿ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಫೇಲಾದೆ. ಆದರೆ, ಆ ಹುಡುಗಿ ಪಾಸಾಗಿ ಡಿಗ್ರಿಗೆ ಸೇರಿಕೊಂಡಳು. ನಾನು ಫೇಲಾದಕ್ಕೆ ನನ್ನನ್ನು ತಿರಸ್ಕರಿಸಿದ ಆಕೆ ನಂತರದಲ್ಲಿ ಬೇರೆ ಯಾರದ್ದೋ ಬೆನ್ನು ಹತ್ತಿದಳು. ಆದರೆ,ನನಗಾದ ಪರಿಸ್ಥಿತಿಯಿಂದಾಗಿ ಸಿಕ್ಕಾಪಟ್ಟೆ ನೊಂದುಕೊಂಡೆ. ಜೀವನದ ಮೇಲಿನ ಆಸಕ್ತಿಯೇ ನಾಶವಾಗಿದೆ. ನಂತರದಲ್ಲಿ ಹಲವು ಬಾರಿ ಪರೀಕ್ಷೆ ಬರೆಯಲು ಪ್ರಯತ್ನಿಸದರೂ ಶ್ರಮವೆಲ್ಲ ವ್ಯರ್ಥವಾಯಿತು. ಈಗ ಬೇರೆ ದಾರಿ ಇಲ್ಲದೆ, ಪ್ರಿಟೆಂಕ್ಸ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೇನೆ. ಆ ಹುಡುಗಿಯನ್ನು ಮರೆಯಬೇಕು ಮತ್ತೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಅನಿಸುತ್ತಿದೆ. ಆದರೆ, ಅದು ಆಗುತ್ತಿಲ್ಲ. ಏನು ಮಾಡುವಾಗಲೂ ಆಕೆಯೇ ಅಡ್ಡ ಬಂದು ನಿಲ್ಲುತ್ತಾಳೆ. ನೀವೇ ದಾರಿ ತೋರಿಸಿ ಪ್ಲೀಸ್.
ನಿಮ್ಮ ಈ ದುಃಸ್ಥಿತಿ ಕಲಿಕೆಯ ವೇಳೆಯನ್ನು ಇನ್ಯಾವುದಕ್ಕೋ ಬಳಸುತ್ತಿರುವ ವಿದ್ಯಾರ್ಥಿಗಳಿಗೆ ಪಾಠ ಎಂದು ನಾವು ಹೇಳುತ್ತೇವೆ. ಯಾಕೆಂದರೆ, ನಿಮ್ಮ ಬಗ್ಗೆ ಕಾಳಜಿ ವಹಿಸಿಕೊಂಡಿರುವ ಸಾಕಷ್ಟು ಹಿರಿಯರು ಕಲಿಯುವ ವೇಳೆಯಲ್ಲಿ ಕಲಿಯಿರಿ, ಪ್ರೀತಿ, ಪ್ರೇಮ ಎಂದು ಬಲಿ ಬೀಳಬೇಡಿ ಎಂದು ಎಷ್ಟೇ ಹೇಳಿದರೂ ನೀವು ಅದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಬದುಕಿನಲ್ಲಿ ಸೋತು ಹೋದೆ ಎಂದು ಅನಿಸುವಾಗ ಅವರನ್ನು ನೆನಪಿಸಿಕೊಳ್ಳುತ್ತೀರಿ. ಆ ವೇಳೆಗಾಗಲೇ ಎಲ್ಲವೂ ಮುಗಿದು ಹೋಗಿರುತ್ತದೆ. ನಿಮ್ಮ ಕತೆಯೂ ಅದೇ ಆಗಿದೆ. ಪಿಯುಸಿಯಲ್ಲಿ ಹುಡುಗಿಯನ್ನು ಪ್ರೀತಿಸಿದೆ ಎಂದು ಹೇಳುತ್ತಿದ್ದೀರಿ. ಅದು ನಿಜವಾದ ಪ್ರೀತಿಯಾಗಿತ್ತೇ ಎಂದು ಈಗ ಯೋಚಿಸಿ ನೋಡಿ. ಖಂಡಿತಾವಾಗಿಯೂ ಆಗಿರುವುದಿಲ್ಲ. ಪ್ರೀತಿ ಅನ್ನುವುದರ ವಾಖ್ಯಾನವನು ್ನಸರಿಯಾಗಿ ತಿಳಿಯದ ಆ ವಯಸ್ಸಲ್ಲಿ ನಿಮ್ಮದು ಪವಿತ್ರ ಪ್ರೇಮವಾಗಿರುವುದೇ ಕೇವಲ ವಯಸ್ಸಿನ ಆಕರ್ಷಣೆಯಾಗಿರುತ್ತದೆ. ನಿಮ್ಮ ಹಾಗೆ ಸಾಕಷ್ಟು ವಿದ್ಯಾರ್ಥಿಗಳು ಇಂತಹ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ಕೆಲವರ ಮನಸ್ಸು ಗಟ್ಟಿ ಇರುತ್ತದೆ. ಸುಧಾರಿಸಿಕೊಳ್ಳುತ್ತಾರೆ. ನಿಮ್ಮಂತವರು ಮಾತ್ರ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಪ್ರೀತಿ ಎನ್ನುವ ಹೆಸರಿನ ಆಕರ್ಷಣೆಗೆ ಬಿದ್ದಿರುವ ನೀವು ಓದಿನ ಮೇಲಿನ ಆಕರ್ಷಣೆ ಕೆಳೆದುಕೊಂಡು ಬದುಕಿನಲ್ಲಿ ಹಿನ್ನಡೆ ಅನುಭವಿಸಿದಿರಿ. ಸರಿ. ಈಗ ಎಲ್ಲವೂ ಆಗಿ ಹೋಗಿದೆ. ಹೀಗಾಗಿ ಅದನ್ನೇ ನೆನಪಿಸುತ್ತಾ ಕೂರುವುದರಿಂದ ನಿಮ್ಮ ಬದುಕು ಇನ್ನಷ್ಟು ಅಧೋಗತಿಯತ್ತ ಸಾಗುತ್ತದೆ. ಹೀಗಾಗಿ ಆಗಿರುವ ಘಟನೆಗಳನ್ನು ಮರೆತುಬಿಡಿ. ಅವಳ್ಯಾರೋ, ನೀವ್ಯಾರೋ ಎಂದು ಅಂದುಕೊಳ್ಳಿ. ಮತ್ತೆ ಜೀವನದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ. ಏಕಾಗ್ರತೆಯಿಂದ ಮತ್ತೊಮ್ಮೆ ಪರೀಕ್ಷೆ ಬರೆದು ಪಾಸಾಗುವ ದೃಢ ನಿರ್ಧಾರವನ್ನು ತೆಗೆದುಕೊಳ್ಳಿ. ಮತ್ತೆ ಜಯಿಸುವಂತಹ ಮನಸ್ಸು ನಿಮ್ಮದಾಗಲಿ. ಪರೀಕ್ಷೆಗಳನ್ನು ಬರೆದು ಪಾಸಾಗಿ ಒಂದು ಒಳ್ಳೆಯ ಕಡೆ ಕೆಲಸಕ್ಕೇ ಸೇರಿಕೊಳ್ಳಿ. ಸುಂದರ ಬದುಕು ನಿಮ್ಮದಾಗುವುದು.
* ಅಶ್ವಥ್, ಕೋಲಾರ
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಾನು ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಅವಳಿಗೆ ನಾನೆಂದರೆ ಪಂಚಪ್ರಾಣ. ನನಗೂ ಅವಳನ್ನು ಬಿಟ್ಟಿರಲು ಆಗುತ್ತಿಲ್ಲ. ಅವಳಿಗೆ ಸಿಗರೇಟು ಸೇದುವುದು, ಮದ್ಯಪಾನ ಮಾಡುವುದು ಅಂದರೆ ಅಲರ್ಜಿ. ಅಂಥವರು ಕೆಟ್ಟವರೆಂದೇ ಹೇಳುತ್ತಾಳೆ. ನನಗೆ ವಾರಕ್ಕೊಮ್ಮೆ ಗೆಳೆಯರ ಜತೆ ಸೇರಿ ಪಾರ್ಟಿ ಮಾಡುವ ಅಭ್ಯಾಸ ಇದೆ. ಈ ವೇಳೆ ಸ್ವಲ್ಪ ಮಟ್ಟಿಗೆ ಬಿಯರ್ ಕುಡಿಯುತ್ತೇನೆ. ಕಚೇರಿಯಲ್ಲಿನ ಒತ್ತಡ ನಿವಾರಣೆಗೆಂದು ದಿನಕ್ಕೊಂದು ಸಿಗರೇಟು ಸೇದುವುದೂ ಕೂಡಾ ಇದೆ. ಇದು ನನ್ನ ಹುಡುಗಿಗೆ ಗೊತ್ತಾಗಿ ಸಿಕ್ಕಾಪಟ್ಟೆ ರಂಪ ಮಾಡಿದ್ದಳು. ನಂತರ ಅವಳಿಗೆ ಇನ್ನು ಮುಂದೆ ಕುಡಿಯುವುದಿಲ್ಲ ಎಂದು ಮಾತು ಕೊಟ್ಟ ಮೇಲೆ ಸಮಾಧಾನಗೊಂಡಿದ್ದಳು. ಅದಾದ ನಂತರವೂ ಒಂದು ದಿನ ಗೆಳೆಯರ ಒತ್ತಾಯಕ್ಕೆ ಮಣಿದು ಮದ್ಯಪಾನ ಮಾಡಿದ್ದೆ. ಇದು ಅವಳಿಗೆ ಗೊತ್ತಾಗಿ ತೀವ್ರ ನೊಂದುಕೊಂಡು ಆಸ್ಪತ್ರೆ ಸೇರಿದ್ದಳು. ಈ ರೀತಿ ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ದೇವರ ಹೆಸರು ಹೇಳಿ ಪ್ರಮಾಣ ಮಾಡಿದ ಮೇಲೆ ಅವಳು ನಂಬಿದ್ದಾಳೆ. ಆದರೆ, ಅಷ್ಟು ಮಾಡಿದರೂ ನನಗೆ ಆಗಾಗ ಕುಡಿಯೋಣ, ಸಿಗರೇಟು ಸೇದೋಣ ಎಂದು ಅನಿಸುತ್ತದೆ. ವೈನ್ ಕುಡಿಯುತ್ತೇನೆ ಎಂದು ನನ್ನ ಹುಡುಗಿಯಲ್ಲಿ ಸಾವಿರ ಬಾರಿ ಕೇಳಿಕೊಂಡರೂ ಅವಳು ಅದಕ್ಕೆ ಅನುಮತಿ ಕೊಡುವುದಿಲ್ಲ. ನನಗೆ ಜೀವನವೇ ರೋಸಿ ಹೋಗಿದೆ. ಸರಿಯಾದ ಮಾರ್ಗ ಸೂಚಿಸಿ.
ಸದುದ್ದೇಶದ ಕೆಲಸ ಮಾಡುವಲ್ಲಿ ವಿಫಲವಾದಾಗ ಯಾವುದೇ ವ್ಯಕ್ತಿಯೂ ಒಮ್ಮೆ ಅಧೀರನಾಗುವುದು ಗೊತ್ತಿದೆ. ಆದರೆ, ಮಾಡುವುದು ದುರಭ್ಯಾಸ. ಅದಕ್ಕೂ ಹಠ ಹಿಡಿದು ಕೂರುತ್ತೀರಿ ಎಂದಾದರೆ ನೀವು ಬಹಳಷ್ಟು ಬದಲಾಗಬೇಕಿದೆ. ನೀವು ನಿಮ್ಮ ಹುಡುಗಿಯನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತೀರಿ ಎಂದು ಹೇಳುತ್ತೀರಿ. ಹಾಗಾದರೆ ಅವಳಿಗಾಗಿ ಕೆಲವನ್ನಾದರೂ ತ್ಯಾಗ ಮಾಡುವುದು ಆಗುವುದಿಲ್ಲವೇ. ಅಷ್ಟಕ್ಕೂ ಅವರು ನಿಮ್ಮಲ್ಲಿ ಊಟ, ನೀರು ಬಿಡಲು ಹೇಳಲಿಲ್ಲ ತಾನೆ. ಮದ್ಯಪಾನ, ಸಿಗರೇಟು ಬಿಡಿ ಎಂದು ತಾನೆ ಹಠ ಕಟ್ಟುವುದು. ಕುಡಿಯುವುದು, ಸಿಗರೇಟು ಸೇದುವುದರಿಂದ ಆರೋಗ್ಯಕ್ಕೆ ಹಾನಿ ಎಂದು ಎಲ್ಲರೂ ಹೇಳುತ್ತಾರೆ. ಹೀಗಾಗಿ ಅದನ್ನು ಬಿಟ್ಟರೆ ನಿಮಗೆ ಏನೂ ನಷ್ಟವಾಗದು. ಗೆಳೆಯರು ಒತ್ತಾಯ ಮಾಡುತ್ತಾರೆ, ಹೀಗಾಗಿ ಕುಡಿಯಲೇಬೇಕಾಗುತ್ತದೆ ಎಂದು ನೀವು ಹೇಳಿದರೆ ಅದನ್ನು ಹೇಗೆ ಸಮರ್ಥಿಸಿಕೊಳ್ಳಬಹುದು. ಗೆಳೆಯರು ಇನ್ಯಾವುದೋ ಕೆಟ್ಟ ಕೆಲಸ ಮಾಡಲು ಹೇಳುತ್ತಾರೆ. ಅದನ್ನೂ ನೀವು ಮಾಡುವಿರೇ. ಅವರಿಗೆ ಇಷ್ಟವಿದ್ದದ್ದನ್ನು ಅವರು ಮಾಡಿಕೊಳ್ಳಲಿ. ನೀವು ಅದಕ್ಕೆ ಯಾಕೆ ಬಲಿ ಬೀಳುತ್ತೀರಿ. ಇನ್ನು ಮುಂದೆ ಗೆಳೆಯರು ಹೇಳಿದರೆ, ಅದು ಸಾಧ್ಯವಿಲ್ಲ. ಇದರಿಂದ ನಮ್ಮ ಗಳೆತನಕ್ಕೆ ಅಡ್ಡಿಯಾದರೂ ತೊಂದರೆ ಇಲ್ಲ ಎಂದು ಹೇಳಿ. ಕೆಲವೊಂದು ದಿನ ತಮಾಷೆ ಮಾಡಿಯಾರು. ಕ್ರಮೇಣ ನಿಂತು ಹೋಗುತ್ತದೆ. ಅಷ್ಟಕ್ಕೂ ನೀವು ಮದ್ಯ ವ್ಯಸನಿ ಅಲ್ಲ. ಹೀಗಾಗಿ ಅದನ್ನು ಬಿಡುವುದು ಕಷ್ಟವಾಗದು. ಒಂದು ವೇಳೆ ಅದನ್ನು ಮೈಗಂಟಿಸಿಕೊಂಡಿದ್ದೀರಿ ಎಂದಾದರೆ, ಹತ್ತಿರದಲ್ಲೇ ಎಲ್ಲದರೂ ಮಧ್ಯವರ್ಜನಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಿ. ನಿಮ್ಮ ಹುಡುಗಿಗೆ ನಿಮ್ಮ ಬಗ್ಗೆ ಅಷ್ಟು ಕಾಳಜಿ ಇರುವುದರಿಂದ ಈ ರೀತಿ ಒತ್ತಾಯ ಮಾಡುತ್ತಾರೆ. ಅದನ್ನು ತಪ್ಪಾಗಿ ತಿಳಿದುಕೊಂಡು ಅವರ ಬಗ್ಗೆ ನಿಷ್ಠುರ ಅಭಿಪ್ರಾಯ ಇಟ್ಟುಕೊಳ್ಳಬೇಡಿ. ನಿಮ್ಮ ಜೀವನದ ಕೊನೆಯ ತನಕ ಬೇಕಾಗಿರುವುದು ನಿಮ್ಮ ಪ್ರೀತಿಯ ಹುಡುಗಿಯೇ. ಮದ್ಯದ ಬಾಟಲಿ ಅಲ್ಲ.
ಪ್ರೈವೇಟ್ ಕಂಪನಿ
ನನ್ನಂತಹ ಹಲವರ ಪರವಾಗಿ ನಿಮ್ಮೊಂದಿಗೆ ನನ್ನ ನೋವನ್ನು ತೋಡಿಕೊಳ್ಳುತ್ತಿದ್ದೇನೆ. ಇದು ಎಲ್ಲ ನಿರುದ್ಯೋಗಿ ಯುವಕ- ಯುವತಿಯರ ನೋವಿನ ಕತೆಯೂ ಆಗಿದೆ. ಎಲ್ಲೂ ಉದ್ಯೋಗ ಇಲ್ಲ ಎಂದಾದ ಸಮಯದಲ್ಲಿ ಪತ್ರಿಕೆಯೊಂದರಲ್ಲಿ ಜಾಬ್ ಅನ್ನುವ ಹೆಸರಲ್ಲಿ ಬಂದಿರುವ ಜಾಹೀರಾತು ಬಹಳ ಆಕರ್ಷಿಸಿತ್ತು. ಮರುದಿನವೇ ಅಲ್ಲಿಗೆ ಹೋದ ನನಗೆ ಮಾರ್ಕೆಟಿಂಗ್ ಕೆಲಸ ಮಾಡುವಂತೆ ಹೇಳಿದರು. ಇದೂ ಮೋಸದ ವ್ಯಾಪಾರವಾಗಿದೆ. 50 ರೂಪಾಯಿಯ ವಸ್ತುಗಳನ್ನು 150 ರೂಪಾಯಿಗೆ ಮಾರುವ ರೀತಿಯ ವ್ಯವಹಾರ. ನನ್ನಂತೆಯೇ ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ ಹೀಗೆ ವಿವಿಧ ಪದವಿಗಳನ್ನು ಮುಗಿಸಿ ಉದ್ಯೋಗ ಸಿಗದ ಲಕ್ಷಾಂತರ ಮಂದಿ ಇದ್ದಾರೆ. ಈ ವಂಚನೆ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಸರ್ಕಾರಿ ಕೆಲಸಲ್ಲಿ ಇದ್ದವರಿಗೆ ಹೋಗಿ ಟೋಪಿ ಹಾಕುವ ಕಲೆಯನ್ನು ನಮಗೆ ಹೇಳಿಕೊಡುತ್ತಾರೆ. ಇದು ತಪ್ಪು ಅನ್ನುವುದು ನಮಗೆ ಗೊತ್ತಿದ್ದರೂ ಹೊರಬರಲು ನಮ್ಮ ಬಡತನ ಮತ್ತು ನಿರುದ್ಯೋಗ ಬಿಡುತ್ತಿಲ್ಲ. ಅದೇ ರೀತಿ ಇಲ್ಲಿ ಹಿರಿಯ ಕೆಲವು ಅಧಿಕಾರಿಗಳು ಎನಿಸಿದವರು ಯುವತಿಯರ ಮೇಲೆ ಕಾಮದ ಕಣ್ಣು ಬೀರುತ್ತಾರೆ. ಅಂಥವರ ಕಾಟ ತಾಳಲಾರದೆ ಸಾಕಷ್ಟ ಮಂದಿ ಉದ್ಯೋಗ ಬಿಟ್ಟಿದ್ದೂ ಇದೆ. ನನ್ನಂಥವರು ಬಡತನದ ಕಾರಣಕ್ಕಾಗಿ ಅವರ ಕಿರುಕುಳವನ್ನು ಸಹಿಸಿಕೊಂಡು ಅಲ್ಲಿಯೇ ಇದ್ದೇವೆ. ಈ ಬಗ್ಗೆ ಕಂಪನಿಯ ಮಾಲೀಕ ಎನಿಸಿಕೊಂಡವರಿಗೆ ಗೊತ್ತಿದ್ದರೂ ಅವರೂ ಸುಮ್ಮನಿದ್ದಾರೆ. ಇಂತಹವರಿಗೆ ಶಿಕ್ಷೆ ನೀಡಲು ಆಗುವುದಿಲ್ಲವೇ? ಪರಿಹಾರ ಏನು?
- ನಮ್ಮ ಉತ್ತರ ನಿಮ್ಮ ಹಾಗೆ ವಂಚನೆಯ ಜಾಲದಲ್ಲಿ ಸಿಕ್ಕಿರುವ ಹಲವು ಯುವಕ-ಯುವತಿಯರಿಗೆ ಪರಿಹಾರವನ್ನು ನೀಡಬಲ್ಲುದು ಎಂಬುದು ನಮ್ಮ ಭಾವನೆ. ನಿಮ್ಮನ್ನೂ ಸೇರಿಸಿ ನಿಮ್ಮಂತಹ ಹಲವರ ಬಗ್ಗೆ ನೀವು ಕಾಳಜಿ ವಹಿಸಿರುವುದಕ್ಕೆ ಮೊದಲು ಅಭಿನಂದನೆಗಳು. ನಿಮಗೆ ಪರಿಹಾರ ಹೇಳುವುದಾದರೆ, ಕಿರುಕುಳ ಸಹಿಸಿಕೊಂಡು ಯಾವ ಕಾರಣಕ್ಕೂ ಅಲ್ಲಿ ಇರಲು ಹೋಗಬೇಡಿ. ತಕ್ಷಣಕ್ಕೆ ಆ ಕಂಪನಿ ಬಿಟ್ಟು, ಕಡಿಮೆ ಸಂಬಳವಾದರೂ ಸರಿ ಉತ್ತಮ ಕೆಲಸದ ವಾತಾವರಣ ಇರುವ ಕಡೆ ಸೇರಿಕೊಳ್ಳಿ. ಇದನ್ನು ಬಿಟ್ಟು ಬೇರೆ ಯಾವುದೇ ಕಡೆ ಕೆಲಸ ಸಿಗುವುದಿಲ್ಲ ಎಂದು ಅಂದುಕೊಳ್ಳಬೇಡಿ. ಪ್ರಯತ್ನವನ್ನು ಮುಂದುವರಿಸಿ. ಯಶಸ್ವಿ ಆಗಿಯೇ ಆಗುತ್ತೀರಿ. ಅದೇ ರೀತಿ ನಿಮ್ಮ ಜತೆ ಇನ್ನೂ ಹಲವಾರು ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದೀರಿ. ಅವರಿಗೂ ತಾವು ಮೋಸ ಹೋಗಿರುವ ಬಗ್ಗೆ ಅರಿವು ಇರಬಹುದು. ಅವರಿಗೂ ಕೆಲಸ ಬಿಟ್ಟು ಹೋಗುವಂತೆ ಹೇಳಿ. ಅದೇ ರೀತಿ ಇನ್ನು ಮುಂದೆ ಅಲ್ಲಿಗೆ ಯಾರಾದರೂ ಕೆಲಸಕ್ಕೆ ಸೇರುತ್ತಾರೆ ಎಂದು ಗೊತ್ತಾದರೂ ಅವರಿಗೆ ಪರಿಸ್ಥಿತಿಯನ್ನು ವಿವರಿಸಿ ಅವರ ಬದುಕನ್ನು ಉಳಿಸುವ ಕೆಲಸ ನಿಮ್ಮ ಮುಂದಾಳತ್ವದಲ್ಲೇ ಆಗಲಿ. ಮತ್ತೆ ನಿಮ್ಮ ಹೆಣ್ಣುಬಾಕ ಬಾಸ್ಗೆ ಶಿಕ್ಷೆಯಾಗುವುದಿಲ್ಲವೇ ಎಂದು ಕೇಳಿದ್ದೀರಿ. ನಿಮ್ಮಂಥವರು ಅದರ ಬಗ್ಗೆ ದೂರು ಕೂಡದೆ ಅಥವಾ ಪ್ರತಿಭಟನೆ ಮಾಡದೆ, ಶಿಕ್ಷೆ ಕೊಡಲು ಯಾರಿಗೂ ಸಾಧ್ಯವಿಲ್ಲ. ಮತ್ತೆ ನಿಮ್ಮ ಬಾಸ್ಗೆ ಇದರ ಬಗ್ಗೆ ಗೊತ್ತಿದ್ದರೂ ಸುಮ್ಮನಿದ್ದಾರೆ ಎಂದರೆ, ಅವರೂ ಇದರಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ. ಈ ರೀತಿಯ ಅಕ್ರಮ ವ್ಯವಹಾರ ನಡೆಸಲು ಅಂತಹ ಬಾಸ್ನ ಸಹಾಯ ಇರಲೇಬೇಕು. ಇನ್ನೊಬ್ಬರಿಗೆ ಮೋಸ ಮಾಡುವಂತೆ ನಿಮಗೆ ಅಷ್ಟು ಸ್ಪಷ್ಟವಾಗಿ ಹೇಳವ ಆತನನ್ನು ಮಾಲೀಕ ಯಾವ ಕಾರಣಕ್ಕೂ ಕೈ ಬಿಡಲಾರ. ಇನ್ನು ನಿಮ್ಮಂತಹ ಜನರ ಬಗ್ಗೆ ಸಾಮೂಹಿಕವಾಗಿ ಹೇಳುವುದಾದರೆ, ಪತ್ರಿಕೆಗಳಲ್ಲಿ, ಬಸ್ಸಿನ ಸೀಟಿನ ಹಿಂದೆ ಹೀಗೆ ಆಕರ್ಷಣೀಯ ವೇತನದೊಂದಿಗೆ ಉದ್ಯೋಗ ಅನ್ನುವ ಜಾಹೀರಾತನ್ನು ನೋಡಿದ ತಕ್ಷಣ ಇನ್ನು ಮುಂದೆ ಅವುಗಳನ್ನು ಹುಡುಕುತ್ತಾ ಹೋಗಬಾರದು. ಆ ರೀತಿಯ ಒಂದು ಕಂಪನಿ ಇದೆಯೋ ಇಲ್ಲವೋ ಎಂಬುದನ್ನು ಮೊದಲು ಅರಿತು ಆ ಬಳಿಕವಷ್ಟೇ ಅರ್ಜಿ ಹಾಕಿ. ಹೀಗೆಯೇ ಕೆಲವು ನಯವಂಚಕರು ಯುವಕರ ಎಸ್ಎಸ್ಎಲ್ಸಿ ಅಂಕಪಟ್ಟಿಯ ಮೂಲ ಪ್ರತಿಯನ್ನೇ ಕೊಡಬೇಕು ಎಂದು ಕೇಳುತ್ತಾರೆ. ನಂತರದಲ್ಲಿ ಅವುಗಳನ್ನು ವಾಪಸ್ ಕೊಡದೆ ಜೀವನಪರ್ಯಂತ ನೀವು ಕೆಲಸ ಬಿಟ್ಟು ಹೋಗದ ಹಾಗೆ ಶೋಷಣೆ ಮಾಡುತ್ತಾರೆ. ಅತ್ತ ಸಂಬಳವೂ ಇಲ್ಲ; ಇತ್ತ ಮೂಲ ಅಂಕಪಟ್ಟಿಯೂ ಇಲ್ಲ ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿ ನೀವು ಇರುವಂತಾದೀತು. ಹೀಗಾಗಿ ಮೂಲ ಅಂಕಪಟ್ಟಿಯನ್ನು ಕೊಡುವ ತಪ್ಪು ಮಾಡಬೇಡಿ. ಯಾವುದೇ ಕಂಪನಿಯು ಅಂಕಪಟ್ಟಿಯ ಮೂಲ ಪ್ರತಿಯನ್ನು ಇಟ್ಟುಕೊಳ್ಳುವುದಿಲ್ಲ. ಜೆರಾಕ್ಸ್ ಕಾಪಿಯನ್ನು ಮೊದಲಿಗೆ ಕೇಳುತ್ತಾರೆ. ಕೆಲಸಕ್ಕೆ ಆಯ್ಕೆಯಾದಿರಿ ಎಂದಾದರೆ ನಂತರ ಅದು ಹೊಂದಾಣಿಕೆಯಾಗುತ್ತದೋ ಎಂಬುದನ್ನು ಪರಿಶೀಲಿಸಿ ವಾಪಸ್ ಮಾಡುತ್ತಾರೆ. ಅದೇ ರೀತಿ ಒಂದೆರಡು ತಿಂಗಳು ಕೆಲಸ ಮಾಡಿದ ಮೇಲೆ ಸಂಬಳ ಕೊಟ್ಟಿಲ್ಲ ಎಂದಾದರೆ, ಮತ್ತೆ ಅಲ್ಲಿ ನಿಲ್ಲುವ ಸಾಹಸಕ್ಕೆ ಹೋಗಬೇಡಿ. ಸಂಬಳ ಕೊಡಿ, ನಂತರ ಕೆಲಸ ಮಾಡುತ್ತೇವೆ ಎಂದು ಹೇಳಿ. ಇಂತಹ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಿ. ನಿಮಗೆ ಕೆಲವು ಸರ್ಕಾರಿ ಇಲಾಖೆಗಳು ಅಥವಾ ಸಮಾಜಸೇವಾ ಸಂಸ್ಥೆಗಳು ನೆರವು ಕೊಡಬಲ್ಲವು. ಕಾನೂನಿನ ಮೂಲಕ ಹೋರಾಟ ನಡೆಸಿ. ವಂಚಕರನ್ನು ಸದೆಬಡಿಯಿರಿ. ನಿಮ್ಮಂತಹ ಯುವಕ-ಯುವತಿಯರು ಬಲಿಪಶುವಾಗುವುದನ್ನು ತಪ್ಪಿಸಿ.
* ನವೀನ (ಉಪ್ಪಿ), ನಾಗಮಂಗಲ
ಸರ್, ಚಿಕ್ಕಂದಿನಿಂದಲೇ ನಾನು ಕಲಿಯುವುದರಲ್ಲಿ ಬುದ್ಧಿವಂತ. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ನಾನು ಪಿಯುಸಿಯಲ್ಲಿ ಕಾಮರ್ಸ್ ಆಯ್ಕೆ ಮಾಡಿಕೊಂಡೆ. ಪ್ರಾರಂಭದಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ನನ್ನನ್ನು ಹುಡುಗಿಯೊಬ್ಬಳು ಪ್ರೀತಿಸುತ್ತೇನೆ ಎಂದು ಹೇಳಿದಳು. ಅದನ್ನು ನಂಬಿಕೊಂಡು, ಪ್ರೀತಿಯ ಬಲೆಯಲ್ಲಿ ಬಿದ್ದ ನಾನು ಕಲಿಯುವುದರಲ್ಲಿ ಆಸಕ್ತಿ ಕಳೆದುಕೊಂಡೆ. ಪರೀಕ್ಷೆ ಹತ್ತಿರ ಬಂದರೂ ಆ ಹುಡುಗಿಗೆ ಪತ್ರ ಬರೆಯುತ್ತಾ, ಎಸ್ಎಂಎಸ್ ಕಳಿಸುತ್ತಾ ಸಮಯ ಕಳೆದೆ. ಹೀಗಾಗಿ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಫೇಲಾದೆ. ಆದರೆ, ಆ ಹುಡುಗಿ ಪಾಸಾಗಿ ಡಿಗ್ರಿಗೆ ಸೇರಿಕೊಂಡಳು. ನಾನು ಫೇಲಾಗಿದ್ದಕ್ಕೆ ನನ್ನನ್ನು ತಿರಸ್ಕರಿಸಿದ ಆಕೆ ನಂತರ ಬೇರೆ ಯಾರದೋ ಬೆನ್ನು ಹತ್ತಿದಳು. ಆದರೆ, ನನಗಾದ ಪರಿಸ್ಥಿತಿಯಿಂದಾಗಿ ಸಿಕ್ಕಾಬಟ್ಟೆ ನೊಂದುಕೊಂಡೆ. ಜೀವನದ ಮೇಲಿನ ಆಸಕ್ತಿಯೇ ನಾಶವಾಗಿದೆ. ನಂತರದಲ್ಲಿ ಹಲವು ಬಾರಿ ಪರೀಕ್ಷೆ ಬರೆಯಲು ಪ್ರಯತ್ನಿಸದರೂ ಶ್ರಮವೆಲ್ಲ ವ್ಯರ್ಥವಾಯಿತು. ಈಗ ಬೇರೆ ದಾರಿ ಇಲ್ಲದೆ, ಪ್ರಿಂಟೆಕ್ಸ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೇನೆ. ಆ ಹುಡುಗಿಯನ್ನು ಮರೆಯಬೇಕು. ಮತ್ತೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಅನಿಸುತ್ತಿದೆ. ಆದರೆ, ಅದು ಆಗುತ್ತಿಲ್ಲ. ಏನನ್ನೇ ಮಾಡುವಾಗಲೂ ಆಕೆಯೇ ಅಡ್ಡ ಬಂದು ನಿಲ್ಲುತ್ತಾಳೆ. ನೀವೇ ದಾರಿ ತೋರಿಸಿ ಪ್ಲೀಸ್.
- ನಿಮ್ಮ ಈ ದುಃಸ್ಥಿತಿ ಕಲಿಕೆಯ ವೇಳೆಯನ್ನು ಇನ್ಯಾವುದಕ್ಕೋ ಬಳಸುತ್ತಿರುವ ವಿದ್ಯಾರ್ಥಿಗಳಿಗೆ ಪಾಠ ಎಂದು ನಾವು ಹೇಳುತ್ತೇವೆ. ಯಾಕೆಂದರೆ, ನಿಮ್ಮ ಬಗ್ಗೆ ಕಾಳಜಿ ವಹಿಸಿಕೊಂಡಿರುವ ಸಾಕಷ್ಟು ಹಿರಿಯರು 'ಕಲಿಯುವ ವೇಳೆಯಲ್ಲಿ ಕಲಿಯಿರಿ, ಪ್ರೀತಿ-ಪ್ರೇಮ ಎಂದು ಬಲಿ ಬೀಳಬೇಡಿ' ಎಂದು ಎಷ್ಟೇ ಹೇಳಿದರೂ ನೀವು ಅದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಬದುಕಿನಲ್ಲಿ ಸೋತು ಹೋದೆ ಎಂದು ಅನಿಸುವಾಗ ಅವರನ್ನು ನೆನಪಿಸಿಕೊಳ್ಳುತ್ತೀರಿ. ಆ ವೇಳೆಗಾಗಲೇ ಎಲ್ಲವೂ ಮುಗಿದು ಹೋಗಿರುತ್ತದೆ. ನಿಮ್ಮ ಕತೆಯೂ ಅದೇ ಆಗಿದೆ. ಪಿಯುಸಿಯಲ್ಲಿ ಹುಡುಗಿಯನ್ನು ಪ್ರೀತಿಸಿದೆ ಎಂದು ಹೇಳುತ್ತಿದ್ದೀರಿ. ಅದು ನಿಜವಾದ ಪ್ರೀತಿಯಾಗಿತ್ತೇ ಎಂದು ಈಗ ಯೋಚಿಸಿ ನೋಡಿ. ಪ್ರೀತಿ ಅನ್ನುವುದರ ವ್ಯಾಖ್ಯಾನವನು ್ನಸರಿಯಾಗಿ ತಿಳಿಯದ ಆ ವಯಸ್ಸಲ್ಲಿ ನಿಮ್ಮದು ಕೇವಲ ವಯಸ್ಸಿನ ಆಕರ್ಷಣೆಯಾಗಿರುತ್ತದೆ. ನಿಮ್ಮ ಹಾಗೆ ಸಾಕಷ್ಟು ವಿದ್ಯಾರ್ಥಿಗಳು ಇಂತಹ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ಕೆಲವರ ಮನಸ್ಸು ಗಟ್ಟಿ ಇರುತ್ತದೆ, ಸುಧಾರಿಸಿಕೊಳ್ಳುತ್ತಾರೆ. ನಿಮ್ಮಂತಹವರು ಮಾತ್ರ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಪ್ರೀತಿ ಎನ್ನುವ ಹೆಸರಿನ ಆಕರ್ಷಣೆಗೆ ಬಿದ್ದಿರುವ ನೀವು ಓದಿನ ಮೇಲಿನ ಆಕರ್ಷಣೆ ಕಳೆದುಕೊಂಡು ಬದುಕಿನಲ್ಲಿ =ಹಿನ್ನಡೆ ಅನುಭವಿಸಿದಿರಿ. ಸರಿ, ಈಗ ಎಲ್ಲವೂ ಆಗಿಹೋಗಿದೆ. ಹೀಗಾಗಿ ಅದನ್ನೇ ನೆನಪಿಸಿಕೊಂಡು ಕೂರುವುದರಿಂದ ನಿಮ್ಮ ಬದುಕು ಇನ್ನಷ್ಟು ಅಧೋಗತಿಯತ್ತ ಸಾಗುತ್ತದೆ. ಹೀಗಾಗಿ ಆಗಿರುವ ಘಟನೆಗಳನ್ನು ಮರೆತುಬಿಡಿ. ಅವಳ್ಯಾರೋ, ನೀವ್ಯಾರೋ ಎಂದು ಅಂದುಕೊಳ್ಳಿ. ಮತ್ತೆ ಜೀವನದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ. ಏಕಾಗ್ರತೆಯಿಂದ ಮತ್ತೊಮ್ಮೆ ಪರೀಕ್ಷೆ ಬರೆದು ಪಾಸಾಗುವ ದೃಢ ನಿರ್ಧಾರವನ್ನು ತೆಗೆದುಕೊಳ್ಳಿ. ಮತ್ತೆ ಜಯಿಸುವಂತಹ ಮನಸ್ಸು ನಿಮ್ಮದಾಗಲಿ. ಪರೀಕ್ಷೆಗಳನ್ನು ಬರೆದು ಪಾಸಾಗಿ ಒಂದು ಒಳ್ಳೆಯ ಕಡೆ ಕೆಲಸಕ್ಕೆಸೇರಿಕೊಳ್ಳಿ. ಸುಂದರ ಬದುಕು ನಿಮ್ಮದಾಗುವುದು.
ಪ್ರೈವೇಟ್ ಕಂಪನಿ
ನನ್ನ ಮಗಳಿಗೆ 14 ವರ್ಷ. ಅವಳ ಸ್ತನಗಳು ಒಂದೇ ರೀತಿ ಬೆಳವಣಿಗೆ ಹೊಂದುತ್ತಿಲ್ಲ. ಇದರ ಬಗ್ಗೆ ಆಕೆ ಸಿಕ್ಕಾಪಟ್ಟೆ ಸಂಕೋಚದಿಂದ ಇದ್ದಾಳೆ. ಯಾವುದಾದರೂ ಔಷಧದಿಂದ ಅದನ್ನು ಒಂದೇ ರೀತಿ ಮಾಡಲು ಸಾಧ್ಯವೇ?
ಮನುಷ್ಯನ ಕಾಲುಗಳೂ ಒಂದೇ ರೀತಿ ಇರುವುದಿಲ್ಲ. ಎರಡರಲ್ಲಿ ಒಂದು ಸಣ್ಣ ವ್ಯತ್ಯಾಸವನ್ನು ಹೊಂದಿರುತ್ತದೆ. ಅದೇ ರೀತಿ ಇದೂ ಕೂಡ ಮಾಮೂಲು. ಯಾವುದೇ ಸ್ತ್ರೀಯ ಎರಡೂ ಸ್ತನಗಳು ಒಂದೇ ರೀತಿ ಇರುವುದಿಲ್ಲ. ಇದು ಆಕೆಯ ನೈಸರ್ಗಿಕ ಬೆಳವಣಿಗೆಯನ್ನು ಆಧರಿಸಿರುತ್ತದೆ. ಆಕೆ ಬೆಳೆಯುತ್ತಾ ಹೋದಂತೆ ಅದು ಸರಿಯಾಗಬಹುದು. ಹೀಗೆಂದು ಯಾವುದೇ ಔಷಧವನ್ನು ಕೊಟ್ಟು ಎರಡನ್ನೂ ಒಂದೇ ಗಾತ್ರಕ್ಕೆ ಮಾಡುವುದು ಅಸಾಧ್ಯ. ಮದ್ದು ಹಚ್ಚಿ ದೊಡ್ಡದು ಮಾಡುತ್ತೇನೆ, ಚಿಕ್ಕದು ಮಾಡುತ್ತೇನೆ ಎಂದು ಹೇಳಿದರೆ ಅದನ್ನು ನಂಬಲೂಬೇಡಿ. ಅದೇ ರೀತಿ ನಿತ್ಯವೂ ವ್ಯಾಯಾಮ ಮಾಡುವುದರಿಂದ ಸರಿಯಾಗುತ್ತದೆ ಎಂಬುದಕ್ಕೂ ಯಾವುದೇ ಆಧಾರವಿಲ್ಲ. ಪ್ಲಾಸ್ಟಿಕ್ ಸರ್ಜರಿ ಮೂಲಕ ಮಾತ್ರವೇ ಅದನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಆದರೆ, ಅದರ ಅಗತ್ಯ ನಿಮ್ಮ ಮಗಳಿಗೆ ಇರುವುದಿಲ್ಲ ಮತ್ತು ಇಷ್ಟು ಸಣ್ಣ ವಯಸ್ಸಿಗೆ ದೇಹವನ್ನು ಯಾವುದೇ ಸರ್ಜರಿಗೆ ಒಡ್ಡುವುದು ಕೂಡಾ ಸರಿಯಲ್ಲ. ಸ್ತನದ ಗಾತ್ರಕ್ಕೆ ಹೊಂದಾಣಿಕೆಯಾಗುವಂತಹ ಬ್ರಾವನ್ನು ಧರಿಸುವ ಮೂಲಕ ಎರಡೂ ಒಂದೇರೀತಿ ಕಾಣುವಂತೆ ಮಾಡಿ. ನಿಮ್ಮ ಮಗಳು ಬೆಳೆಯುವ ತನಕ ಕಾಯುವುದೇ ಉತ್ತಮ. ಅದಕ್ಕಿಂತ ಮೊದಲೇ ಎಲ್ಲವನ್ನೂ ತೀರ್ಮಾನಿಸಿದರೆ ಒಳ್ಳೆಯ ನಿರ್ಧಾರವಾಗುವುದಿಲ್ಲ.
* ಖುಷಿ, ಮಂಗಳೂರು
ಕಳೆದ ಒಂಬತ್ತು ತಿಂಗಳಿಂದ ಓದಿನ ಹಿನ್ನೆಲೆಯಲ್ಲಿ ಮನೆಯಿಂದ ದೂರ ಇದ್ದೇನೆ. ಈ ಮಧ್ಯೆ ನಾನು ಒಬ್ಬ ಹುಡುಗನನ್ನು ಭೇಟಿಯಾದೆ. ಕೆಲವೇ ತಿಂಗಳಲ್ಲಿ ನಾವು ಸಾಕಷ್ಟು ಹತ್ತಿರವಾದೆವು. ಮಧ್ಯೆ ನಾವು ದೈಹಿಕ ಸಂಪರ್ಕವನ್ನು ಸಾಕಷ್ಟು ಬಾರಿ ಮಾಡಿದ್ದೇವೆ. ಆದರೆ, ಇದರ ಬಗ್ಗೆ ನನಗೆ ಸಾಕಷ್ಟು ಕೀಳರಿಮೆ ಇದೆ. ಯಾಕೆಂದರೆ, ಅವನ ಜಾತಿ ಬೇರೆ. ಹೀಗಾಗಿ ನಾವು ಮದುವೆಯಾಗುವುದು ಸಾಧ್ಯವಿಲ್ಲ. ನನ್ನ ವಿಧ್ಯಾಭ್ಯಾಸ ಮುಗಿದ ನಂತರ ನಾನು ಬೇರೆ ಮದುವೆಯಾದ ಮೇಲೆ ಇದು ನನಗೆ ತಪ್ಪೆಂದು ಕಾಡುವುದಿಲ್ಲವೇ? ಈ ಬಗ್ಗೆ ನನ್ನ ಗಂಡನಲ್ಲಿ ಹೇಳಿ ಮನಸ್ಸು ಹಗುರು ಮಾಡಿಕೊಳ್ಳಬಹುದೇ?
ಒಂದು ಬಾರಿ ನೀವು ಒಬ್ಬರಿಗೇ ನಿಷ್ಠೆಯಿಂದ ಇರುತ್ತಿದ್ದೀರಿ ಎಂದಾದ ಮೇಲೆ ಗೆಳೆಯನ ಜತೆ ದೈಹಿಕ ಸಂಪರ್ಕ ಮಾಡುವ ಅವಶ್ಯಕತೆ ಬರುತ್ತಿರಲಿಲ್ಲವೇನೋ? ಆದರೆ, ಇದೊಂದು ಮಹಾನ್ ಅಪರಾಧವೆಂದು ಮನಸ್ಸಲ್ಲಿ ಇಟ್ಟುಕೊಂಡು ಜೀವನ ಮಾಡುವುದು ಕಷ್ಟ. ನಿಮ್ಮ ಇಚ್ಛೆಗೆ ವಿರುದ್ಧವಾಗಿರುವ ಕ್ರಿಯೆಗಳನ್ನು ಮಾಡುತ್ತಾ ನಂತರದಲ್ಲಿ ಅದರ ಬಗ್ಗೆ ಕೊರಗು ಅನುಭವಿಸುವುದು ಅಷ್ಟು ಒಳ್ಳೆಯದಲ್ಲ. ನಿಮಗೆ ತಪ್ಪ್ಪು ಎಂದು ಗೊತ್ತಿರುವುದನ್ನು ಅಲ್ಲಿಯೇ ಬಿಟ್ಟುಬಿಡಿ. ಮತ್ತೆ ಮುಂದುವರಿಸಿಕೊಂಡು ಹೋಗಿ ಇನ್ನಷ್ಟು ದ್ವಂದ್ವಮಯ ಜೀವನವನ್ನು ಮಾಡಬೇಡಿ. ಅವರು ಬೇರೆ ಜಾತಿಯವರು ಎನ್ನುವ ಕಾರಣಕ್ಕೆ ಮದುವೆ ಸಾಧ್ಯವಿಲ್ಲ ಎನ್ನುವುದು ಸದ್ಯದ ಸ್ಥಿತಿಯಲ್ಲಿ ಒಪ್ಪಿಕೊಳ್ಳುವಂತಹ ವಿಚಾರವಲ್ಲ. ಇತ್ತೀಚೆಗೆ ಸಾಕಷ್ಟು ಅಂತರ್ಜಾತಿಯ ಹಾಗೂ ಅಂತರ್ಧರ್ಮೀಯ ವಿವಾಹ ಸಂಬಂಧಗಳು ನಡೆಯುತ್ತಿವೆ. ನೀವು ಆ ಸಾಲಿಗೆ ಸೇರಿ ನಿಮ್ಮ ಗೆಳೆಯ ಎನಿಸಿರುವ ಹುಡುಗನನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳಬಹುದು. ಅದೇ ರೀತಿ ಮಾಡಿರುವ ತಪ್ಪನ್ನು ತನ್ನ ಬಾಳಸಂಗಾತಿ ಜತೆ ಹೇಳಲೋ ಬೇಡವೋ ಅನ್ನುವ ಗೊಂದಲವೂ ಬೇಡ. ನಿಮ್ಮ ಬಾಳಸಂಗಾತಿ ಕೂಡಾ ಮದುವೆಗೆ ಮೊದಲೇ ಯಾವುದಾದರೂ ಸಂಬಂಧಗಳನ್ನು ಹೊಂದಿದ್ದರೆ ಅದನ್ನು ಹೇಳಲಿಕ್ಕಿಲ್ಲ. ಅದೇ ರೀತಿ ನೀವು ಇಂತಹ ಘಟನೆಗಳನ್ನು ಹೇಳಿದರೆ ಅದನ್ನು ಅವರು ಒಪ್ಪಿಯಾರು ಎನ್ನುವ ನಂಬಿಕೆ ಇರುವುದಿಲ್ಲ. ಅದೊಂದು ಮರೆತು ಹೋದ ಘಟನೆ ಎಂದು ಅಂದುಕೊಳ್ಳುವುದು ಉತ್ತಮ.
* ಸುತಾಪ, ಹುಬ್ಬಳ್ಳಿ
ನಾನು ಇಲ್ಲಿನ ಕಾಲೇಜೊಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ಎರಡು ವರ್ಷದ ಹಿಂದ ನಾನು ಹುಡುಗಿಯೊಬ್ಬಳ ಜತೆ ಪ್ರೀತಿಯ ಬಲೆಯಲ್ಲಿ ಬಿದ್ದೆ. ನನ್ನ ಜತೆಗೆ ಇರುವಷ್ಟು ಸಮಯ ಆಕೆಯೂ ನನ್ನ ಜತೆ ಸಾಕಷ್ಟು ಪ್ರೀತಿಯಿಂದಲೇ ಇರುತ್ತಾಳೆ. ಆದರೆ, ನನ್ನಿಂದ ಆಚೆ ಹೋದಳು ಅಂದರೆ ನನ್ನ ಫೋನ್ ಕರೆಗಳನ್ನುಸ್ವೀಕರಿಸುವುದಿಲ್ಲ ಅಥವಾ ಟೆಕ್ಸ್ಟ್ ಮೆಸೇಜುಗಳಿಗೆ ಸರಿಯಾದ ಉತ್ತರ ಕೊಡುವುದಿಲ್ಲ. ಯಾಕೆ ಎಂದು ಕೇಳಿದರೆ, ಅದಕ್ಕೆ ಉತ್ತರವನ್ನೂ ನೀಡುವುದಿಲ್ಲ. ಕೆಲವು ದಿನಗಳ ಕೆಳಗೆ ನಾವಿಬ್ಬರೂ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದೆವು. ಈ ವೇಳೆ ಸಾಕಷ್ಟು ಹತ್ತಿರದಿಂದ ಮಾತನಾಡಿದ್ದೇವೆ. ಆ ವೇಳೆಯಲ್ಲಾ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಆದರೆ, ಮುರುದಿನ ಮನೆಗೆ ಹೋದ ಮೇಲೆ ಮತ್ತದೇ ಚಾಳಿ. ಫೋನೂ ಇಲ್ಲ, ಮೆಸೇಜೂ ಇಲ್ಲ. ಹಿಂಗ್ಯಾಕೆ?
ಕಳೆದ ಮೂರು ವರ್ಷಗಳಿಂದ ಇಂತಹದೇ ಸಮಸ್ಯೆ ನಿಮಗೆ ಎದುರಾಗುತ್ತಿದೆ ಎಂದ ಮೇಲೆ ಮತ್ಯಾಕೆ ನೀವು ಆಕೆಯ ಜತೆ ಸಂಬಂಧ ಮುಂದುವರಿಸುತ್ತಿದ್ದೀರಿ? ಇನ್ನೂ ಮುಂದಕ್ಕೆ ಹೋದರೆ ಇದೇ ನಿಮ್ಮ ಜೀವನ ಹಾಳಾಗಲು ಒಂದು ಕಾರಣವಾದೀತು. ಕೇವಲ ನಿಮ್ಮ ಮುಂದೆ ಮಾತ್ರ ಪ್ರೀತಿ ತೋರಿಸುವ ಅನಿವಾರ್ಯತೆ ಆಕೆಗೆ ಎಷ್ಟಿದೆ ಎಂಬುದರ ಬಗ್ಗೆ ತಿಳಿಯುವುದಕ್ಕಾದರೂ ಪ್ರಯತ್ನಿಸಿ. ಮನೆಯವರ ವಿರೋಧ ಇತ್ಯಾದಿಗಳೇನಾದರೂ ಇದ್ದರೆ, ಸ್ವಲ್ಪ ದಿನ ನೀವು ಸಂಯಮದಿಂದ ಇರುವುದೇ ಉತ್ತಮ. ಒಂದು ದಿನದ ಮಟ್ಟಿಗೆ ನಿಮ್ಮ ಜತೆ ಉಳಿದುಕೊಳ್ಳಲು ಬಂದಿರುವ ಆಕೆ ನಂತರದಲ್ಲಿ ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿರುವುದರಿಂದ ಆಕೆಯಿಂದ ದೂರ ಇರುವುದೇ ಒಳಿತು. ಅದನ್ನೇ ಗೀಳಾಗಿಸಿಕೊಂಡು ಇನ್ಯಾವುದೋ ಸಮಸ್ಯೆಯಲ್ಲಿ ಬೀಳುವುದು ಸರಿಯಾಗುವುದಿಲ್ಲ. ಅದಕ್ಕಾಗಿ ಬೇರೆ ಚಟುವಟಿಕೆಗಳಲ್ಲಿ ಮುಳುಗಿ. ಇವುಗಳೆಲ್ಲವನ್ನೂ ಮರೆಯಲು ಡಾನ್ಸ್, ಮ್ಯೂಸಿಕ್ ಇತ್ಯಾದಿಗಳೆಲ್ಲವನ್ನೂ ಮಾಡುವುದು ಒಳಿತು. ಒಂದು ವೇಳೆ ಮರೆಯಲಿಕ್ಕೆ ಆಗುವುದಿಲ್ಲ ಎಂದಾದರೆ ಯಾರಾದರೂ ವೃತ್ತಿಪರ ಕೌನ್ಸೆಲಿಂಗ್ ಮಾಡಿಸಿಕೊಳ್ಳಿ.
* ನಂದಿತಾ, ಬೆಂಗಳೂರು
ನನಗೆ 31 ವರ್ಷದ ಮಹಿಳೆ. ನನ್ನ ತೂಕ 78 ಕೇಜಿ. 5.5 ಅಡಿ ಎತ್ತರ ಇರುವ ನಾನು ಸಿಕ್ಕಾಪಟ್ಟೆ ದಪ್ಪನಾಗಿ ಕಾಣುತ್ತೇನೆ. ಸಾಕಷ್ಟು ಗೆಳೆಯರಿಂದ ಇದಕ್ಕಾಗಿ ಹೀಯಾಳಿಸಿಕೊಂಡಿದ್ದೇನೆ. ಹೀಗಾಗಿ ಮನೆಯ ಸಮೀಪದ ಜಿಮ್ಗೆ ಹೋಗುತ್ತಿದ್ದು, ಬೆಳಗ್ಗಿನ ಜಾವ ವರ್ಕೌಟ್ ಮಾಡುತ್ತಿದ್ದೇನೆ. ಹೀಗಾಗಿ ಕಳೆದ ಎರಡು ವಾರಗಳಲ್ಲಿ ನಾನು 5 ಕೇಜಿಯಷ್ಟು ಭಾರ ಇಳಿಸಿಕೊಂಡಿದ್ದೇನೆ. ಇದರ ಜತೆ ನಾನು ಬೆಳಗಿನ ತಿಂಡಿಯನ್ನು ಕೂಡಾ ತಪ್ಪಿಸಿಕೊಳ್ಳುತ್ತಿದ್ದೇನೆ. ತಿಂಡಿಯನ್ನು ತಿನ್ನದಿದ್ದರೆ, ಇನ್ನಷ್ಟು ತೂಕ ಇಳಿಸಿಕೊಳ್ಳಬಹುದು ಎಂದು ನನ್ನ ಗೆಳೆತಿಯೊಬ್ಬಳು ಹೇಳಿದ್ದಾಳೆ. ತಿನ್ನದೇ ಇರುವುದರಿಂದ ಭಾರ ಇಳಿಸಲು ಸಾಧ್ಯವೇ? ಅಥವಾ ಖಾಲಿ ಹೊಟ್ಟೆಯಲ್ಲಿ ಜಿಮ್ ಮಾಡುವುದು ಸರಿಯಾದ ಕ್ರಮವೇ?
ಗೆಳತಿ ಹೇಳಿದಳು ಎನ್ನುವ ಕಾರಣಕ್ಕೆ ಅವೈಜ್ಞಾನಿಕ ವಿಧಾನವಾಗಿರುವ ತಿಂಡಿ ಬಿಟ್ಟು ವರ್ಕೌಟ್ ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ನಿಮ್ಮ ತೂಕ ಇಳಿಕೆಯಾಗದೆ ಯಾವುದಾದರೂ ದೈಹಿಕ ಸಮಸ್ಯೆಗೆ ಕಾರಣವಾದೀತು. ಸರಿಯಾದ ಸಮಯಕ್ಕೆ ತಿಂದು ನಂತರದ ಒಂದು ಒಂದೂವರೆ ಗಂಟೆಯ ನಂತರ ವ್ಯಾಯಾಮ ಶುರು ಮಾಡಿಕೊಳ್ಳಿ. ಆಹಾರ ಇಲ್ಲದೆ ವರ್ಕೌಟ್ ಮಾಡುವುದರಿಂದ ನಿಮ್ಮು ಸ್ನಾಯುಗಳಲ್ಲಿ ಶಕ್ತಿಯ ಕೊರತೆ ಉಂಟಾಗಿ ಮುಂದಕ್ಕೆ ವ್ಯಾಯಾಮ ಮಾಡದೇ ಇರುವ ಪರಿಸ್ಥಿತಿ ಉಂಟಾಗಬಹುದು. ಜತೆದೆ ನಿಮ್ಮ ದೇಹದ ನರಗಳು ಮನಸ್ಸಿಗೆ ಇದು ಕಷ್ಟಸಾಧ್ಯ ಕೆಲಸ ಎಂದು ಸಂದೇಶ ಕಳುಹಿಸಬಲ್ಲುದು. ಇದರಿಂದಾಗಿ ದೇಹದಲ್ಲಿ ಅಸಮತೋಲನ ಉಂಟಾಗಬಹುದು. ಇದರಿಂದ ನೀವು ತೂಕ ಕಳೆದುಕೊಳ್ಳುವುದು ಬಿಟ್ಟು ದೇಹದ ಭಾಗಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುತ್ತದೆ. ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ನಶಿಸುವುದಕ್ಕೆ ಒಂದು ಕ್ರಮವಿದೆ. ಸಿಕ್ಕಾಬಟ್ಟೆ ಜಿಮ್ ಮಾಡುವುದು ಅಥವಾ ಅನಿಯಮಿತವಾಗಿ ಉಪವಾಸ ಇರುವುದು ಸರಿಯಾದ ಕ್ರಮವಾಗಿರುವುದಿಲ್ಲ. ಯಾರೋ ಹೇಳಿದ ಮಾತುಗಳನ್ನು ಕೇಳಿ ಏನೇನೋ ಪ್ರಯತ್ನಗಳನ್ನು ಮಾಡಲು ಹೋಗಬೇಡಿ. ಯಾರಾದರೂ ಫಿಟ್ನೆಸ್ ಗುರುವನ್ನು ಭೇಟಿಯಾಗಿ ಯಾವ ರೀತಿ ತೂಕ ಇಳಿಸಬಹುದು ಎನ್ನುವ ಕುರಿತು ಮಾಹಿತಿ ಪಡೆದುಕೊಳ್ಳಿ.
ಪ್ರೈವೇಟ್ ಕಂಪನಿ
ನನಗೆ ಕೆಲವು ತಿಂಗಳ ಹಿಂದೆ ಹುಡುಗನೊಬ್ಬ ಪರಿಚಯವಾಗಿ, ಇತ್ತೀಚಿನ ದಿನಗಳಲ್ಲಿ ತೀರಾ ಹತ್ತಿರವಾಗಿದ್ದಾನೆ. ಹೀಗಾಗಿ ಕಳೆದ ತಿಂಗಳ ಕೆಲವು ದಿನಗಳು ನಾವು ಅಸುರಕ್ಷಿತ ಲೈಂಗಿಕ ಕ್ರಿಯೆಯನ್ನು ನಡೆಸಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ನನಗೆ ಗರ್ಭವತಿಯಾಗಿ ಬಿಡುವೆ ಎನ್ನುವ ಭಯ ಕಾಡುತ್ತಿದೆ. ಆದರೂ ಆಸ್ಪತ್ರೆಗೆ ಹೋಗಲು ಹಿಂದೇಟು; ಏನೋ ಅಳುಕು. ಅದನ್ನು ನಾನು ಹೇಗೆ ತಿಳಿದುಕೊಳ್ಳಬಹುದು?
- ಸತ್ಯಕ್ಕೆ ಹೊರತಾಗಿರುವ ವಿಚಾರ ಇನ್ನೊಂದಿಲ್ಲ. ಹೀಗಾಗಿ ಮಕ್ಕಳಾಗುತ್ತದೋ ಆಗುವುದಿಲ್ಲವೋ ಎನ್ನುವ ಅನುಮಾನಕ್ಕಿಂತ ಸೀದಾ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು. ಲೈಂಗಿಕ ಕ್ರಿಯೆಯ ಉತ್ತುಂಗಕ್ಕೆ ಏರಿದಾಗ ಪುರುಷನ ಜನನಾಂಗದಿಂದ ವೀರ್ಯವು ಹೊರಬರುತ್ತದೆ. ಇದು ಸ್ತ್ರೀಯ ಜನನಾಂಗದ ಒಳಗೆ ಪ್ರವೇಶಿಸಿ, ಆಕೆಯಲ್ಲಿರುವ ಅಂಡಾಣುವಿನೊಂದಿಗೆ ಸೇರಿ ಹೊಸ ಜೀವ ಉತ್ಪತ್ತಿಗೆ ಕಾರಣವಾಗುತ್ತದೆ. ವೀರ್ಯದ ಜೀವಿತಾವಧಿಯು 3ರಿಂದ 7 ದಿನಗಳ ಕಾಲ ಇರುತ್ತದೆ ಮತ್ತು ಅಂಡಾಣು ಜತೆ ಸಂಯೋಜನೆ ಹೊಂದಲು ಕಾಯಬಲ್ಲದು. ವೈಜ್ಞಾನಿಕವಾಗಿ, ಹೆಣ್ಣು ತಿಂಗಳ ಮುಟ್ಟಾದ ನಂತರ 12-13ನೇ ರಾತ್ರಿಯವರೆಗೆ, ನಂತರ 21-22ನೇ ದಿನದಿಂದ 28ನೇ ದಿನದವರೆಗೆ ಲೈಂಗಿಕತೆಯ ದೃಷ್ಟಿಯಿಂದ ಸುರಕ್ಷಿತ ಅವಧಿ. ಸಾಮಾನ್ಯವಾಗಿ ಮುಟ್ಟಾದ ನಂತರದ 13ನೇ ದಿನದಿಂದ 21ನೇ ದಿನ ಮುಗಿಯುವ ನಡುವಿನ ಅವಧಿಯಲ್ಲಿ ನಡೆಸುವ ಮಿಲನವು ಗರ್ಭಧಾರಣೆಗೆ ಪ್ರಶಸ್ತವಾದ ಸಮಯ. ಇಂಥ ವೈಜ್ಞಾನಿಕ ಸಂಗತಿಗಳು ನಿಮಗೆಲ್ಲ ಗೊತ್ತಿರಬೇಕು. ಇದೇನೇ ಇರಲಿ, ಹೀಗಾಗಿ ಗರ್ಭನಿರೋಧಕಗಳನ್ನು ಬಳಸದೆ ಲೈಂಗಿಕ ಕ್ರಿಯೆ ನಡೆಸಿರುವ ನೀವು ಗರ್ಭ ಧರಿಸುವ ಸಾಧ್ಯತೆಗಳು ಸಾಕಷ್ಟಿವೆ. ಹೀಗಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಮಕ್ಕಳಾಗುವ ಅಪಾಯ ಇದ್ದೇ ಇದೆ. ಇಂತಹ ಸಂದರ್ಭದಲ್ಲಿ ನಿಮಗೆ ಗರ್ಭ ನಿರೋಧಕಗಳು ಸಹಾಯಕ್ಕೆ ಬರಬಲ್ಲದು. ಕಾಂಡೋಂ ಆತ್ಯಂತ ಸುರಕ್ಷಿತ ಹಾಗೂ ಸರಳ ಗರ್ಭನಿರೋಧಕ ಸಾಧನವಾಗಿದೆ. ಇದೇನೇ ಇರಬಹುದು, ಹೀಗೆ ಮದುವೆಗೆ ಮೊದಲೇ ಲೈಂಗಿಕ ಅನುಭವಕ್ಕೆ ಒಳಗಾಗುವ ಬಗ್ಗೆ ನೈತಿಕ ದೃಷ್ಟಿಯಿಂದಲೂ ಯೋಚಿಸಬೇಕು. ಏಕೆಂದರೆ, ಹೀಗೆ 'ಸುಖ' ಅನುಭವಿಸುವ ಹುಡುಗನೇ ನಂತರ ನಿಮ್ಮನ್ನು ಮದುವೆಯಾಗುತ್ತಾನೆ ಎನ್ನುವ ಗ್ಯಾರಂಟಿ ಎಲ್ಲ ಸಂದರ್ಭದಲ್ಲೂ ಇರುವುದಿಲ್ಲ. ಹೀಗಾಗಿಯೇ ನಮ್ಮಲ್ಲಿ ಸಾಮಾಜಿಕವಾಗಿ ವಿವಾಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ರೂಪಿಸಲಾಗಿದೆ.
**
* ರೀಮಾ, ಮಂಗಳೂರು
ನಾನು 25 ವರ್ಷದ ಹುಡುಗಿ. ನನಗೊಬ್ಬ ಬಾಯ್ಫ್ರೆಂಡ್ ಇದ್ದಾನೆ. ಆದರೂ ನಾನು 33 ವರ್ಷದ ವಿವಾಹಿತ ಪುರುಷನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದೇನೆ. ಆತ ಎರಡು ವರ್ಷಗಳ ನಂತರ ನನ್ನನ್ನು ಮದುವೆಯಾಗುವ ಭರವಸೆ ನೀಡಿದ್ದಾನೆ. ಆತನ ಪತ್ನಿಯ ನಡವಳಿಕೆ ಸರಿಯಾಗಿಲ್ಲವಂತೆ. ಹೀಗಾಗಿ ಎರಡು ವರ್ಷಗಳ ನಂತರ ಆಕೆಗೆ ಡೈವೋರ್ಸ್ ನೀಡಿ ಮದುವೆಯಾಗುತ್ತಾನಂತೆ. ಆದರೆ ಇದನ್ನು ನನ್ನ ಬಾಯ್ಫ್ರೆಂಡ್ಗೆ ಹೇಗೆ ಹೇಳುವುದು ಎಂದು ಗೊತ್ತಾಗುತ್ತಿಲ್ಲ. ಆತ ಸಿಕ್ಕಾಬಟ್ಟೆ ಕೋಪಿಷ್ಟ. ಏನಾದರೂ ಸಮಸ್ಯೆ ಇದ್ದರೆ ಬಾಯಿಗೆ ಬಂದ ಹಾಗೆ ಬೈಯುತ್ತಾನೆ. ನನಗೆ ಅವನ ಜತೆ ಇರಲು ಸುತರಾಂ ಇಷ್ಟವಿಲ್ಲ. ಹೀಗಾಗಿ ನಾನು ತೆಗೆದುಕೊಂಡಿರುವುದು ಸರಿಯಾದ ನಿರ್ಧಾರವೇ ತಿಳಿಸಿ.
- ನೀವು ಪ್ರೀತಿಸುತ್ತಿರುವ ಗಂಡಸು ಅವರ ಪಾಲಿನದ್ದನ್ನು ತಿನ್ನುತ್ತಾ, ನಿಮ್ಮ ಪಾಲಿಗೂ ಕೈ ಹಾಕಿರುವಂತಿದೆ. ಇಲ್ಲದಿದ್ದರೆ ಎರಡು ವರ್ಷಗಳ ಕಾಲ ಯಾಕೆ ನಿಮ್ಮನ್ನು ಮದುವೆಯಾಗಲು ಆತ ಕಾಯಿಸಬೇಕು? ಆತನಿಗೆ ಹೆಂಡತಿ ಮೇಲೆ ಪ್ರೀತಿ ಇಲ್ಲವೆಂದಾದರೆ ತಕ್ಷಣಕ್ಕೆ ವಿಚ್ಛೇದನ ಪಡೆದು ಪ್ರೀತಿಸುವ ನಿಮ್ಮನ್ನು ಮದುವೆಯಾಗಬಹುದು ತಾನೇ? ಇದು ಎಷ್ಟು ಸತ್ಯ ಎಂದು ನೀವು ತಿಳಿದುಕೊಂಡಿದ್ದೀರಿ ಎಂದು ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಒಂದು ವೇಳೆ ಸತ್ಯವಾಗಿದ್ದರೆ ನೀವು ತೆಗೆದುಕೊಂಡಿರುವ ನಿರ್ಧಾರ ತಪ್ಪಲ್ಲ. ಆದರೆ, ಎರಡು ವರ್ಷಗಳವರೆಗೆ ಕಾಯುತ್ತಿರುವ ಎಂದು ಆತ ಹೇಳುತ್ತಿರುವುದನ್ನು ನಂಬುವುದು ತಪ್ಪಾಗುತ್ತದೆ. ನಿಮಗೆ ನಿಮ್ಮ ಬಾಯ್ಫ್ರೆಂಡ್ನ ನಡತೆ ಮೇಲೆ ಅಸಮಾಧಾನ ಇದೆ ಎಂದು ಹೇಳಿದ ಮೇಲೆ ಆತನನ್ನು ಬಿಟ್ಟು ಹೋಗುವುದು ಒಳಿತು. ಆತನನ್ನೇ ಬಿಟ್ಟು ಹೋಗುತ್ತೇನೆ ಎಂದಾದ ಮೇಲೆ ಆತನ ಬೈಗುಳದ ಬಗ್ಗೆ ನಿಮಗ್ಯಾಕೆ ಭಯ? ಒಟ್ಟಿಗೆ ಇರುವುದ ಸಾಧ್ಯವಿಲ್ಲ ಎಂದು ಹೇಳಿ ಮುಕ್ತಿ ಪಡೆಯಿರಿ. ನಿಮ್ಮನ್ನು ಪ್ರೀತಿಸುವ ಗಂಡಸಿಗೆ ತಕ್ಷಣದಲ್ಲಿ ಮದುವೆಯಾಗು ಎಂದು ಒತ್ತಾಯಿಸಿ. ಸುಮ್ಮನೆ ಎರಡು ದೋಣಿಗಳ ಮೇಲೆ ಕಾಲು ಇಟ್ಟು ಗೊಂದಲಕ್ಕೆ ಬೀಳಬೇಡಿ.
**
* ಡಾಲಿ, ಬೆಂಗಳೂರು
28 ವರ್ಷದ ವಿವಾಹಿತ ಮಹಿಳೆ. ಆರು ವರ್ಷದ ಹಿಂದೆ ಮದುವೆಯಾಗಿದೆ. ಮೊದಲ ಎರಡು ವರ್ಷಗಳಲ್ಲಿ ಕಾಂಡೋಂ ಹಾಕದೆಯೇ ಲೈಂಗಿಕ ಕ್ರಿಯೆಯನ್ನು ನಡೆಸುವುದು ನಮಗೆ ಸಾಧ್ಯವಾಗಲಿಲ್ಲ. ಯಾಕೆಂದರೆ, ನಂತರದ 2-3 ಗಂಟೆಗಳ ಕಾಲ ನನಗೆ ಜನನಾಂಗದಲ್ಲಿ ತುಂಬಾ ಉರಿಯಾಗುತ್ತಿತ್ತು. ಹಲವು ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ನಡೆಸಿದ್ದೇವೆ. ಅವರು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಆದರೆ ನಂತರದಲ್ಲೂ ಆ ಸಮಸ್ಯೆಗೆ ಪೂರ್ಣ ಪರಿಹಾರ ಸಿಕ್ಕಿಲ್ಲ. ನಮಗೀಗ ಮಗು ಬೇಕು ಎನ್ನುವ ಆಸೆಯಾಗಿದೆ. ಹೀಗಾಗಿ ನಾವೇನು ಮಾಡಬೇಕೆಂದು ನೀವು ಸಲಹೆ ಕೊಡುತ್ತೀರಿ?
- ನೀವು ವೈದ್ಯರನ್ನು ಭೇಟಿಯಾಗಿ ಯಾವುದೇ ಸಮಸ್ಯೆ ಇಲ್ಲ ಎನ್ನುವ ಪರಿಹಾರ ಪಡೆದುಕೊಂಡು ಬಂದಿದ್ದೀರಿ. ಆದರೆ, ನೀವು ಪರೀಕ್ಷಿಸಿಕೊಂಡಿರುವುದು ಸ್ತ್ರೀರೋಗ ತಜ್ಞರಲ್ಲಿಯೋ ಎನ್ನುವುದು ಖಾತ್ರಿಯಾಗಿಲ್ಲ. ಒಂದು ವೇಳೆ ಅವರ ಬಳಿ ಹೋಗಿಲ್ಲ ಎಂದಾದರೆ ತಕ್ಷಣದ ಪರಿಹಾರ ಅವರನ್ನು ಭೇಟಿಯಾಗುವುದು. ನಿಮಗೆ ಆಗುತ್ತಿದ್ದ ನೋವಿಗೆ ಆಂತರಿಕವಾಗಿ ಉಂಟಾಗಿರುವ ಯಾವುದೋ ಸೋಂಕು ಕಾರಣವಾಗಿರಬಹುದು. ಅದೇ ರೀತಿ ನಿಮ್ಮ ಪತಿಯಲ್ಲೂ ಯಾವುದೇ ಸಮಸ್ಯೆ ಇರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ, ಒಬ್ಬರಿಗೊಬ್ಬರಿಗೆ ಹರಡುವ ಸಾಧ್ಯತೆ ಜಾಸ್ತಿ ಇರುತ್ತದೆ. ಅದೇ ರೀತಿ ನಿಮ್ಮ ನೋವಿಗೆ ಮಾನಸಿಕ ಕಾರಣವೂ ಇರಬಹುದು. ಮನಸ್ಸು ತಯಾರು ಆಗಿರದ ವೇಳೆ ದೇಹವು ಯಾವುದೇ ಕೆಲಸವನ್ನು ಮಾಡಿದರೆ, ಅದಕ್ಕೆ ಸರಿಯಾಗಿ ಸ್ಪಂದಿಸಲು ಸಾಧ್ಯವಿಲ್ಲ. ನಿಮ್ಮ ಲೈಂಗಿಕ ಕ್ರಿಯೆಯಲ್ಲೂ ಅದೇ ರೀತಿ ಆಗಿರಬಹುದು. ಸಾಕಷ್ಟು ಮಹಿಳೆಯರು ಈ ರೀತಿಯ ಭಾವನೆಗಳನು ಬೆಳೆಸಿಕೊಂಡಿರುತ್ತಾರೆ. ಹೀಗಾಗಿ ನೀವು ವಾಸ್ತವ ಜಗತ್ತಿಗೆ ಬನ್ನಿ. ನಿಮ್ಮ ಮತ್ತು ಗಂಡನ ಸಂಬಂಧಕ್ಕೆ ಸಂಪೂರ್ಣ ತಯಾರಾಗಿ. ಮುಂದೆ ಬರಲಿರುವ ಮಗುವಿಗಾಗಿ ಸನ್ನದ್ಧರಾಗಿ.
**
* ರೆಬೆಕಾ, ಹಾಸನ
ನಾನು 32 ವರ್ಷದ ಮಹಿಳೆ. ನಮಗೀಗಾಗಲೇ ಆರು ವರ್ಷದ ಒಂದು ಗಂಡು ಮಗುವಿದೆ. ನನಗೆ ಇನ್ನೊಂದು ಮಗು ಬೇಕು ಅನ್ನುವ ಆಸೆ ಇದೆ. ಆದರೆ, ಒತ್ತಡದ ಜೀವನ ಶೈಲಿಯಿಂದಾಗಿ ನನ್ನ ಗಂಡನಿಗೆ ಲೈಂಗಿಕ ಆಸಕ್ತಿಯೇ ಕಡಿಮೆಯಾಗಿ ಬಿಟ್ಟಿದೆ. ಹೀಗಾಗಿ ನಾನು ಗಂಡನಲ್ಲಿ ಎಷ್ಟು ಹೇಳಿದರೂ ಮಕ್ಕಳನ್ನು ಪಡೆಯುವುದು ಸಾಧ್ಯವಾಗುತ್ತಿಲ್ಲ. ಅವರ ಲೈಂಗಿಕ ನಿರಾಸಕ್ತಿಯಿಂದಾಗಿ ನಾವು ತಿಂಗಳಿಗೆ ಒಮ್ಮೆ ಮಾತ್ರ ಒಟ್ಟಾಗಲು ಸಾಧ್ಯವಾಗುತ್ತದೆ. ಆದರೆ, ಅದು ನನ್ನ ಫಲಪ್ರದ ದಿನಗಳಾಗಿರುವುದಿಲ್ಲ. ಗಂಡನಲ್ಲಿ ಇದರ ಬಗ್ಗೆ ಕೇಳಿದರೆ, ನಮಗೆ ಒಂದು ಮಗು ಇದೆ, ಇನ್ನೊಂದು ಯಾಕೆ ಬೇಕು ಎಂದು ಪ್ರಶ್ನಿಸುತ್ತಾರೆ. ಆದರೆ ನನ್ನ ಆಸೆಗೆ ಏನು ಮಾಡಲಿ?
- ಮೊದಲು ನೀವು ನಿಮ್ಮ ಗಂಡನಿಗೆ ಮತ್ತೊಂದು ಮಗು ಎಷ್ಟೊಂದು ಅಗತ್ಯ ಎಂಬುದನ್ನು ಸರಿಯಾಗಿ ತಿಳಿಸಿ. ಅದನ್ನು ಅವರು ಒಪ್ಪಿದರೆ ನಿಮ್ಮ ಆಸೆ ತೀರಿದಂತೆ. ಒಂದು ವೇಳೆ ಅವರು ಲೈಂಗಿಕವಾಗಿ ತೀರಾ ನಿರಾಸಕ್ತಿ ಹೊಂದಿದ್ದಾರೆ ಎಂದಾದರೆ, ಮಗುವನ್ನು ಪಡೆಯಲು ಇರುವ ಕೃತಕ ವಿಧಾನಗಳ ಬಗ್ಗೆ ವೈದ್ಯರ ಮೂಲಕ ತಿಳಿದುಕೊಂಡು ಅದನ್ನೂ ವಿವರಿಸಿ. ಮಗುವನ್ನು ಪಡೆಯುವುದಕ್ಕಾಗಿ ನೀವು ಮಾಡುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ನಿಮಗೆ ಸೆಕ್ಸ್ ನಲ್ಲಿ ಇನ್ನಷ್ಟು ಆಸಕ್ತಿ ಇದೆ ಎಂಬುದನ್ನು ಅವರ ತಿಳಿದುಕೊಂಡಾರು. ನಿಮ್ಮ ಗಂಡನಿಗೆ ಕೆಲಸದ ಒತ್ತಡದಿಂದಾಗಿ ಲೈಂಗಿಕ ಆಸಕ್ತಿ ಕಡಿಮೆಯಾಗಿರುವುದು ಒಂದು ಸಮಸ್ಯೆಯಾಗಿದ್ದರೂ ಎರಡನೇ ಮಗುವಿನಿಂದ ಆರ್ಥಿಕ ಹೊರೆ ಉಂಟಾಗುತ್ತದೆ ಎನ್ನುವ ಭಾವನೆ ಕೂಡ ಬಂದಿರಬಹುದು. ಅದನ್ನೂ ಸಮರ್ಪಕ ಯೋಜನೆ ಮೂಲಕ ಕಡಿಮೆಗೊಳಿಸುವುದಕ್ಕೆ ಪ್ರಯತ್ನಿಸಿ. ನಿಮ್ಮ ಮೊದಲ ಮಗುವಿಗೆ ಏಕಾಂಗಿತನ ಕಾಡುತ್ತದೆ ಎನ್ನುವ ಕಾಳಜಿಯೂ ನಿಮಗೆ ಇದ್ದರೆ ಅದನ್ನೂ ಪತಿಗೆ ವಿವರಿಸಿ. ಎಲ್ಲದಕ್ಕೂ ಅವರ ಒಪ್ಪಿಗೆಯಷ್ಟೇ ಬೇಕಾಗಿದೆ.
ನಂಬಿಕೆಯೇ ಆಧಾರ
'ಅವರಿಬ್ಬರದೂ ಸುಂದರ ಜೋಡಿ. ಅವಳು ಅಪ್ರತಿಮ ಸುಂದರಿಯಾದರೆ, ಆತ ಸುರಸುಂದರಾಂಗ... ಗಂಡ ಹೆಂಡತಿ ಎಂದರೆ ಹಾಗಿರಬೇಕು'. ಇದು ನಾಲ್ಕು ಜನರ ಮಧ್ಯೆ ಆಗಾಗ ತೇಲಿಹೋಗುವ ಮಾತು. ಮತ್ತೆಮತ್ತೆ ಇಂತಹ ಮಾತುಗಳು ನಮ್ಮ ಕಿವಿಗೆ ಅಪ್ಪಳಿಸುತ್ತಲೇ ಇರುತ್ತವೆ. ನಾವೂ ಅಹುದಹುದೆಂದು ತಲೆಯಾಡಿಸುತ್ತಲೇ ಇರುತ್ತೇವೆ. ಇದು ಒಂದು ಮುಖ.
ಒತ್ತಾಯಕ್ಕೆ ಕಟ್ಟು ಬಿದ್ದು ಅಥವಾ ಇನ್ಯಾವುದೋ ಪರಿಸ್ಥಿತಿಯಲ್ಲಿ ಅಂದವಿಲ್ಲದ ಹುಡುಗಿಯನ್ನು ಮದುವೆಯಾದ ಹುಡುಗ ಅಥವಾ ಚಂದ ಕಾಣದ ಹುಡುಗನನ್ನು ಲಗ್ನವಾದ ಹುಡುಗಿಯು 'ಬೆಳ್ಳಗಿಲ್ಲ. ಅವರಷ್ಟು ಚೆನ್ನಾಗಿಲ್ಲ' ಎನ್ನುವ ಕೀಳರಿಮೆಯೊಂದಿಗೆ ಹತ್ತು ಜನ ಒಟ್ಟು ಸೇರುವಲ್ಲಿಗೆ ಹೋಗಲು ಹಿಂಜರಿಯುತ್ತಾರೆ. ಇದೇ ಕೀಳರಿಮೆಯನ್ನು ಮುಂದುವರಿಸಿಕೊಂಡು ತಾವು ಪತಿ-ಪತ್ನಿ ಎಂಬುದನ್ನು ಹೇಳಲೂ ಹಿಂಜರಿಯುತ್ತಾರೆ. ಮುಂದೊಂದು ದಿನ ಇದು ದೊಡ್ಡ ಸಮಸ್ಯೆಯಾಗಿ ಬೆಳೆದು ಸಂಸಾರ ಎನ್ನುವ ರೈಲು ಹಳಿ ತಪ್ಪಿ ಕೋರ್ಟ್ ಮೆಟ್ಟಿಲು ಹತ್ತುತ್ತದೆ. ಇದು ಇನ್ನೊಂದು ಮುಖ.
ಹೌದು, ಸೌಂದರ್ಯ ಇದ್ದವರು ಶ್ರೇಷ್ಠರು ಎಂದು ನಂಬುವುದು ನಮ್ಮ ಮನಸ್ಸಿಗೆ ಅಂಟಿಕೊಂಡಿರುವ ದೊಡ್ಡ ರೋಗ. ಬೆಳ್ಳಗಿರುವುದೆಲ್ಲ ಹಾಲು ಎನ್ನುವ ಅಭಿಪ್ರಾಯದೊಂದಿಗೆ ಎಲ್ಲವನ್ನೂ ಬಣ್ಣದಿಂದಲೇ ತೂಗುವ ನಮ್ಮ ಸಂಸ್ಕೃತಿಗೆ ಹಲವು ಸಂಸಾರಗಳು ಬಲಿಯಾಗುತ್ತಿವೆ. ಇಲ್ಲಿ ವ್ಯಕ್ತಿತ್ವ ಅಥವಾ ಒಳ್ಳೆಯತನಕ್ಕೆ ನಯಾಪೈಸೆ ಬೆಲೆಯೂ ಇಲ್ಲ. ಪ್ರತಿಯೊಬ್ಬರೂ ತನ್ನ ಗಂಡ / ಹೆಂಡತಿ ಸ್ಫುರದ್ರೂಪಿಯಾಗಿಯೇ ಇರಬೇಕು ಎಂದೇ ಬಯಸುತ್ತಾರೆ. ಅಂಥ ನಿರೀಕ್ಷೆಗೆ ಏನಾದರೂ ಭಂಗವಾದರೆ ಇಡೀ ಜೀವನ ಸುಳಿಗೆ ಸಿಲುಕಿದ ದೋಣಿಯಂತೆ ತಪ್ಪು ದಾರಿಯನ್ನು ಹಿಡಿಯುತ್ತದೆ.
ಆದರೆ, ಬಣ್ಣ ಮತ್ತು ಸೌಂದರ್ಯವನ್ನು ಬದಿಗಿರಿಸಿ, ಪರಸ್ಪರ ನಂಬಿಕೆಯೇ ಸಂಸಾರದ ಸಾರಥಿ ಎಂದು ನಂಬಿ ಜೀವನ ಸಾಗಿಸುವ ಹಲವು ಜೋಡಿಗಳು ಇಂಥವರಿಗೆ ಉತ್ತರವೂ ಹೌದು. ಹಾಗಾದರೆ ಸುಖೀ ದಾಂಪತ್ಯದ ಗುಟ್ಟು ಸೌಂದರ್ಯವೇ? ಅಲ್ಲ. ಹಾಗಾದರೆ, ಅದರ ರಹಸ್ಯವೇನು ಎಂಬುದನ್ನು ನೋಡೋಣ.
ಅಂದಕ್ಕಿಲ್ಲಿ ಮೌಲ್ಯವಿಲ್ಲ
ಮದುವೆಯಾಗಿ ಒಳ್ಳೆಯ ಜೀವನ ನಡೆಸಬೇಕು ಎನ್ನುವ ಉದ್ದೇಶ ಹೊಂದಿದ್ದವರು ಎಂದೂ ಚಂದಕ್ಕೆ ಬೆಲೆ ನೀಡಬಾರದು. ಮದುವೆಯಾಗುವ ಮೊದಲು ಹುಡುಗ, ಅಥವಾ ಹುಡುಗಿಯ ಗುಣ, ನಡತೆ ಪರಸ್ಪರ ಹೊಂದಾಣಿಕೆ ಆಗಲು ಸಾಧ್ಯವೇ ಎನ್ನುವುನ್ನು ನೋಡಬೇಕು. ಅಪ್ರತಿಮ ಸುಂದರಿಯನ್ನು ಮನೆ ಮೆಟ್ಟಿಲು ಹತ್ತಿಸಿದರೆ ಮನೆ ಬೆಳಗುತ್ತದೆ ಎನ್ನುವ ಭಾವನೆಯೂ ಸರಿಯಲ್ಲ. ತ್ವಚೆಯ ಬಣ್ಣದಿಂದ ಯಾವುದೇ ಒಳ್ಳೆಯತನವನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ ಎನ್ನುವುದನ್ನು ಮನಗಾಣಬೇಕು. ಹಾಗೆಂದು ಚೆಂದ ಇರುವವರೆಲ್ಲ ಕೆಟ್ಟವರೇನಲ್ಲ. ಆದರೆ, ಪ್ರಾಶಸ್ತ್ಯ ನೀಡಬೇಕಾದ್ದು ಒಳ್ಳೆಯ ಗಂಡ ಅಥವಾ ಹೆಂಡತಿಯಾಗಲು ಸಾಧ್ಯವೇ ಎನ್ನುವುದಕ್ಕೆ ಅಷ್ಟೆ.
ಬೊಗಸೆ ಪ್ರೀತಿ
ಮದುವೆಯಾದ ಗಂಡು /ಹೆಣ್ಣು ಹೆಚ್ಚು ಹೆಚ್ಚು ನಿರೀಕ್ಷೆ ಮಾಡುವುದು ಪರಸ್ಪರ ಪ್ರೀತಿಯನ್ನು. ಇದು ಅವರಿಬ್ಬರ ಬೇಸಿಕ್ ನಿರೀಕ್ಷೆಯಾಗಿರುತ್ತದೆ. ಪತ್ನಿಯನ್ನು ಪ್ರೀತಿಯಿಂದ ಗೆಲ್ಲಲಾಗದ ಗಂಡ, ಆತ ಎಷ್ಟೇ ಸುಂದರವಾಗಿದ್ದರೂ ಪ್ರಯೋಜನಕ್ಕೆ ಬರದು. ಹೆಂಡತಿಗೆ ಪ್ರೀತಿಯನ್ನು ನೀಡಿ ಆಕೆಯಿಂದ ಅದನ್ನು ಪಡೆಯಲಾಗದ ಗಂಡಸು ಅದೆಷ್ಟೇ ಶ್ರೀಮಂತನಾಗಿದ್ದರೂ ಎಲ್ಲವೂ ವ್ಯರ್ಥ. ಗಂಡನ ಮನಸ್ಸನ್ನು ತನ್ನ ಪ್ರೇಮದಿಂದ ಗೆಲ್ಲಲಾಗದ ಹುಡುಗಿ ಅಪ್ರತಿಮ ಸುಂದರಿಯಾಗಿದ್ದರೂ ಅದು ಗಾಜಿನ ಮನೆ.
ಅಭಿರುಚಿಯಲ್ಲಿ ಹೊಂದಾಣಿಕೆ
ಮದುವೆಯಾದ ಪತಿ-ಪತ್ನಿಯರು ತಮ್ಮ ಅಭಿರುಚಿಯಲ್ಲಿನ ಹೊಂದಾಣಿಕೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. 'ನಾನೇ ಬೇರೆ, ನನ್ನ ಸ್ಟೈಲೇ ಬೇರೆ' ಎಂದು ಇಬ್ಬರೂ ಒಂದೊಂದು ಕಡೆ ತಿರುಗಿದರೆ, ಸಂಸಾರ ರಥದ ಚಕ್ರ ಉರುಳದು. ಆರಂಭದಲ್ಲಿ ಒಬ್ಬರ ಇಷ್ಟ ಇನ್ನೊಬ್ಬರಿಗೆ ಕಷ್ಟ ಎಂದು ಅನಿಸಿದರೂ ಪರಸ್ಪರ ಒಬ್ಬರಿಗೊಬ್ಬರು ಅರಿತು ಅದರ ಜತೆಗೆ ಸಾಗಲು ಪ್ರಯತ್ನ ಮಾಡುವುದೇ ಸಂಸಾರದ ಯಶಸ್ಸಿನ ಗುಟ್ಟು. ಅಭಿರುಚಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಆಗದಿದ್ದರೆ ಪ್ರತೀ ಮಾತಿಗೂ ಆಕ್ಷೇಪಗಳೇ ಕೇಳಿಬರಬಹುದು. ಮತ್ತೆಂದೂ ಸರಿಯಾಗದ ಮಟ್ಟಿಗೆ ಅದು ತಲುಪಬಹುದು.
ನಂಬಿಕೆ
ಮನುಷ್ಯನ ಅಂದ ಯಾವತ್ತೂ ವಿಶ್ವಾಸದ ಪ್ರತೀಕವಲ್ಲ. ನಂಬಿಕೆಯನ್ನು ಉಳಿಸಿಕೊಂಡ ಕುರೂಪಿಯೂ ಉತ್ತಮ ಸಂಸಾರಿಯಾಗಬಲ್ಲ. ಇದೇ ಗುಟ್ಟು ಸಂಸಾರಕ್ಕೂ ಅನ್ವಯವಾಗುತ್ತದೆ. ಒಬ್ಬರಿಗೊಬ್ಬರು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಕೆಲಸವನ್ನು ಮಾಡಿದರೆ, ಅಪನಂಬಿಕೆ ಹುಟ್ಟಲು ಸಾಧ್ಯವೇ ಇಲ್ಲ. ಅಪನಂಬಿಕೆ ಒಮ್ಮೆ ಮೂಡಿದರೆ, ಸುಂದರ ಸಂಸಾರ ಒಡೆದು ನುಚ್ಚು ನೂರಾಗಬಹುದು.
ಕೀಳರಿಮೆ ಬೇಡ
ನಾವು ಸುಂದರವಾಗಿಲ್ಲ ಎನ್ನುವ ಕಾಳಜಿ ದೊಡ್ಡ ಮನೋರೋಗವೇ ಹೌದು. ನಮಗೂ ಈ ಸಮಾಜದಲ್ಲಿ ಒಂದು ಸ್ಥಾನವಿದೆ. ನಮ್ಮ ಹಕ್ಕನ್ನು ಅಲ್ಲಿ ಸ್ಥಾಪಿಸುತ್ತೇವೆ ಎನ್ನುವ ಧೈರ್ಯವನ್ನು ತೆಗೆದುಕೊಂಡರೆ ನಿಮ್ಮ ಅಂದಚೆಂದವನ್ನು ತೆಗೆಳುವ ಧೈರ್ಯವನ್ನು ಯಾರೂ ತೆಗೆದುಕೊಳ್ಳಲಾರರು. ಜೀವನದುದ್ದಕ್ಕೂ ಅದನ್ನೇ ಮುಂದುವರಿಸಿದರೆ, ನಿಮ್ಮ ಸಂಸಾರವೂ ಗಟ್ಟಿ, ಯಾರೂ ನಿಮ್ಮನ್ನು ಬೇರೆ ಮಾನದಂಡ ಇಟ್ಟು ಅಳೆಯಲು ಪ್ರಯತ್ನಿಸುವುದಿಲ್ಲ. ಅದು ನಿಮಗೆ ದೊರೆತ ದೊಡ್ಡ ಗೆಲುವಾಗಿರುತ್ತದೆ.
ಪರಸ್ಪರ ಭರವಸೆ
ಕೀಳರಿಮೆ ಎನ್ನುವುದು ಹಲವು ಸಂದರ್ಭಗಳಲ್ಲಿ ಮನುಷ್ಯನನ್ನು ಕಾಡುವುದುಂಟು. ಹೀಗಾಗಿ ಗಂಡ-ಹೆಂಡತಿಯರಲ್ಲಿ ಒಬ್ಬರು ಚೆಂದ ಇರದಿದ್ದರೆ, ಅವರಿಗೆ ಯಾವತ್ತಾದೂ 'ನಾನು ಅಷ್ಟೊಂದು ಚಂದ ಇಲ್ಲವಲ್ಲ?' ಎಂದು ಅನಿಸಬಹುದು. ಆದರೆ, ಇಂಥ ಸಂದರ್ಭದಲ್ಲಿ ಪತಿ-ಪತ್ನಿಯರು ಪರಸ್ಪರ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಬೇಕು. 'ಚಂದವಿಲ್ಲದಿದ್ದರೇನಂತೆ, ನಾವೂ ಚೆನ್ನಾಗಿ ಕಾಣಲು ಸಾಧ್ಯವಿದೆ' ಎಂದು ಅರಿವು ಮೂಡಿಸಲು ಪ್ರಯತ್ನಿಸಬೇಕು. ಇದರಿಂದ ಅವರ ನಡುವೆ ಉತ್ತಮ ಬಾಂಧವ್ಯ ಮೂಡುವುದಂತೂ ನಿಶ್ಚಿತ. ಚೆಂದವಿಲ್ಲದ ಅವಳು ಹೇಗೆ ಬೇಕಾದರೂ ಬದುಕಲಿ ಎಂದು ಯೋಚಿಸಿದರೆ, ನಿಮ್ಮ ಪರಿಧಿಯಿಂದ ನೀವು ಹೊರಬರುವುದಕ್ಕೆ ಸಾಧ್ಯವೇ ಇಲ್ಲ. ಯಾವ ಕಾರಣಕ್ಕೂ ಸಂಸಾರ ಸರಿದೂಗಲು ಸಾಧ್ಯವೇ ಇಲ್ಲ.
ಮಿಲನ ಸುಖ
ದಾಂಪತ್ಯದ ವಿಚಾರ ಬಂದಾಗ ಚರ್ಚೆಯಿಂದ ಆಚೆ ಉಳಿಯುವ ವಿಚಾರ ಇದಾಗಿದೆ. ಆದರೆ, ಪತಿ-ಪತ್ನಿಯರ ಸಂಬಂಧದ ವಿಚಾರ ಬಂದಾಗ ಇದು ಮುಖ್ಯವಾಗುತ್ತದೆ. ದಂಪತಿಗಳ ಮಿಲನದಲ್ಲಿ ಭಾವೋತ್ಕರ್ಷವನ್ನು ಪರಿಗಣಿಸಲೇಬೇಕಾಗುತ್ತದೆ. ಹೆಚ್ಚು ಸುಂದರಿಯಾಗಿದ್ದರೆ, ಮಿಲನ ಸುಖ ಹೆಚ್ಚಿರುತ್ತದೆ ಎನ್ನುವ ನಂಬಿಕೆ ಹಲವರದು. ಆದರೆ, ಇಲ್ಲಿಯೂ ಸಂತೃಪ್ತಿ ಎನ್ನುವುದು ಪರಸ್ಪರ ನಂಬಿಕೆ, ಹೊಂದಾಣಿಕೆಯನ್ನೇ ಆಧರಿಸಿರುತ್ತದೆ. ಇಂಥದೊಂದು ಸುಖವನ್ನು ಪ್ರಾಪ್ತಿ ಮಾಡಿಕೊಳ್ಳುವುದು ಏಕಾಂತ ಸುಖದ ಕಲೆಯೂ ಆಗಿರುತ್ತದೆ. ಒಂದು ಎನ್ಜಿಓ ಜಾಗತಿಕವಾಗಿ ನಡೆಸಿದ ಸಮೀಕ್ಷೆ ಪ್ರಕಾರ ಕೇವಲ ಶೇಕಡ 35ರಷ್ಟು ಮಹಿಳೆಯರು ಮಾತ್ರ ತಮ್ಮ ಗಂಡಂದಿರಿಂದ ಈ ಸುಖದ ಉತ್ಕರ್ಷತೆಯನ್ನು ಪಡೆದಿರುತ್ತಾರೆ. ಇದಕ್ಕೆ ಪರಸ್ಪರ ಹೊಂದಾಣಿಕೆ ಇಲ್ಲದಿರುವುದೇ ಕಾರಣ. ಸೌಂದರ್ಯದ ಕಲ್ಪನೆಯನ್ನೇ ಮನಸ್ಸಿನಲ್ಲಿ ಇಟ್ಟಕೊಂಡು ಸುಖದ ದಾರಿಯನ್ನು ಹುಡುಕುವ ವ್ಯಕ್ತಿಗಳು ಉನ್ನತ ಸುಖವನ್ನು ಪಡೆಯುವಲ್ಲಿ ಎಡವುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಭಾವೋತ್ಕರ್ಷ ಎನ್ನುವುದು ಕೂಡ ಸೌಂದರ್ಯದ ಹಿನ್ನೆಲೆಯದಲ್ಲ.
ಅಂಜಿಕೆ ಬೇಡ, ಇರಲಿ ನಂಬಿಕೆ
ಜೀವನದಲ್ಲಿ ನಾವೆಲ್ಲ ಸವಾಲುಗಳನ್ನು ಎದುರಿಸುತ್ತಲೇ ಇರುತ್ತೇವೆ. ಈ ಪೈಕಿ ಕೆಲವು ಸವಾಲುಗಳು ನಮ್ಮನ್ನು ಉತ್ತಮರನ್ನಾಗಿ ಮಾಡಬಹುದು. ಮತ್ತಷ್ಟು ಸವಾಲುಗಳು ನಮ್ಮನ್ನು ಒದ್ದಾಡಿಬಿಡುವಂತೆ ಮಾಡಬಹುದು. ಯಾವುದೇ ರೀತಿಯ ಸವಾಲುಗಳಿರಲಿ, ಎದುರಾದರೂ ಎದುರಿಸಿ ಗಟ್ಟಿಯಾಗಿ ನಿಲ್ಲಬೇಕು. ಆಗಲೇ ನಾವು ಸಂತಸ-ಸಂಭ್ರಮಗಳ ಹೊಳೆಯಲ್ಲಿ ತೇಲಾಡುವಂತಾಗುತ್ತೇವೆ. ಎಲ್ಲರೂ ನಮ್ಮನ್ನು ಹಾಡಿ ಹೊಗಳುವಂತಹ ಸ್ಥಾನದಲ್ಲಿ ನಿಲ್ಲುತ್ತೇವೆ. ಆಗ ಅಲ್ಲಿ ನಿರಾಳಭಾವ ನೆಲೆಸುವಂತಾಗುತ್ತದೆ.
ಜಗತ್ತಿನಲ್ಲಿ ಹತಾಶೆ, ಅಸಹಾಯಕತೆ, ಸೋಲು, ಅಪಘಾತ, ಆಘಾತ, ಅನಾರೋಗ್ಯ ಹೀಗೆ ನಾನಾ ಬಗೆಯ ಕಟುವಾಸ್ತವವನ್ನು ಅನುಭವಿಸುವಂತಹ ಸನ್ನಿವೇಶಗಳು ಇದ್ದೇಇವೆ. ಅಂದಹಾಗೆ, ನಮ್ಮ ಒಂದು ಸುಂದರವಾದ ಕನಸನ್ನು ನನಸಾಗಿಸಿಕೊಳ್ಳುವುದಿರಬಹುದು. ನಮ್ಮಲ್ಲಿ ಅತ್ಯುನ್ನತವಾದ ಗುರಿ ಉದ್ದೇಶ ನಿರೀಕ್ಷೆಗಳಿರಬಹುದು. ಏನೇ ಆದರೂ ಆ ಹಾದಿಯಲ್ಲಿ ಅತ್ಯುತ್ಸಾಹದಿಂದ ನಡೆಯಲಾರಂಭಿಸಿದಂತೆಯೇ ಅನಿರೀಕ್ಷಿತ ಅನಾರೋಗ್ಯ, ಆತಂಕ-ಅವಾಂತರ, ಮಾನಸಿಕ ತೊಳಲಾಟ, ಕೌಟುಬಿಕ ಸವಾಲುಗಳು, ಕಚೇರಿಯ ಸಮಸ್ಯೆಗಳು ಇಂತಹ ಹಲವಾರು ಸಮಸ್ಯೆಗಳು ಬರಬಹುದು. ಇದರಿಂದಾಗಿ ನಮಗೆ ಏನು ಮಾಡಬೇಕೆಂದೇ ತೋಚದಂತೆ ಆಗುವ ಸಾಧ್ಯತೆ ಇರುತ್ತದೆ. ಅಂದಹಾಗೆ, ವಾಸ್ತವ ಅನುಭವದ ಕಹಿಯೇ ಬೇರೆ.
ನನ್ನಿಂದ ಈ ಕೆಲಸ ಸಾಧ್ಯವಾಗದು ಎಂಬ ನಕಾರಾತ್ಮಕ ಮನಸ್ಸಿನಿಂದ ಕೆಲಸ ಕೈಗೊಂಡರೆ ಆ ಕೆಲಸ ನಮ್ಮಿಂದ ಖಂಡಿತ ಸಾಧ್ಯವಾಗುವುದಿಲ್ಲ. ಅದನ್ನು ಎಷ್ಟೇ ಕಷ್ಟವಾದರೂ ನಾನು ಮಾಡಿಯೇ ಮಾಡುತ್ತೇನೆಂಬ ಸಕಾರಾತ್ಮಕ ಭಾವನೆಯಿಂದ ಮಾಡಲು ನಿರ್ಧರಿಸಿದಾಗಲೇ ನಮ್ಮಲ್ಲಿರುವ ಆತ್ಮವಿಶ್ವಾಸ ನಮ್ಮನ್ನು ಕೈಹಿಡಿದು ನಡೆಸುತ್ತದೆ. ಅದು ನಮಗೆ ಒಂದು ವಿಶೇಷ ಶಕ್ತಿಯನ್ನು ನೀಡುತ್ತದೆ. ಹೆಚ್ಚು ಸವಾಲುಗಳನ್ನು ಎದುರಿಸಲು ನಾವು ಮುಂದಾದಂತೆಯೇ ನಾವು ಹೆಚ್ಚು ಹೆಚ್ಚು ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಅದೆಷ್ಟೇ ಕಷ್ಟಗಳು ಎದುರಾದರೂ ನಿರ್ಭೀತಿಯಿಂದ ಎದುರಿಸುವಂತಹ ಶಕ್ತಿ ನಮ್ಮಲ್ಲಿ ಹುಟ್ಟುತ್ತದೆ. ಎಷ್ಟೋ ಜನ ಅಸಹಾಯಕರು ತಮ್ಮ ಹಿಂಜರಿಕೆಯ ಮನೋಭಾವದಿಂದ ಹೊರಬಂದು ತಮ್ಮಲ್ಲಿ ಅಡಗಿರುವ ಪ್ರತಿಭೆಗೆ ತಕ್ಕ ಸಾಧನೆ ಮಾಡಿದ್ದಾರೆ; ಜನರ ಮೆಚ್ಚುಗೆ ಗಳಿಸಿದ್ದಾರೆ.
ಸವಾಲುಗಳು ಎದುರಾಗುತ್ತಿದಂತೆಯೇ ಎಲ್ಲಿ ತಪ್ಪಾಗಿಬಿಡುವುದೋ, ಏನಾಗುತ್ತದೆಯೋ ಎಂಬ ಅಳುಕು ನಮ್ಮನ್ನು ಕಾಡಬಹುದು. ಇದರಿಂದ ನಾವು ಮುಂದಡಿ ಇಡಲು ಹಿಂದೇಟು ಹಾಕಬಹುದು. ಆಗ ಹಲವಾರು ತಪ್ಪುಗಳೂ ಆಗಬಹುದು. ಅಂತಹ ತಪ್ಪುಗಳಿಂದ ನಾವು ಉತ್ತಮ ಪಾಠ ಕಲಿಯುವಂತಾಗುತ್ತದೆ. ಅಲ್ಲದೆ ಅಂತಹ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಮಾರ್ಗ ಅನುಸರಿಸುತ್ತ ಹೋದಂತೆಲ್ಲ ನಾವು ಕೂಡ ಪ್ರತಿಕ್ಷಣವೂ ಬೆಳೆಯುತ್ತಲೇ ಸಾಗುತ್ತೇವೆ ಎಂಬುದನ್ನು ಮರೆಯಬಾರದು. ಇದರಿಂದ ನಮಗೊಂದು ಹೊಸತನದ ಹೊಸ ಅರ್ಥ ಸ್ಪುರಿಸುತ್ತದೆ. ಪ್ರತಿದಿನವೂ ಹೊಸ ಹೊಸವಿಚಾರಗಳನ್ನು ಅರಿಯುತ್ತಿದಂತೆಯೇ ಜೊತೆ ಜೊತೆಗೆ ನಾವೂ ಬೆಳೆಯುತ್ತಲೇ ಸಾಗುತ್ತೇವೆ.
ಕೆಲವೊಮ್ಮೆ ತುಂಬ ಕ್ಲಿಷ್ಟಕರವಾದಂತಹ ಸನ್ನಿವೇಶಗಳ ಸವಾಲುಗಳು ಎದುರಾದಾಗ ನಮ್ಮ ಆಂತರಿಕ ಶಕ್ತಿಯನ್ನು ಬಲವಾಗಿರಿಸಿಕೊಳ್ಳಬೇಕು. ಧೈರ್ಯ ಕಳೆದುಕೊಂಡರೆ ಇಡೀ ಜಗತ್ತೇ ಕುಸಿದಂತಹ ಅನುಭವ ವಾಗುತ್ತದೆ. ಅಷ್ಟೇ ಅಲ್ಲ ಇದೊಂದು ದೊಡ್ಡ ಅಗ್ನಿಪರೀಕ್ಷೆ ಎಂತಲೂ ಹೇಳಬಹುದು. ಇಂತಹ ಪರಿಸ್ಥಿತಿಯ ಸನ್ನಿವೇಶಗಳಲ್ಲಿ ಭಯ ಪಡದೆ, ಕಂಗಾಲಾಗದೆ ಸರಿಯಾದ ಸಮಯೋಜಿತ ನಿರ್ಣಯವನ್ನು ಕೈಗೊಳ್ಳಬೇಕು. ಮನಸ್ಸಿನಲ್ಲಿ ಧೈರ್ಯತುಂಬಿಕೊಂಡು ನಮ್ಮ ಆತ್ಮಸ್ಥೈರ್ಯದಿಂದ ಸನ್ನಿವೇಶಗಳನ್ನು ಎದುರಿಸಿ ನಿಂತಾಗ ನಮ್ಮ ಸುಂದರವಾದ ಜೀವನವನ್ನು ನಾವು ಸಂಪೂರ್ಣವಾಗಿ ಅನುಭವಿಸಬಹುದು. ನಮ್ಮಲ್ಲಿರುವ ಆಂತರಿಕ ಶಕ್ತಿಯನ್ನು ಯಾವ ಮತ್ಯುವಿನಿಂದಲೂ ಕದಡಲಾಗದಂತೆ ಎಚ್ಚರಿಕೆ ವಹಿಸಬಹುದು. ಅಂತಹ ಒಂದು ಸಕಾರಾತ್ಮಕ ಶಕ್ತಿಯೇ ನಮ್ಮನ್ನು ನಿರ್ಭಯವಾಗಿ ಕೈಹಿಡಿದು ನಡೆಸಬಲ್ಲುದು. ಅದು ನಮ್ಮನ್ನು ಸುರಕ್ಷಿತವಾಗಿ ಕಾಪಾಡಬಲ್ಲುದು. ಆಗಲೇ ನಾವು ನಮ್ಮ ಕುಟುಂಬಕ್ಕೆ ಒಂದು ಅತ್ಯುತ್ತಮ ಬಹುಮಾನವಾಗಬಲ್ಲೆವು.
ಯಾವುದೇ ಸವಾಲುಗಳು ಎದುರಾದರೂ ನಾವು ಸಂಯಮದಿಂದ ಸಕಾರಾತ್ಮಕವಾಗಿ ಎದುರಿಸಿ ನಿಲ್ಲೋಣ. ಅದಕ್ಕೆ ಸಂಬಂಧಿಸಿದಂತಹ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮುನ್ನುಗ್ಗೋಣ.
ಮುಖದ ಎದುರು ಮಾತೆಲ್ಲಾ ಮೂಕ
*ನಂದಿನಿ ಕೆ. ಎಲ್ ನಿಹಾಲ್ ಕೆಲಸಕ್ಕೆ ಮಾತೇ ಬಂಡವಾಳ. ಆದರೆ ಅವನು ಮಾತನಾಡುವುದಿಲ್ಲ. ಮನೆಯಲ್ಲಾಗಲೀ, ತಮ್ಮ ಸಹೋದ್ಯೋಗಿಗಳಲ್ಲಿ ಯಾರಾದರೂ ಮಾತನಾಡಲು ನಿಂತರೆ ಕೇಳುತ್ತಾ ಕೂರುತ್ತಾನೆ. ಅವನ ಮನಸ್ಸಿನಲ್ಲೂ ಮಾತನಾಡಲಿಕ್ಕೆ ಸಾವಿರ ಸಂಗತಿಗಳಿವೆ. ಆದರೆ ಅವನು ಅದನ್ನು ಬಾಯ್ಬಿಟ್ಟು ಹೇಳುವುದಿಲ್ಲ. ಗಂಟಲಿನ ತುದಿಯವರೆಗೆ ಬಂದ ಮಾತನ್ನು ಹಾಗೆಯೇ ನುಂಗಿಕೊಂಡು ಮೂಕನಾಗುತ್ತಾನೆ. ಇದರಿಂದ ಅವನ ಅಂತರ್ಮುಖಿ ಮಾತುಗಳು ಯಾರಿಗೂ ಕೂಡ ಕೇಳಿಸುವುದಿಲ್ಲ. ಇಂತಹ ವ್ಯಕ್ತಿತ್ವ ನಮ್ಮ ಸುತ್ತಮುತ್ತಲೂ ಇರಬಹುದು. ಅದನ್ನು ಅಲ್ಲೊಡೊಕ್ಸ ಫೋಬಿಯಾ ಎಂದು ಕರೆಯುತ್ತಾರೆ. ಎಷ್ಟೇ ಚಾಣಾಕ್ಷ ಬುದ್ಧಿಯಿದ್ದರೂ ಕೂಡ ಅಭಿಪ್ರಾಯಗಳನ್ನು ಹೇಳಿಕೊಂಡಾಗ ಮಾತ್ರ ನಮ್ಮ ಮನಸ್ಥಿತಿ ಇತರರಿಗೆ ಸುಲಭವಾಗಿ ಅರ್ಥವಾಗುತ್ತದೆ. ಇಲ್ಲವಾದರೆ ಯಾವುದೇ ವಿಷಯಗಳಾದರೂ ಕೂಡ ಗೊಂದಲವನ್ನುಂಟು ಮಾಡುತ್ತದೆ. ಮನಸ್ಸಿನಲ್ಲಿ ಮೂಡಿದ ಮಾತುಗಳನ್ನು ಇವರು ಎಂದಿಗೂ ಹೇಳಿಕೊಳ್ಳುವುದಿಲ್ಲ. ತಮ್ಮ ಮಾತಿಗೆ ಬೆಲೆ ಸಿಗುವುದಿಲ್ಲವೆಂದು ಮೂಕ ಜೀವಿಗಳಾಗಿ ಬಿಡುವುದು. ಭಯ, ಹಿಂಜರಿಕೆ, ಮಾನಸಿಕ ತಳಮಳದಿಂದ ದಿನದಿಂದ ದಿನಕ್ಕೆ ಕುಗ್ಗುತ್ತಾ ಹೋಗುತ್ತಾರೆ. ಯಾವುದೇ ಸಂದರ್ಭ ಬಂದರೂ ಅಂತಿಮವಾಗಿ ಒಂದು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಎಲ್ಲರಿಗೂ ಸದಾ ಪ್ರಶ್ನಾರ್ಥಕ ಚಿಹ್ನೆಯಾಗಿ ಕಾಡುತ್ತಾರೆ. ಕಾರಣ:ಇದು ತೀರ ಗಂಭೀರ ಸಮಸ್ಯೆ ಅಲ್ಲದಿದ್ದರೂ, ಬಾಲ್ಯದ ಪ್ರಭಾವ ಇದರ ಮೇಲೆ ಇದೆ. ಚಿಕ್ಕಂದಿನಲ್ಲಿ ತಮ್ಮ ಮಾತನ್ನು ಕೇಳಿ ಅಪಹಾಸ್ಯ ಮಾಡುವುದು, ಮಾತಿಗೆ ಮನ್ನಣೆ ಸಿಗದಿದ್ದಾಗ, ಮನೆಯಲ್ಲಿ ಪೋಷಕರು ಅತಿಯಾಗಿ ಶಿಸ್ತಿನಿಂದ ಬೆಳೆಸುವುದು. ನೇರವಾಗಿ ಹೇಳಲು ಅವಕಾಶವಿಲ್ಲದಿರುವುದು, ಸಂಕೋಚ ಹಾಗೂ ನಾಚಿಕೆ ಸ್ವಭಾವದ ಮನೋಭಾವ, ಉಚ್ಛಾರಣೆಯಲ್ಲಿ ದೋಷವಿದ್ದಾಗ, ಸರಿಯಾಗಿ ಭಾಷೆಯ ಮೇಲೆ ಪ್ರಭುತ್ವವಿಲ್ಲದಿರುವುದು, ಪದ ಸಂಪತ್ತಿನ ದೋಷ, ಬಾಲ್ಯದಲ್ಲಿ ಗೆಳೆಯರು ಟೀಕೆ ಮಾಡಿರುವುದರ ಪರಿಣಾಮದಿಂದಾಗಿ ಅಭಿಪ್ರಾಯಗಳನ್ನು ಹೇಳುವುದಿಲ್ಲ. ಪುರುಷರು ಅಥವಾ ಹುಡುಗರು ಮುಕ್ತವಾಗಿ ಮಾತನ್ನು ಹೇಳಿಬಿಡುತ್ತಾರೆ. ಆದರೆ ಹುಡುಗಿಯರು ಮತ್ತು ಮಹಿಳೆಯರು ಒಂದು ಮಾತನ್ನು ಹೇಳಲು ಹತ್ತಾರು ಬಾರಿ ಯೋಚನೆ ಮಾಡಿರುತ್ತಾರೆ. ಯಾರಾದರೂ ಏನಂದು ಕೊಳ್ಳುತ್ತಾರೋ, ತಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗುತ್ತದೋ ಇಲ್ಲವೋ ಎಂದು ಸುಮ್ಮನಾಗಿ ಬಿಡುತ್ತಾರೆ. ಯಾಕೆಂದರೆ ಮನೆಯಲ್ಲಿ ಹೆಚ್ಚಾಗಿ ಪುರುಷರ ಮಾತಿಗೆ, ನಿರ್ಧಾರ, ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದರಿಂದ ಮಹಿಳೆಯರ ಮಾತನ್ನು ಪರಿಗಣಿಸುವುದಿಲ್ಲ. ಇದರಿಂದ ಮಾನಸಿಕವಾಗಿ ಕುಗ್ಗುತ್ತಾ ಹೋಗುತ್ತಾರೆ. ತಮಗೆ ಅನ್ನಿಸಿದ್ದನ್ನು ಮುಕ್ತವಾಗಿ ಮಾತನಾಡಲು ದಿನಕಳೆದಂತೆ ಹಿಂದೆ ಸರಿಯುತ್ತಾರೆ. ಮನದಲ್ಲಿಯೇ ಯೋಚನೆ ಮಾಡುತ್ತಾ ಅಂರ್ತಮುಖಿಗಳಾಗುತ್ತಾರೆ.
ವೆಡ್ಡಿಂಗ್ ಡೇಸ್
-ಲವಲವಿಕೆಸುದ್ದಿಲೋಕ ಮದುವೆ ಮನೆ ಫ್ಯಾಷನ್ ಎಂದಾಕ್ಷಣ ಹೇಗೆ ಬೇಕೋ ಹಾಗೆ ಹೋಗುವಂತಿಲ್ಲ. ಅದಕ್ಕೂ ಒಂದಿಷ್ಟು ರೂಲ್ಸ್ ಹಾಗೂ ರಿಸ್ಟ್ರಿಕ್ಷನ್ಗಳಿವೆ. ನಮಗ್ಯಾವ ರೂಲ್ಸ್ ರಿಸ್ಟ್ರಿಕ್ಷನ್ ಎಂದು ಯೋಚಿಸಿದರೇ ನೀವು ಔಟ್ ಆಫ್ ಫ್ಯಾಷನ್ ಆಗುವಿರಿ. ಅದು ಮಾತ್ರವಲ್ಲ, ನಿಮ್ಮ ಇಮೇಜಿಗೆ ಧಕ್ಕೆಯಾಗಬಹುದು. ಹಾಗಾಗಿ ಮದುವೆ ಮನೆಗೆ ಹೋಗುವ ಮುನ್ನ ನಿಮ್ಮ ಫ್ಯಾಷನ್ ಸ್ಟೇಟ್ಮೆಂಟ್ ಬದಲಿಸಿಕೊಳ್ಳಿ ಎನ್ನುತ್ತಾರೆ ಸ್ಟೈಲಿಸ್ಟ್ ಕಾವ್ಯ. ಅವರ ಪ್ರಕಾರ, ಮದುವೆ ಮನೆ ಎಂದಾಕ್ಷಣ ಎಲ್ಲಾ ಮದುವೆಗೂ ಒಂದೇ ರೀತಿಯಲ್ಲಿ ಹೋಗಬೇಕಾಗಿಲ್ಲ. ಒಂದೊಂದು ಮದುವೆಗೂ ಆಯಾ ಮದುವೆಯ ಥೀಮ್ಗೆ ತಕ್ಕಂತೆ, ಇಲ್ಲವೇ ಸ್ಟೇಟಸ್ಗೆ ತಕ್ಕಂತೆ ತೆರಳಬಹುದು ಎನ್ನುತ್ತಾರೆ ಅವರು. ಮನೆಯ ಮದುವೆ ಅಥವಾ ಫ್ಯಾಮಿಲಿ ಸದಸ್ಯರ ಮದುವೆಯಾದಲ್ಲಿ ಗ್ರ್ಯಾಂಡ್ ಲುಕ್ನಲ್ಲಿ ಕಾಣಿಸಿಕೊಳ್ಳುವುದು ಅಗತ್ಯ. ಕೊಂಚ ಟ್ರೆಂಡಿಯಾಗಿ ಕಾಣಿಸುವುದು ಅವಶ್ಯ. ಅವಿವಾಹಿತ ಹುಡುಗಿಯರಾದಲ್ಲಿ ಎಥ್ನಿಕ್ನಲ್ಲೆ ಮಾಡರ್ನ್ ಲುಕ್ ನೀಡುವ ಗೌನ್, ಲೆಹೆಂಗಾ, ಗಾಗ್ರ ಹಾಗೂ ರೆಡಿಮೇಡ್ ಸೀರೆ ಧರಿಸಬಹುದು. ಇನ್ನು ವಿವಾಹಿತ ಮಹಿಳೆಯರು ಅವರ ವಯಸ್ಸಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ಕೊಂಚ ಮಾಡರ್ನ್ ಮಹಿಳೆಯಾದಲ್ಲಿ ಟೂ ಪೀಸ್ ಲೆಹೆಂಗಾ ಹಾಗೂ ಗೌನ್ ಧರಿಸಬಹುದು. ವಯಸ್ಸಾದ ಮಹಿಳೆಯರು ನಾನಾ ಬಗೆಯ ಡಿಸೈನರ್ ಸಿಲ್ಕ್ ಸೀರೆಗಳನ್ನು ಉಡಬಹುದು. ಸ್ನೇಹಿತರ ಮದುವೆಯಲ್ಲಿ... ಸ್ನೇಹಿತರ ಮದುವೆಯಲ್ಲೂ ಆಕರ್ಷಕವಾಗಿ ಕಾಣುವುದು ಇಂದಿನ ಯುವಕ-ಯುವತಿಯರ ಆಸೆ. ಇದು ಅವರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ವಯಸ್ಸಿನವರೂ ಕೂಡ ಇತ್ತೀಚೆಗೆ ಇದನ್ನೇ ಬಯಸುತ್ತಿದ್ದಾರೆ. ತೀರಾ ಆತ್ಮಿಯ ಸ್ನೇಹಿತರಾದಲ್ಲಿ ಆದಷ್ಟೂ ಗ್ರ್ಯಾಂಡ್ ಡಿಸೈನರ್ವೇರ್ ಧರಿಸಬಹುದು. ಇಲ್ಲವಾದಲ್ಲಿ ಜುವೆಲ್ಗಳನ್ನು ಕಡಿಮೆಗೊಳಿಸಿ ಡಿಸೈನರ್ವೇರ್ ಧರಿಸಬಹುದು. ಒಟ್ಟಾರೆ, ಮದುಮಗ ಹಾಗೂ ಮದುಮಗಳಿಗಿಂತ ಗ್ರ್ಯಾಂಡಾಗಿರಬಾರದು ಎನ್ನುತ್ತಾರೆ ಡಿಸೈನರ್ಸ್ ಮದುವೆ ಮನೆಯಲ್ಲಿ ಮಕ್ಕಳ ಕಲರವ ಇನ್ನು ಮಕ್ಕಳಿಗೆ ಹೇಗೆ ಬೇಕೋ ಹಾಗೆ ಉಡುಪನ್ನು ಹಾಕಿ ಸುಮ್ಮನಾಗುವಂತಿಲ್ಲ. ಯಾಕೆಂದರೆ, ಮಕ್ಕಳಿಗೆ ನಾನಾ ಬಗೆಯ ಫ್ಯಾಷನೆಬಲ್ ಉಡುಪುಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಹುಡುಗಿಯರಿಗೆ ಏಂಜೆಲ್ ಫ್ರಾಕ್, ಸಿಂಡ್ರೆಲಾ ಗೌನ್, ಬಲೂನ್ ಟಾಪ್, ಶಾರ್ಟ್ಸ್ ಹೀಗೆ ನಾನಾ ಶೈಲಿಯದ್ದು ಲಭ್ಯ. ಹುಡುಗರಿಗೂ ಅಷ್ಟೇ ಶೆರ್ವಾನಿ ಹಾಗೂ ಎಥ್ನಿಕ್ ಸೂಟ್ಗಳು ಆಕರ್ಷಕವಾಗಿ ಕಾಣುತ್ತವೆ. ಕ್ರಿಸ್ ಕ್ರಾಸ್ ಬಟನ್ಸ್ ಇರುವಂತಹ ಕುರ್ತಾ ಟಾಪ್ಗಳು ಚೆನ್ನಾಗಿ ಕಾಣುತ್ತವೆ. ------------- ಬಾಕ್ಸ್ ಪುರುಷರ ಔಟ್ಲುಕ್ ಜವಾಬ್ದಾರಿಯ ಕೆಲಸ ಹೊಂದಿರುವ ಹುಡುಗರು ಕೂಡ ಮದುವೆ ಮನೆಯಲ್ಲಿ ನೋಡಲು ಚೆನ್ನಾಗಿ ಕಂಡರೇ ಚೆನ್ನ ಎನ್ನುತ್ತಾರೆ ಮಾಡೆಲ್ ಕಮ್ ನಟ ರಾಜೇಶ್. ಅವರ ಪ್ರಕಾರ, ಮದುವೆಯಾಗದ ಹುಡುಗರು ಆದಷ್ಟೂ ಇಂದು ಹೆಚ್ಚು ಟ್ರೆಂಡಿಯಾಗಿರುವ ಲಾಂಗ್ ಶೆರ್ವಾನಿ, ಶೈನಿಂಗ್ ಕುರ್ತಾ, ಕಾಲರ್ ಬ್ಲೇಝರ್, ಸ್ಪ್ರೇಟ್ ಕಟ್ ಪ್ಯಾಂಟ್ಸ್, ಇಲ್ಲವೇ ಹಾರೆಮ್ ಪ್ಯಾಂಟ್ಸ್ ಅಥವಾ ಪಟಿಯಾಲಕ್ಕೆ ಮ್ಯಾಚ್ ಆಗುವ ಡಿಸೈನರ್ ಕುರ್ತಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮದುವೆಯಾದ ಪುರುಷರು ಕೂಡ ಫಿಟ್ ಆ್ಯಂಡ್ ಫೈನ್ ಆಗಿದ್ದಲ್ಲಿ ಇವನ್ನೇ ಧರಿಸಬಹುದು. ಕೊಂಚ ಪ್ಲಂಪಿಯಾಗಿರುವ ಪುರುಷರು ಆದಷ್ಟೂ ಹೊಟ್ಟೆ ಕಾಣುವಂತಹ ಡಿಸೈನರ್ವೇರ್ಗೆ ಮೊರೆ ಹೋಗಬಾರದು ಎಂದು ಸಲಹೆ ನೀಡುತ್ತಾರೆ. ------------------- ಸಿಂಗಾರಕ್ಕೆ ಪ್ರಾಮುಖ್ಯತೆ ಗ್ರ್ಯಾಂಡ್ಲುಕ್ಗೆ ಆದ್ಯತೆ ನೀಡಿ. ಹೇರ್ಸ್ಟೈಲ್ಗೂ ಪ್ರಾಮುಖ್ಯತೆ ನೀಡಿ. ಧರಿಸುವ ಜುವೆಲ್ ಡಿಸೈನರ್ವೇರ್ಗೆ ಮ್ಯಾಚ್ ಆಗಬೇಕು. ಮದುವೆ ಮನೆಯ ಸೆಂಟರ್ ಆಫ್ ಅಟ್ರಾಕ್ಷನ್ ನೀವಾಗಲು ಯತ್ನಿಸಿ. ---------------------- ಮದುವೆ ಮನೆ ಕೂಡ ಫ್ಯಾಷನ್ ರಾರಯಂಪ್ ಇದ್ದಂತೆ. ಪ್ರತಿಯೊಬ್ಬರ ಉಡುಪುಗಳನ್ನು ನೋಡುವುದೇ ಒಂದು ಬಗೆಯ ಆನಂದ. - ಪರಿ, ಡಿಸೈನರ್-----------------
ವೆಡ್ಡಿಂಗ್ ಡೆಕೋರೇಷನ್
- ಶೀಲಾ ಸಿ. ಶೆಟ್ಟಿ ಇಂದು ರಾಯಲ್ ವೆಡ್ಡಿಂಗ್ ಡೆಕೋರೇಷನ್ ಟ್ರೆಂಡಿಯಾಗಿದೆ. ರಾಯಲ್ ವೆಡ್ಡಿಂಗ್ ಕೇವಲ ಗಣ್ಯರ ಹಾಗೂ ಶ್ರೀಮಂತರ ಡೆಕೋರೇಷನ್ ಕಾನ್ಸೆಪ್ಟ್ ಆಗಿಲ್ಲ, ಬದಲಿಗೆ ಬಜೆಟ್ಗೆ ತಕ್ಕಂತೆ ರಾಯಲ್ ಥೀಮ್ ಆರೆಂಜ್ ಮಾಡುವ ವ್ಯವಸ್ಥೆ ಪರಿಚಿತಗೊಂಡಿವೆ. ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ, ಆಯಾ ಬಜೆಟ್ಗೆ ತಕ್ಕಂತೆ ಗುಣಮಟ್ಟದ ಇಲ್ಲವೇ ಬಜೆಟ್ ಫ್ರೆಂಡ್ಲಿ ರಾಯಲ್ ವೆಡ್ಡಿಂಗ್ ಡೆಕೋರೇಷನ್ ಕಾನ್ಸೆಪ್ಟ್ ಪ್ರಚಲಿತದಲ್ಲಿವೆ. 'ಮದುವೆ ಮನೆಯ ಸಿಂಗಾರ ಇಂದು ಎಲ್ಲರನ್ನು ಆಕರ್ಷಿಸುವ ತಂತ್ರ ಮಾತ್ರವಲ್ಲ, ಟ್ರೆಂಡಿಯಾಗಿದೆ. ನಾನಾ ಬಗೆಯ ಡೆಕೋರೇಷನ್ಗಳು ಕಾಲಿಟ್ಟಿದ್ದು, ಅವುಗಳಲ್ಲಿ ಈ ಕೆಳಗಿನವು ಹೆಚ್ಚು ಬೇಡಿಕೆಯಲ್ಲಿದೆ. ಔಟರ್ ರಾಯಲ್ ಲುಕ್ ಔಟರ್ ರಾಯಲ್ ಲುಕ್ ಡೆಕೋರೇಷನ್ ಇಂದು ಅತಿ ಹೆಚ್ಚು ಮದುವೆಗಳಲ್ಲಿ ಕಾಮನ್ ಆಗುತ್ತಿದೆ. ನೋಡಲು ವೈಭವವನ್ನು ಎತ್ತಿ ಹಿಡಿಯುವ ಅಲಂಕಾರಗಳು ಶ್ರೀಮಂತರನ್ನು ಮಾತ್ರವಲ್ಲ, ಸಾಮಾನ್ಯ ಮದುವೆಗಳಲ್ಲೂ ಸಾಮಾನ್ಯವಾಗತೊಡಗಿದೆ. ರಾಜ ಮಹಾರಾಜರ ಗತಕಾಲದ ವೈಭವವನ್ನು ನೆನಪಿಸುವ ಕಂಬಗಳು, ಗೋಡೆಗಳು ಕಲಾತ್ಮಕವಾಗಿ ಕಾಣುತ್ತವಲ್ಲದೆ, ನೋಡಲು ಆಕರ್ಷಕವಾಗಿ ಕಾಣುತ್ತವೆ. ಆಕರ್ಷಕ ್ಟ ರಾಯಲ್ ಲೈಟಿಂಗ್ಸ್/ಹ್ಯಾಂಗಿಂಗ್ಸ್ ನೋಡಲು ಸ್ವರ್ಗದಂತೆ ಕಾಣುವ ವೈಟ್ ಹಾಗೂ ಕ್ರೀಮ್ ವರ್ಣದ ಮಲ್ಟಿಪಲ್ ರಾಯಲ್ ಲುಕ್ ನೀಡುವ ಲೈಟಿಂಗ್ಸ್ ಬ್ಯಾಕ್ಗ್ರೌಂಡ್ ಡೆಕೋರೇಷನ್ಗೆ ಸುಂದರವಾಗಿ ಕಾಣುತ್ತವೆ. ಇಂದು ನಾನಾ ಬಗೆಯ ಹ್ಯಾಂಗಿಂಗ್ಸ್ ಲೈಟಿಂಗ್ಸ್ ಹೆಚ್ಚು ಶೇಡ್ ಹಾಗೂ ವರ್ಣಗಳಲ್ಲಿ ದೊರೆಯುತ್ತವೆ. ಆಯಾ ಸ್ಟೇಜ್ನ ಆಕಾರ ಹಾಗೂ ವಿಸ್ತೀರ್ಣಕ್ಕೆ ತಕ್ಕಂತೆ ಇವನ್ನು ಬಳಸಬಹುದು. ಇನ್ನು ಒಳ ದಾರಿಯುದ್ದಕ್ಕೂ ಥೀಮ್ ಲೈಟಿಂಗ್ಸ್ ಹಾಗೂ ಹ್ಯಾಂಗಿಂಗ್ ಲೈಟ್ಗಳನ್ನು ಬಳಸಬಹುದು. ಗ್ರ್ಯಾಂಡ್ ಫ್ಲವರ್ ಡೆಕೋರೇಷನ್ ಹಿಂದಿನ ದಿನಗಳಲ್ಲಿ ಹೂಗಳ ಅಲಂಕಾರದಂತೆ ಜೋಡಿಸುವ ಕಾಲ ಈಗಿಲ್ಲ. ಅಪರೂಪದ ಹೂವುಗಳ ಅಲಂಕಾರ ಹಾಗೂ ವಿದೇಶಿ ಹೂಗಳನ್ನು ಬೆರಕೆ ಮಾಡಿ ಮಾಡುವ ರಾಯಲ್ ಅಲಂಕಾರ ಹೆಚ್ಚು ಟ್ರೆಂಡ್ನಲ್ಲಿದೆ. ಥೀಮ್ ಪ್ರಕಾರ ಕಲರ್ಫುಟ್ ವರ್ಣಗಳ ಹೂವಿನ ಜೋಡಣೆ ಕೂಡ ಇಂದು ಪ್ರಾಮುಖ್ಯತೆ ಪಡೆಯುತ್ತಿದೆ. ಇದರೊಂದಿಗೆ ಮಿಕ್ಸ್ ಮ್ಯಾಚ್ ಆರ್ಟಿಫಿಷಿಯಲ್ ಹೂಗಳ ಡ್ರೆಫ್ಸ್ ಕೂಡ ಎಲ್ಲರ ಮನ ಸೆಳೆಯುವಂತಹ ವಿನ್ಯಾಸದಲ್ಲಿ ತೂಗು ಹಾಕುವುದು ಇಂದಿನ ರಾಯಲ್ ಟ್ರೆಂಡ್ನಲ್ಲೊಂದು. ಡ್ರಾಮಾಟಿಕ್ ಸ್ಯಾಟೀನ್ ಡ್ರೆಫ್ಸ್ ರಾಜರ ಅರಮನೆಯಲ್ಲಿದ್ದಂತೆ ಬೃಹತ್ತಾದ ಸ್ಯಾಟೀನ್ ಸ್ಕ್ರೀನ್ಗಳನ್ನು ಇಳೆ ಬಿಡುವುದು ಇಂದಿನ ಮದುವೆ ಮನೆಗಳಲ್ಲಿ ಹೆಚ್ಚಾಗತೊಡಗಿದೆ. ಅದರಲ್ಲೂ ರಿಸೆಪ್ಷನ್ ನಡೆಯುವ ದಿನ ಸ್ಟೇಜ್ ಮೇಲೆ ಈ ರೀತಿಯ ಅಲಂಕಾರ ಫೋಟೋ ವಿಡೀಯೋಗಳಲ್ಲಿ ಅತ್ಯಾಕರ್ಷಕವಾಗಿ ಕಾಣುತ್ತದೆ. ಪಾಸ್ಟೆಲ್ ಕಲರ್ಗಳು ಕೂಡ ಚೆನ್ನಾಗಿ ಕಾಣುತ್ತವೆ. ಹವಮಾನಕ್ಕೆ ಹೊಂದುವ ವರ್ಣಗಳು ಡ್ರಾಮಾಟೀಕ್ ಇಮೇಜ್ ನೀಡುತ್ತವೆ. ಅದರಲ್ಲೂ ಫೇರಿ ಟೇಲ್ನಂತೆ ಕಾಣುವ ಥೀಮ್ ವೆಡ್ಡಿಂಗ್ ಫಂಕ್ಷನ್ಗಳಲ್ಲಿ ಕಾಮನ್ ಆಗತೊಡಗಿದೆ. ----------------- ಬಾಕ್ಸ್ ಉದ್ಯಾನವನದಲ್ಲಿ ಮದುವೆ ತನು-ಮನಕ್ಕೆ ತಂಪನ್ನೆರೆಯುವ ಗಿಡ-ಮರಗಳ ಪರಿಸರದಲ್ಲಿ ನಡೆಯುವ ಮದುವೆಗಳು ಇಂದಿನ ಟ್ರೆಂಡಿ ರಾಯಲ್ ಸೆಲೆಬ್ರೆಷನ್ನಲ್ಲಿದೆ. ಹೊರಗಿನ ವಾತವಾರಣದಲ್ಲಿ ಮದುವೆಯಾಗದಿದ್ದವರು, ಒಳಾಂಗಣದಲ್ಲೆ ಹಸಿರು ಗಿಡಗಳನ್ನು ಜೋಡಿಸಬಹುದು. ಹೂ-ಬಳ್ಳಿಗಳನ್ನು ಇರಿಸಬಹುದು. ಜೊತೆಗೆ ಗೋ ಗ್ರೀನ್ ಕಾನ್ಸೆಪ್ಟ್ಗೆ ಆದ್ಯತೆ ನೀಡಬಹುದು. ಹಸಿರು ವಾತಾವರಣ ವೆಡ್ಡಿಂಗನ್ನು ಗೋ ಗ್ರೀನ್ ಕಾನ್ಸೆಪ್ಟ್ಗೆ ಹೇಳಿ ಮಾಡಿಸಿದಂತಿರುತ್ತದೆ. --------------------- ಪರ್ಸನಲೈಸ್ಡ್ ರಾಯಲ್ ಡೆಕೋರೇಷನ್ ಇಂದು ಪರ್ಸನಲೈಸ್ಡ್ ಡೆಕೋರೇಷನ್ ಕಾನ್ಸೆಪ್ಟ್ ಕೂಡ ಎಲ್ಲರನ್ನು ಸೆಳೆದಿದೆ. ಕಡಿಮೆ ವೆಚ್ಚದಲ್ಲಿ ಬಜೆಟ್ಗೆ ಸೂಟ್ ಆಗುವಂತೆ ವೆಡ್ಡಿಂಗ್ ಪ್ಲಾನ್ ಮಾಡುವುದು ಇದರಲ್ಲಿ ಸೇರಿದೆ. ವಧು-ವರರ ಇಚ್ಛಾನುಸಾರವನ್ನು ಇಲ್ಲಿ ಪರಿಗಣಿಸಲಾಗುತ್ತದೆ. ಆರಂಭದಿಂದಿಡಿದು ಎಲ್ಲವನ್ನು ಪರಿಗಣಿಸಿ ಡೆಕೋರೇಷನ್ ಮಾಡಲಾಗುತ್ತದೆ. --------------------- ಮದುವೆ ಮನೆಯ ಡೆಕೋರೇಷನ್ ಇಂದು ವೆಡ್ಡಿಂಗ್ನ ಪ್ರಮುಖ ಭಾಗವಾಗಿದೆ. ಇದಕ್ಕಾಗಿ ಸಾಕಷ್ಟು ಖರ್ಚು ವೆಚ್ಚ ಮಾಡುತ್ತಿರುವುದು ಸಾಮಾನ್ಯವಾಗಿದೆ. - ಪೂಜಾ , ವೆಡ್ಡಿಂಗ್ ಪ್ಲಾನರ್
ಬೇಸಿಗೆ ವರ್ಕೌಟ್
- ಶ್ರೀದೇವಿ ಅಂಬೆಕಲ್ಲು ಬೇಸಿಗೆ ಕಾಲಕ್ಕೆ ತಕ್ಕಂತೆ ಪ್ರತಿದಿನ ಸಹಜವಾಗಿಯೇ ನೀರು, ಫ್ರೆಶ್ ಜ್ಯೂಸ್ ಕುಡಿಯುತ್ತೇನೆ. ತರಹೇವಾರಿ ಹಣ್ಣು, ಸಲಾಡ್ಗಳನ್ನು ಸೇವಿಸುತ್ತೇನೆ. ಸಂಜೆ ಹೊತ್ತು ಹೆವ್ವಿ ಫುಡ್ ಸೇವಿಸುವುದಿಲ್ಲ. ಮನೆಯಲ್ಲಿ ಅಮ್ಮ ಮಾಡಿದ ಆಹಾರವನ್ನೇ ಹೆಚ್ಚಾಗಿ ಸೇವಿಸುತ್ತೇನೆ. ಹೊರಗಡೆ ಫುಡ್ ಅಷ್ಟಕಷ್ಟೇ. ಶೂಟಿಂಗ್ ಸಂದರ್ಭದಲ್ಲಿಯೂ ಮಜ್ಜಿಗೆ, ನೀರು, ನಿಂಬೆಹಣ್ಣಿನ ಜ್ಯೂಸ್, ಹಣ್ಣಿನ ರಸವನ್ನೇ ಹೆಚ್ಚಾಗಿ ಕುಡಿಯುತ್ತೇನೆ. ಪ್ರತಿದಿನ ಒಂದು ಬಾಟಲ್ ಮಜ್ಜಿಗೆ ಜತೆಯಲ್ಲಿ ಇದ್ದೇ ಇರುತ್ತದೆ. ಹೆಚ್ಚಾಗಿ ಲಿಕ್ವಿಡ್ ಫುಡ್ಗೆ ಪ್ರಾಮುಖ್ಯತೆ ನೀಡುತ್ತೇನೆ. ಡಯೆಟ್ ಮಾಡುವುದಿಲ್ಲ. ಸಿನಿಮಾಗಳಲ್ಲಿ ನಟಿಸುವಾಗ ಆಯಾ ಪಾತ್ರಕ್ಕೆ ತಕ್ಕಂತೆ ಪರ್ಸನಾಲಿಟಿ ಇರಬೇಕಾಗುತ್ತದೆ. ಕೆಲವು ಚಿತ್ರಗಳಿಗೆ ಸ್ಲಿಮ್ ಆಗಿರಬೇಕು, ಇನ್ನು ಕೆಲವು ಚಿತ್ರಗಳಿಗೆ ಬಬ್ಲಿ ಪಾತ್ರ ಬೇಕಿರುತ್ತದೆ. ಅದಕ್ಕನುಗುಣವಾಗಿ ಆಹಾರ ಸೇವನೆ ಮಾಡುತ್ತೇನೆ. ಬೇಸಿಗೆ ವರ್ಕೌಟ್ ಬೇಸಿಗೆಯಲ್ಲಿ ಸರಿಯಾಗಿ ವರ್ಕೌಟ್ ಮಾಡುತ್ತೇನೆ. ಆ ಮೂಲಕ ದೇಹದ ಸಮತೋಲನ ಕಾಯ್ದುಕೊಳ್ಳುತ್ತೇನೆ. ಪ್ರತಿದಿನ ಬೆಳಗ್ಗೆ ಇಲ್ಲವೇ ಸಂಜೆ ಹೊತ್ತು ಜಿಮ್ಗೆ ಹೋಗುತ್ತೇನೆ. ಕಾಲೇಜಿಗೂ ಹೋಗುವುದರಿಂದ ಹೆಚ್ಚಾಗಿ ಸಂಜೆಯೇ ಜಿಮ್ಗೆ ಹೋಗುತ್ತೇನೆ. ಪ್ರತಿದಿನ ಹದಿನೈದು ನಿಮಿಷ ಥ್ರೆಡ್ಮಿಲ್ ಮಾಡುತ್ತೇನೆ. ಬ್ಯೂಟಿ ಸೀಕ್ರೇಟ್ ಅಂತದ್ದೇನೂ ಇಲ್ಲ. ಮನೆಯಲ್ಲಿ ಅಮ್ಮ ಮಾಡಿದ ಕಡಲೆಹಿಟ್ಟು, ಹಾಲಿನ ಕೆನೆ, ಅರಿಶಿಣವನ್ನು ವಾರಕ್ಕೊಮ್ಮೆ ಮುಖಕ್ಕೆ ಹಚ್ಚಿಕೊಳ್ಳುತ್ತೇನೆ. ನೀರು ಚೆನ್ನಾಗಿ ಕುಡಿಯುತ್ತೇನೆ. ನೀರು, ತರಕಾರಿ, ಹಣ್ಣುಗಳು ಹಾಗೂ ತರಕಾರಿ ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ತ್ವಚೆಯ ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು.
ಮ್ಯಾಂಗೋ
-ಲವಲವಿಕೆಸುದ್ದಿಲೋಕ ಮಾವಿನ ಹಣ್ಣಿನ ಸುವಾಸನೆ, ಬಣ್ಣ ಹಾಗೂ ರುಚಿಗೆ ಮಾರುಹೋಗದವರೇ ಇಲ್ಲ. ಮಕ್ಕಳಿಂದ ವಯಸ್ಕರವರೆಗೂ ಎಲ್ಲರೂ ಬಹಳ ಇಷ್ಟಪಡುವ ಮಾವಿನ ಹಣ್ಣಿನಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ನಾರಿನಂಶ (ಫೈಬರ್) ಹೆಚ್ಚಾಗಿದೆ. ನೀರಿನಂಶ ಕೂಡಾ ಇದೆ. ಅನೇಕ ಖನಿಜಾಂಶಗಳಿವೆ. ಉತ್ತಮ ಜೀರ್ಣಕಾರಕವೂ ಹೌದು. ಹೀಗೆ ರುಚಿಕರ ಹಾಗೂ ಆರೋಗ್ಯಕರವಾದ ಮಾವಿನ ಹಣ್ಣನ್ನು ಎಷ್ಟು ಚೆನ್ನಾಗಿ ಆರಿಸಿ ತಂದರೂ ಕೆಲವೊಂದು ಬಹಳ ಹುಳಿಯಾಗಿರುತ್ತದೆ. ಆಗ ಅದನ್ನು ತಿನ್ನಲೂ ಆಗದೆ ಎಸೆಯಲೂ ಆಗದೆ ಬಹಳಷ್ಟು ಜನ ಗೊಂದಲಕ್ಕೀಡಾಗುತ್ತಾರೆ. ಹುಳಿಮಾವಿನ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಸಿ ಹಾಗೂ ಎಎಚ್ಎ ಮತ್ತು ಅಸ್ಟ್ರಿಜಂಟ್ ಇರುವುದರಿಂದ ಇದನ್ನು ಸೌಂದರ್ಯವರ್ಧಕವಾಗಿ ಮತ್ತು ನುಣ್ಣಗೆ ಅರೆದು ತಲೆಹೊಟ್ಟಿಗೆ ಔಷಧವಾಗಿಯೂ ಉಪಯೋಗಿಸಬಹುದು. ಹುಳಿಮಾವಿನ ಹಣ್ಣನ್ನು ಉಪಯೋಗಿಸುವ ವಿಧಾನ ಇಲ್ಲಿದೆ. *ಮಾವಿನ ಹಣ್ಣಿನ ಗೊರಟನ್ನು ಸ್ನಾನ ಮಾಡುವಾಗ ಮೈ ಉಜ್ಜಲು ಬಳಸಿದರೆ ಅನೇಕ ಚರ್ಮ ರೋಗ ನಿವಾರಣೆಯಾಗುತ್ತದೆ ಹಾಗೂ ಬೆವರಿನ ವಾಸನೆಯೂ ಕಡಿಮೆಯಾಗುತ್ತದೆ. * ಮಾವಿನ ಹಣ್ಣನ್ನು ಮರದಿಂದ ಕಿತ್ತ ತಕ್ಷಣ ಬರುವ ಅಂಟು ದ್ರವವನ್ನು ಗಜಕರ್ಣ ಹಾಗೂ ಇಸುಬಿಗೆ ಔಷಧಿಯಾಗಿ ಬಳಸಬಹುದು. ಕತ್ತಿನ ಸುತ್ತಲು ಇರುವ ಕಪ್ಪು ಕಲೆಯನ್ನು ಹೋಗಲಾಡಿಸಲು ಹುಳಿ ಮಾವಿನ ಹಣ್ಣಿನ ಗೊರಟಿಗೆ ಸ್ವಲ್ಪ ಉಪ್ಪು ಹಚ್ಚಿ ಲಘುವಾಗಿ ಗೊರಟಿನಿಂದ ಮಸಾಜ್ ಮಾಡಿದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ. * ಮೊಣಕೈ ಹಾಗೂ ಕಾಲಿನ ಮಂಡಿಯ ಬಳಿ ಕಪ್ಪು ಕಲೆ ಹಾಗೂ ಚರ್ಮ ಒರಟಾಗಿದ್ದರೆ ಹುಳಿ ಮಾವಿನ ತಿರುಳಿಗೆ ಸ್ವಲ್ಪ ಬೆಣ್ಣೆ ಸೇರಿಸಿ ಮಸಾಜ್ ಮಾಡಿ ನೋಡಿ. * ಮಕ್ಕಳಲ್ಲಿ ಕಾಡುವ ತುರಿಕೆಗೆ ಹುಳಿ ಮಾವಿನ ರಸವನ್ನು ಲೇಪಿಸುವುದರಿಂದ ಉತ್ತಮ ಫಲ ದೊರೆಯುತ್ತದೆ. * ಕೇವಲ ಹುಳಿ ಮಾವಿನ ರಸ ಮತ್ತು ಗೊರಟಲ್ಲ. ಇದನ್ನು ಬೇಯಿಸಿ ಕೂಡ ಚರ್ಮ ಹಾಗೂ ಕೂದಲಿಗೆ ಲೇಪಿಸಬಹುದು. ಇದರಿಂದ ಚರ್ಮ ಹಾಗೂ ಕೂದಲು ನಯವಾಗುತ್ತದೆ. * ತಲೆಯಲ್ಲಿ ಹೊಟ್ಟು ಅಥವಾ ತುರಿಕೆ ಇದ್ದಂತೆ ಬೇಯಿಸಿದ ಹುಳಿ ಮಾವಿನ ಹಣ್ಣಿಗೆ ಸ್ವಲ್ಪ ಸೀಗೆಕಾಯಿ ಹಾಗೂ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ 15 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇನ್ನು ಬೇಸಿಗೆಯಲ್ಲಿ ಕೂದಲು ಕಳಾಹೀನವಾಗಿ, ಅಂಟಿಕೊಂಡಂತಿದ್ದರೆ ಹುಳಿ ಮಾವಿನ ರಸಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿ ಹಾಗೂ ಮೊಸರನ್ನು ಬೆರೆಸಿ ಕೂದಲಿಗೆ ಹಚ್ಚಿ. * ಕೇವಲ ಚರ್ಮಕ್ಕೆ ಮಾತ್ರವಲ್ಲ, ಮಾವಿನ ಸೇವನೆಯಿಂದ ರಕ್ತಹೀನತೆ, ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿ, ಮಲಬದ್ಧತೆ ಹೀಗೆ ಇನ್ನೂ ಅನೇಕ ರೋಗಗಳಿಗೆ ಪರಿಹಾರ ಕಾಣಬಹುದು.
ಫಾಲೋ ಮಿ ಟ್ರೆಂಡ್
- ಶೀಲಾ ಸಿ. ಶೆಟ್ಟಿ ಫಾಲೋ ಮಿ ಟು ಟ್ರೆಂಡ್ ಇಂದು ಟ್ರಾವೆಲ್ ಪ್ರಿಯ ಹುಡುಗಿಯರ ಕ್ರೇಝ್ನಲ್ಲಿ ಸೇರಿದೆ. ತಾವು ಭೇಟಿ ನೀಡುವ ಸ್ಥಳದಲ್ಲಿ ಹಿಂಬದಿ ಪೋಸ್ನಲ್ಲಿ, ಸ್ಥಳವನ್ನು ಮಾತ್ರ ಹೈಲೈಟ್ ಮಾಡುವ ಈ ಫೋಟೋ ಕ್ರೇಝ್ ಇದೀಗ ಟ್ರಾವೆಲ್ ಬ್ಲಾಗ್ಗಳಿಂದ ಸೋಷಿಯಲ್ ಮೀಡಿಯಾಗೆ ದಾಳಿ ಇಟ್ಟಿವೆ. ಪೊಫೆಷನಲ್ ಕ್ಯಾಮರಾದಿಂದ ಮೊಬೈಲ್ ಕ್ಯಾಮರಾಗೆ ಈ ಟ್ರೆಂಡ್ ಶಿಫ್ಟ್ ಆಗಿದೆ. ಏನಿದು ಫಾಲೋ ಮೀ ಟು ಫೋಟೋ ಕ್ರೇಝ್ 'ಫಾಲೋ ಮೀ ಟು' ಕಾನ್ಸೆಪ್ಟ್ನ ಫೋಟೋಗಳಲ್ಲಿ ಯಾವುದೇ ಕಾರಣಕ್ಕೂ ಮುಖ ಕಾಣುವುದಿಲ್ಲ. ಮುಂದೆ ಭೇಟಿ ನೀಡಿರುವ ಸ್ಥಳ ಹಾಗೂ ಹಿಂಬದಿಯಲ್ಲಿ ಸಂಗಾತಿಯ ಇಲ್ಲವೇ ಸ್ನೇಹಿತನ ಕೈ ಹಿಡಿದ ಬೆನ್ನಿನ ಭಾಗ ಮಾತ್ರ ಕಂಡು ಬರುತ್ತದೆ. ಅಂದಹಾಗೆ, ಈ ಟ್ರೆಂಡ್ನಲ್ಲಿ ಬ್ಯಾಕ್ ಗ್ರೌಂಡ್ನಲ್ಲಿರುವ ಕೈ ಹಿಡಿದ ಹುಡುಗನೇ ಫೋಟೋ ಕ್ಲಿಕ್ಕಿಸುವುದು ವಿಶೇಷವಂತೆ. ಮುಖಾರವಿಂದಕ್ಕೆ ಇಲ್ಲಿ ಪ್ರಾಮುಖ್ಯತೆ ಇಲ್ಲ ಎನ್ನುತ್ತಾರೆ ಟ್ರೆಂಡ್ ಫಾಲ ಮಾಡುವವರು. ಟ್ರೆಂಡ್ ಹುಟ್ಟು ಹಾಕಿದ ತೈವಾನೀಸ್ ಅಂದ ಹಾಗೆ, ಈ ಟ್ರೆಂಡ್ ನಮ್ಮಲ್ಲಿ ಕಳೆದ ಸಾಲಿನಲ್ಲಿ ಆರಂಭವಾಗಿ ನಿಧಾನಗತಿಯಲ್ಲಿ ಸಾಮಾನ್ಯ ಜನರನ್ನು ಸೆಳೆಯುತ್ತಿದೆ. ಪ್ರಯೋಗ ಮಾಡುವತ್ತ ಆಕರ್ಷಿಸಿದೆ. ಆದರೆ, ಈ ಟ್ರೆಂಡನ್ನು ಪ್ರಪಂಚದಾದ್ಯಂತ ತಿರುಗಿ ಹುಟ್ಟು ಹಾಕಿದವರು ತೈವಾನ್ನವರು. ತೈವಾನ್ನ ಜೋಡಿ ಪ್ರಪಂಚಾದಾದ್ಯಂತ ಟ್ರಾವೆಲ್ ಮಾಡುತ್ತಾ ಈಜಿಪ್ಟ್ ಸೇರಿದಂತೆ ನಾನಾ ಕಡೆ ತಿರುಗಿ ಅಲ್ಲಿಗೆ ವಿಸಿಟ್ ಹಾಕುತ್ತಿರುವಂತೆ ಕ್ಲಿಕ್ಕಿಸಿದ ಫೋಟೋ ಆಗಲೇ ಹೆಚ್ಚು ಹರಿದಾಡಿದ್ದವು. ಅದನ್ನು ನೋಡಿದ ಫೋಟೋ ಕ್ರೇಝ್ ಇರುವ ಟ್ರಾವೆಲ್ ಮಾಡುವ ಹುಡುಗಿಯರು ತಾವು ಕೂಡ ಇಂತಹದ್ದೇ ಫೋಟೋಗಳನ್ನು ಕ್ಲಿಕ್ಕಿಸಿ ತಮ್ಮ ಟ್ರಾವೆಲ್ ಬ್ಲಾಗ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡತೊಡಗಿದರು. ನಿಧಾನಗತಿಯಲ್ಲಿ ಆರಂಭವಾದ ಈ ಕ್ರೇಝ್ ಇದೀಗ ಚಿಕ್ಕ ಪುಟ್ಟ ಹಿಸ್ಟಾರಿಕಲ್ ಸ್ಥಳಗಳು ಹಾಗೂ ಟ್ರಾವೆಲ್ ಸ್ಪಾಟ್ಗಳಲ್ಲೂ ತೆಗೆಯುವ ಕ್ರೇಝ್ ಹುಟ್ಟು ಹಾಕುವ ಮಟ್ಟಿಗೆ ಬೆಳೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರಾವೆಲ್ ಲವರ್ಸ್ ಪ್ರೇಮ ಮೊದಲೆಲ್ಲಾ ಕೇವಲ ಟ್ರಾವೆಲ್ ಬ್ಲಾಗ್ಗಳಲ್ಲಿ ಕಾಣಬಹುದಾಗಿದ್ದ ಈ ಬಗೆಯ ಫೋಟೋಗಳು, ಇದೀಗ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡತೊಡಗಿವೆ. ಇಂದು ಅತಿ ಹೆಚ್ಚು ಟ್ರಾವೆಲ್ ಫೋಟೋಗಳು ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುತ್ತಿದೆ. ಇಂದು ಮೊಬೈಲ್ನಲ್ಲಿ ಸೆಲ್ಫಿ ಅಪ್ಷನ್ಗಳು ಹೆಚ್ಚಾದಂತೆ ಇಂತಹ ಫೋಟೋಗಳನ್ನು ಕ್ಲಿಕ್ಕಿಸುವವರು ಅಧಿಕವಾಗಿದ್ದಾರೆ. ನಾನಾ ಟೆಕ್ನಿಕ್ಗಳಲ್ಲಿ ಫೋಟೋ ತೆಗೆಯುವವರಲ್ಲಿ ಸಾಮಾನ್ಯರು ಸೇರಿದ್ದಾರೆ. ಫೋಟೋಗ್ರಾಫರ್ ವ್ಯೂ ಎಲ್ಲರೂ ಪಕ್ಕಾ ಫೋಟೋಗ್ರಾಫರ್ಗಳಂತೆ ಕ್ಲಿಕ್ಕಿಸಲು ಸಾಧ್ಯವಿಲ್ಲ. ಆದರೂ ಮೊಬೈಲ್ನಲ್ಲೆ ಕ್ಲಿಕ್ಕಿಸತೊಡಗಿದ್ದಾರೆ. ಇದಕ್ಕಾಗಿ ಆನ್ಲೈನ್ನಲ್ಲೆ ಫೋಟೋಗ್ರಾಫಿ ಟುಟೋರಿಯಲ್ ಕೂಡ ನೋಡುತ್ತಾರಂತೆ. ---------------- ಫಾಲೋ ಮಿ ಫೋಟೋಗಳು ಆಯಾ ಸ್ಥಳಗಳ ಪ್ರಾಮುಖ್ಯತೆಯನ್ನು ತೋರ್ಪಡಿಸುತ್ತವೆ. ಜತೆಗೆ ಟ್ರಾವೆಲ್ ಎಕ್ಸ್ಪರ್ಟ್ನ ಆಸಕ್ತಿಯನ್ನು ವಿವರಿಸುತ್ತವೆ. - ಶೈನಿ ಅಲೆಕ್ಸಾಂಡರ್, ಸ್ಟೈಲಿಸ್ಟ್ ---------------------- ಫೋಟೋಗ್ರಾಫಿ ಬಗ್ಗೆ ಕೊಂಚ ಜ್ಞಾನವಿದ್ದರೇ ಸಾಕು, ಎಂತಹವರು ಉತ್ತಮ ಟ್ರಾವೆಲ್ ಫೋಟೋಗಳನ್ನು ಕ್ಲಿಕ್ಕಿಸಬಹುದು. ಧಿ- ಯಶಸ್ವಿ ಶಿವಾನಂದ್, ಫೋಟೋಗ್ರಾಫರ್ ------------------------ ಫಾಲೋ ಮಿ ಟ್ರೆಂಡ್ಗೂ ಮುನ್ನ... * ಟ್ರೆಂಡ್ ಬಗ್ಗೆ ತಿಳಿದುಕೊಳ್ಳಿ. * ಸೆಕೆಂಡ್ ಒಪಿನಿಯನ್ ಇಲ್ಲದೇ ಅಪ್ಲೋಡ್ ಮಾಡಿ ಅಪಹಾಸ್ಯಕ್ಕೆ ಈಡಾಗಬೇಡಿ. * ಫೋಟೋ ಕ್ವಾಲಿಟಿ ಚೆನ್ನಾಗಿರಲಿ --------------------- ಟಾಪ್ ಬಿಟ್ಸ್ * ಬೇಸಿಗೆಯಲ್ಲಿ ಲಭ್ಯವಿರುವ ಸೀಸನ್ ಫ್ರೂಟ್ಗಳು ಆಯಾ ಹವಾಮಾನಕ್ಕೆ ತಕ್ಕಂತಿರುತ್ತವೆ. ಅವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ. * ಬೇಸಿಗೆಯಲ್ಲಿ ಪ್ರವಾಸ ಮಾಡುವವರು ಆದಷ್ಟೂ ಡಿಹೈಡ್ರೇಷನ್ ಆಗದಂತೆ ಆಗಾಗ್ಗೆ ನೀರು, ತಾಜಾ ಹಣ್ಣಿನ ರಸಗಳನ್ನು ಸೇವಿಸುವುದು ಬೆಸ್ಟ್.
ಬೌಲಿಂಗ್ ಅಲೇ
ವಯಸ್ಸಿನ ಅಂತರವಿಲ್ಲದ ಆಡಬಹುದಾದ ಬೌಲಿಂಗ್ ಅಲೇ ಗೇಮ್ ಇಂದು ಮಾಲ್ಗಳಲ್ಲಿ ಟೈಂಪಾಸ್ ಗೇಮ್ ಲಿಸ್ಟ್ಗೆ ಸೇರಿದೆ. ಆಟವಾಡುವವರ ಹಾಗೂ ಜತೆಗಿರುವವರ ಕ್ರೇಜನ್ನು ಇದು ಹೆಚ್ಚಿಸುತ್ತಿದೆ ಎನ್ನುತ್ತಾರೆ ಸ್ಟಾರ್ ಸಿಟಿ ಬೌಲಿಂಗ್ ಸೆಂಟರ್ನ ಮ್ಯಾನೇಜರ್ ಶ್ರೀನಿವಾಸ್. ಅವರ ಪ್ರಕಾರ, ಈ ಗೇಮ್ ಥ್ರಲ್ ಜತೆಗೆ ಎಂಟರ್ಟೈನ್ಮೆಂಟ್ ಕೂಡ ನೀಡುತ್ತದಂತೆ. ಮೋಜು -ಮಸ್ತಿ ನೀಡುವ ಗೇಮ್ ಮೋಜ್-ಮಸ್ತಿಗೆ ಅವಕಾಶ ಸಿಗುವುದೇ ಈ ಗೇಮ್ನಲ್ಲಿ. ಕೋಕ್-ಪೆಪ್ಸಿ ಹೀರುತ್ತಾ, ಸ್ನಾಕ್ಸ್ ತಿನ್ನುತ್ತಾ ಬೌಲಿಂಗ್ ಮಾಡುತ್ತಿದ್ದರೆ, ಟೈಮ್ಪಾಸ್ ಆಗೋದೇ ಗೊತ್ತಾಗಲ್ಲ ಎನ್ನುವ ಸುಮಂತ್, ಬಂಟೂ, ನಮನಾಳ ಹೊಸ ಅಡ್ಡೆ ಅಮೀಬಾ ಬೌಲಿಂಗ್ ಸೆಂಟರ್ ಆಗಿದೆಯಂತೆ. ಇನ್ನು ಭಾನುವಾರದಂದು ತಮ್ಮ ಗರ್ಲ್ ಫ್ರೆಂಡ್ಸ್ ಜತೆ ಬೌಲಿಂಗ್ ಸೆಂಟರ್ಗಳಿಗೆ ಲಗ್ಗೆ ಇಡುತ್ತಾರಂತೆ. ಇನ್ನು ಕೆಲವು ಬೌಲಿಂಗ್ ಸೆಂಟರ್ಗಳಲ್ಲಿ ಲೈಟಾದ ಮ್ಯೂಸಿಕ್ಕು, ಚಾಟ್ಸ್-ಸ್ನಾಕ್ಸ್ ಲಭ್ಯ. ತಿನ್ನುತ್ತಲೇ ಆಟವಾಡಲು ಸಾಧ್ಯ ಎನ್ನುತ್ತಾರೆ ರಾಧಾ ಮತ್ತಾಕೆ ಸ್ನೇಹಿತರು. ಅಂದ ಹಾಗೆ, ಕರ್ನಾಟಕ ಸ್ಟೇಟ್ ಟೆನ್ ಬೌಲಿಂಗ್ ಅಸೋಸಿಯೇಷನ್, ಬೌಲಿಂಗ್ ಅಲೇ ಆಟವಾಡುವ ಆಸಕ್ತರನ್ನು ಒಟ್ಟುಗೂಡಿಸುತ್ತಿದೆಯಂತೆ. ವೀಕೆಂಡ್ ಮಾಲ್ಗಳಲ್ಲಿ ರಶ್ ಇನ್ನು ವೀಕೆಂಡ್ನಲ್ಲಿ ಮಾಲ್ಗಳಲ್ಲಿ ಈ ಗೇಮ್ ಆಡುವವರ ಸಂಖ್ಯೆ ಹೆಚ್ಚು ಎನ್ನುತ್ತಾರೆ ಸೆಂಟರ್ನ ರಮಣ್. ಬೇಸಿಗೆ ರಜೆಯ ಸಮಯವಾಗಿರುವುದರಿಂದ ವೀಕ್ ಡೇಸ್ನಲ್ಲೂ ಕೆಲವೊಮ್ಮೆ ಭರ್ತಿಯಗಿರುತ್ತದೆ ಎನ್ನುತ್ತಾರೆ. ----------------- ಬಾಕ್ಸ್ ಬೌಲಿಂಗ್ ಅಲೇ ಬಗ್ಗೆ ಎಕ್ಸ್ಪರ್ಟ್ ವಿವರಿಸುವುದು ಹೀಗೆ. ಎಂಟರ್ಟೈನ್ಮೆಂಟ್ ಗೇಮ್ ಏನಿಸಿಕೊಂಡಿರುವ ಬೌಲಿಂಗ್ ಅಲೇ ಒಳಾಂಗಣ ಕ್ರೀಡೆ. ನಾನಾ ಲೇನ್ಗಳಲ್ಲಿ ಸ್ಟ್ರೈಟ್, ಹುಕ್, ಸ್ಪಿನ್ ಮಾಡುವುರದ ಮೂಲಕ ಪಾಯಿಂಟ್ ಪಡೆಯಬಹುದು. ಪ್ರತಿ ಸ್ಟ್ರೈಕ್ನಲ್ಲಿ 10 ಪಿನ್ಗಳಿರುತ್ತವೆ. ಕೈಯಿಂದ ಬಾಲನ್ನು ಥ್ರೋ ಮಾಡುವುದರ ಮೂಲಕ ಪಿನ್ಗಳನ್ನು ಬಿಳಿಸಿ ಸ್ಟ್ರೈಕ್ ಕಂಪ್ಲೀಟ್ ಮಾಡಬಹುದು. ಇಲ್ಲವೇ ಸ್ಪೇರ್ ಉಳಿಸಿಕೊಂಡು ಮುಂದೆ ಸಾಗಬಹುದು. ಒಟ್ಟು ಇರುವ 12 ಚಾನ್ಸ್ನಲ್ಲಿ , 20 ಥ್ರೋಗಳಲ್ಲಿ ಪಾಯಿಂಟ್ ಲೆಕ್ಕದಲ್ಲಿ ಆಟ. ------------------- ಕೋಟ್ ನಗರದ ಮಾಲ್ಗಳಲ್ಲಿ ಬೌಲಿಂಗ್ ಸೆಂಟರ್ಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಮಂಗಳೂರು-ಮೈಸೂರಲ್ಲೂ ಬೌಲಿಂಗ್ ಅಲೇ ಗೇಮ್ ಕ್ರೇಜ್ ಹೆಚ್ಚಾಗುತ್ತಿದೆ. - ಶಿವ, ಬೌಲಿಂಗ್ ಅಲೇ ಪ್ರೇಮಿ
ಓದುಗರ ಪ್ರಶ್ನೆ
ಪ್ರತಿಭಾ ಸೌಂಶಿಮಠ್, ಮಿಸೆಸ್ ಇಂಡಿಯಾ 2015 ಪ್ರತಿಭಾ ಸೌಂಶಿಮಠ್ ಮಿಸೆಸ್ ಇಂಡಿಯಾ 2015 ಮಾತ್ರವಲ್ಲ. ಅಪ್ಪಟ ಕನ್ನಡತಿ. ಮೂಲ ಕರ್ನಾಟಕದ ಮಹಿಳೆಯೊಬ್ಬಳು ಫ್ಯಾಷನ್ ಲೋಕದಲ್ಲಿ ಸಾಧನೆ ಮಾಡುತ್ತಿರುವ ಸಾಲಿನಲ್ಲಿ ಇವರು ಟಾಪ್ ಲಿಸ್ಟ್ನಲ್ಲಿದ್ದಾರೆ. ಈ ಬಾರಿ ಓದುಗರ ಪ್ರಶ್ನೆಗೆ ಉತ್ತರಿಸಿದ್ದಾರೆ. * ನ್ಯಾಷನಲ್ ಲೆವೆಲ್ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಿಜೇತರು ಯಾವ ಬಗೆಯ ರೂಲ್ಸ್ ರೆಗ್ಯುಲೇಷನಸ್ ಪಾಲಿಸಬೇಕಾಗುತ್ತದೆ ? ಬ್ಯೂಟಿ ಪೆಜೆಂಟ್ ಎಂದಾಕ್ಷಣ ಅದು ಕೇವಲ ಫ್ಯಾಷನ್ ಶೋ ಅಲ್ಲ. ಗ್ಲಾಮರ್ ಜೊತೆ ಜೊತೆಗೆ ಬುದ್ಧಿವಂತಿಕೆ ಕೂಡ ಅಗತ್ಯ. ಬೆಸ್ಟ್ ಪರ್ಸನಾಲಿಟಿ ಆಗಿರುವುದು ಮಾತ್ರವಲ್ಲ, ಇದರ ಜೊತೆಗೆ ಹಾರ್ಡ್ವರ್ಕ್ ಹಾಗೂ ಪ್ರಿಪರೇಷನ್ ಕೂಡ ಬೇಕಾಗುತ್ತದೆ. ಡಿಸಿಪ್ಲೀನ್ ಮೊದಲ ಪಾಲಿಸಿಯಾಗಬೇಕು. ಮೂಕವಾಗಿರುವುದು ಯಾರೋಡನೆ ಬೆರೆಯದಿರುವುದು ಅತಿ ಹೆಚ್ಚು ಆಟಿಟ್ಯೂಡ್ ತೋರಿಸುವುದು ಉಚಿತವಲ್ಲ. ಪೆಜೆಂಟ್ ನಡೆಯುವ ಸಮಯದಲ್ಲಿ ಆದಷ್ಟೂ ಎಲ್ಲಾ ಆ್ಯಕ್ಟಿವಿಟಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. *ಟ್ಯಾಲೆಂಟ್ ರೌಂಡ್ನ ಲಿಮಿಟೇಷನ್ಸ್ ಬಗೆಗ ಹೇಳಿ ಪ್ರತಿ ಟ್ಯಾಲೆಂಟ್ ರೌಂಡ್ನಲ್ಲೂ ಮಿನಿಮಮ್ 2 ನಿಮಿಷಗಳ ಅಂತರವಿರುತ್ತದೆ. ಎಷ್ಟು ಬೇಗ ಸ್ಪರ್ಧಾಳುಗಳು ಆ್ಯಕ್ಟಿವ್ ಆಗಿರುತ್ತಾರೋ ಅಷ್ಟು ಬೇಗ ಜಡ್ಜ್ಗಳಿಗೆ ಇಷ್ಟವಾಗುತ್ತಾರೆ. ಆದರೆ, ಆಯಾ ಪೆಜೆಂಟ್ಗಳ ಆಯೋಜಕರ ಮೇಲೆ ಇವು ನಿರ್ಧರಿತವಾಗಿರುತ್ತವೆ. ಇನ್ನು ಆಯಾ ರಾಜ್ಯಗಳಿಂದ ಆಯ್ಕೆಯಾದವರಂತೂ ಅವರ ಟ್ಯಾಲೆಂಟ್ ಶೋನಲ್ಲಿ ಅವರ ಪ್ರಾದೇಶಿಕ ಕಲ್ಚರ್ಗೆ ಮಾನ್ಯತೆ ನೀಡಿದರೇ ಉತ್ತಮ. ಇಲ್ಲವಾದಲ್ಲಿ ಅವರು ತಮ್ಮ ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸುತ್ತಿರುವುದು ಹೈಲೈಟ್ ಆಗುವುದಿಲ್ಲ.
ಶಿಮ್ಮರ್ ಟ್ಯಾಟೂ
ಶಿಮ್ಮರ್ ಜುವೆಲರಿ ಟ್ಯಾಟು ಹಾಕಿಕೊಳ್ಳುವ ಕ್ರೇಝ್ ಹೆಚ್ಚಾಗಿದೆ. ಡ್ರೆಸ್ಕೋಡ್ಗೆ ತಕ್ಕಂತೆ ಟ್ಯಾಟುಗಳನ್ನು ಹಾಕಿಕೊಳ್ಳುವುದು ಕಾಮನ್ ಆಗಿದೆ. ಅತ್ಯುತ್ತಮ ಬ್ರಾಂಡ್ಗಳಲ್ಲಿ ಲಭ್ಯವಿರುವ ಇವು ಫ್ಯಾನ್ಸಿ ಸ್ಟೋರ್ಗಳಲ್ಲಿ ಹಲವು ರೀತಿಯ ಬಣ್ಣ ಡಿಸೈನ್, ಆಕಾರ, ಶೈಲಿಯಲ್ಲಿ ಸಿಗುತ್ತದೆ. ಆನ್ಲೈನ್ನಲ್ಲೂ ಲಭ್ಯ ಇವುಗಳನ್ನು ಆನ್ಲೈನ್ನಲ್ಲೂ ಖರೀದಿಸಬಹುದು. ಆಯಾ ಡಿಸೈನ್ಗೆ ತಕ್ಕಂತೆ ಇವುಗಳ ಬೆಲೆ ನಿಗಧಿಯಾಗಿರುತ್ತದೆ ಎನ್ನುತ್ತಾರೆ ಟ್ಯಾಟೂ ಲವ್ವರ್ ರೀನಾ. ಅವರ ಪ್ರಕಾರ, ಇವು ಸುಲಭವಾಗಿ ಅಂಟಿಸಿಕೊಳ್ಳಬಹುದ್ದಾಗಿರುವುದರಿಂದ ಅಷ್ಟಾಗಿ ತಲೆಬಿಸಿಯಾಗದು. ತೆಗೆಯುವುದು ಸುಲಭ ಶಿಮ್ಮರ್ ಜುವೆಲರಿ ಟ್ಯಾಟೂ ತೆಗೆಯಲು ಹೆಚ್ಚಿನ ಸಮಯದ ಅಗತ್ಯವಿಲ್ಲ. ಕಡಿಮೆ ಬೆಲೆಗೆ ಸಿಗುವುದರಿಂದ ಇದು ಪ್ರಚಲಿತದಲ್ಲಿದೆ. ಶಿಮ್ಮರ್ ಜುವೆಲರಿ ಸ್ಟಿಕರ್ ಟ್ಯಾಟುಗಳನ್ನು ಜುವೆಲರಿ ಬದಲು ಬಳಸಬಹುದು. ಯಾರ ಸಹಾಯವೂ ಇಲ್ಲದೇ ನಾವೇ ಖುದ್ದಾಗಿ ಅಂಟಿಸಿಕೊಳ್ಳಬಹುದು ಎನ್ನುತ್ತಾರೆ ಟ್ಯಾಟೂ ಪ್ರಿಯರು. ಇನ್ನು ಈ ಟ್ಯಾಟುಗಳಲ್ಲಿ ಗ್ಲಿಟರ್ ಕ್ರಿಸ್ಟಲ್ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹೆಚ್ಚಾಗಿ ಮಿನುಗುವ, ಹೊಳೆಯುವ ಮತ್ತು ವಜ್ರದಂತೆ ಮಿನುಗುವ ಟ್ಯಾಟುಗಳು ಆಕರ್ಷಿಸುತ್ತಿವೆ. ------------ ಶೈನಿಂಗ್ ಟ್ಯಾಟೂ * ಜೀನ್ಸ್ , ಟೀ ಶರ್ಟ್ ಧರಿಸುವವರು ಕೂಡ ಈ ಟ್ಯಾಟುವನ್ನು ಅಗತ್ಯವಿರುವ ಕಡೆ ಅಂಟಿಸಿಕೊಳ್ಳಬಹುದು. * ಸೀರೆ ಹಾಕಿದಾಗ ಜ್ಯುವೆಲ್ಲರಿ ಬದಲು ಕ್ರಿಸ್ಟಲ್ ಟ್ಯಾಟುವನ್ನು ಬಳಸಿ. * ಉಗುರುಗಳಿಗೆ ನೇಲ್ ಟ್ಯಾಟುವನ್ನು ಹಾಕಿ ಅಂದವನ್ನು ಹೆಚ್ಚಿಸುವುದು. * ಹಣೆಯನ್ನು ಅಲಂಕರಿಸಲು ಬಿಂದಿ ಟ್ಯಾಟುಗಳು ------------------------ ಶೈನಿಂಗ್ ಇರುವ ಶಿಮ್ಮರ್ ಜುವೆಲರಿ ಟ್ಯಾಟೂ ಫಂಕಿ ಸ್ಟೈಲ್ ಇಷ್ಟಪಡುವವರ ಮನ ಗೆದ್ದಿದೆ. ಶ್ರೀ ಪ್ರಿಯಾ ರಾಣಿ, ಸ್ಟೈಲಿಸ್ಟ್ ------------
ಬಾಹುಬಲಿ ಬಾಜುಬಂಧ್
-ಲವಲವಿಕೆಸುದ್ದಿಲೋಕ ಬಾಹುಬಲಿ ಶೈಲಿಯ ಬಾಜುಬಂಧ್ ಇಂದು ಮದುವೆ ಮನೆಯ ಫ್ಯಾಷನ್ನಲ್ಲಿ ಸೇರಿದೆ. ಬ್ಲೌಸ್ ಮೇಲೆ ಇಲ್ಲವೇ ಕೆಳಗೆ ಧರಿಸುವ ಈ ಬಾಜುಬಂಧ್ಗಳು ಗೃಹಿಣಿಯರ ಮನಸೆಳೆದಿವೆ. ಅಷ್ಟು ಮಾತ್ರವಲ್ಲ, ಸೀರೆಯ ಕಳೆಯನ್ನು ಹೆಚ್ಚಿಸಿವೆ. ' ಸಿನಿಮಾ ನೋಡಿ ಫ್ಯಾಷನ್ ಕ್ರೇಝ್ ಹುಟ್ಟುವುದು ಹೊಸತೇನಲ್ಲ. ಆದರೆ, ಸಿನಿಮಾ ನೋಡಿ ಬಾಜುಬಂಧ್ ಧರಿಸುವ ಶೈಲಿ ಬಂದಿರುವುದು ಇದು ಮೊದಲು' ಎನ್ನುತ್ತಾರೆ ಡಿಸೈನರ್ಸ್. ಅಂದಹಾಗೆ, ಬಾಹುಬಲಿಯಲ್ಲಿ ಅನುಷ್ಕಾ ಶೆಟ್ಟಿ ಹಾಗೂ ರಮ್ಯಾಕೃಷ್ಣ ಧರಿಸಿರುವ ಬಾಜುಬಂಧ್ ಸಾಕಷ್ಟು ಮಾನಿನಿಯರನ್ನು ಸೆಳೆದಿದೆ. ಆ್ಯಂಟಿಕ್ ವಿನ್ಯಾಸದ ಬಾಜುಬಂಧ್ ಟ್ರಡಿಷನಲ್ ಉಡುಪಿನೊಂದಿಗೆ ಪರ್ಫೆಕ್ಟ್ ಮ್ಯಾಚ್ ಆಗುವುದರಿಂದ ನೋಡಲು ಚೆನ್ನಾಗಿ ಕಾಣುತ್ತದೆ ಎಂಬುದು ಮಾಡೆಲ್ ದೀಪ್ತಿ ಅಭಿಪ್ರಾಯ.
ಕಾಲಂ
ಕಾವ್ಯಾ ಉದ್ಯಾನನಗರಿಯ ಉದಯೋನ್ಮುಖ ಡಿಸೈನರ್. ಜತೆಗೆ ಕನ್ನಡತಿ ಕೂಡ. ಈ ಬಾರಿ ಓದುಗರ ಪ್ರಶ್ನೆಗೆ ಉತ್ತರಿಸಿದ್ದಾರೆ. * ಇಂಡಿಯನ್ ಲುಕ್ ನೀಡುವ ಟ್ರಡಿಷನಲ್ ಸಿಂಪಲ್ ಬ್ರೊಕೆಡ್ ಲೆಹೆಂಗಾ ಬಗ್ಗೆ ವಿವರಿಸಿ. ಇಂಡಿಯನ್ ಔಟ್ಫಿಟ್ನಲ್ಲಿ ಲೆಹೆಂಗಾಗೆ ಇತ್ತೀಚೆಗೆ ಪ್ರಮುಖ ಸ್ಥಾನ. ಅದರಲ್ಲೂ ಇತ್ತೀಚೆಗೆ ಬ್ರೊಕೆಡ್ ಲೆಹೆಂಗಾಗಳು ಹೆಚ್ಚು ಚಾಲ್ತಿಯಲ್ಲಿವೆ. ನೋಡಲು ತೀರಾ ಗ್ರ್ಯಾಂಡ್ ಅಲ್ಲದಿದ್ದರೂ ತಮ್ಮ ಫ್ಯಾಬ್ರಿಕ್ನಿಂದಲೇ ಇವು ನೋಡುಗರನ್ನು ಸೆಳೆಯುತ್ತವೆ. ಕುಟುಂಬದಲ್ಲಿ ಹಾಗೂ ಸ್ನೇಹಿತರ ಮದುವೆಗಳಲ್ಲಿ ಇವನ್ನು ಧರಿಸಬಹುದು. ನೋಡಲು ತೀರಾ ಗ್ರ್ಯಾಂಡ್ ಲುಕ್ ಕಾಣಿಸದಿದ್ದರೂ ಎಲ್ಲರ ಮಧ್ಯೆ ಭಿನ್ನವಾಗಿ ಕಾಣಬಹುದು. ಬ್ರೊಕೆಡ್ ಫ್ಯಾಬ್ರಿಕ್ನಲ್ಲಿ ಇತರೇ ಲೆಹೆಂಗಾಗಳಿಗಿಂತ ಇವು ಆಕರ್ಷಕವಾಗಿ ಕಾಣುತ್ತವೆ. ಕಾಂಚೀವರಂ ಬ್ರೋಕೆಡ್, ಸಿಲ್ಕ್ ಫ್ಯಾಬ್ರಿಕ್ನಿಂದ ತಯಾರಿಸಿದ ಲೆಹೆಂಗಾಗಳು ಇಂದು ಯಂಗ್ಸ್ಟರ್ಸ್ ಗೂ ಪ್ರಿಯವಾಗತೊಡಗಿವೆ. * ಬ್ರೊಕೆಡ್ ಲೆಹೆಂಗಾದಲ್ಲೂ ಆಕರ್ಷಕವಾಗಿ ಕಾಣಲು ಟಿಫ್ಸ್ ನೀಡಿ ? ಬ್ರೊಕೆಡ್ ಲೆಹೆಂಗಾಗಳು ತೀರಾ ಸಿಂಪಲ್ ಆಗಿದ್ದಲ್ಲಿ ಅವುಗಳ ಜತೆಗೆ ಆಕ್ಸೆಸರೀಸ್ ಮ್ಯಾಚ್ ಮಾಡಬಹುದು. ಬ್ರೊಕೆಡ್ ಫ್ಯಾಬ್ರಿಕ್ಸ್ ಕಾಟನ್ನಲ್ಲೂ ಸಿದ್ಧಪಡಿಸುವುದರಿಂದ ಇಂದು ಸಿಂಪಲ್ ಲುಕ್ ನೀಡುವುದು. ಇನ್ನು ಸ್ನೇಹಿತರ ಮದುವೆಯಲ್ಲಿ ಇವನ್ನು ಧರಿಸಬಹುದು. ಗ್ರ್ಯಾಂಡ್ ಲುಕ್ ಇಲ್ಲದಿದ್ದರೂ ಎಲಿಗೆಂಟ್ ಆಗಿ ಕಾಣುವುದು.