Quantcast
Channel: VijayKarnataka
Viewing all articles
Browse latest Browse all 6795

ಲೋಧಾ ಶಿಫಾರಸು: ಸುಪ್ರೀಂನಲ್ಲಿ ಬಿಸಿಸಿಐ ಚಾಲೆಂಜ್

$
0
0

ಮುಂಬಯಿ: ಭಾರತೀಯ ಕ್ರಿಕೆಟ್‌ನ ಸುಧಾರಣೆಗೆ ನ್ಯಾಯಮೂರ್ತಿ ಲೋಧಾ ಸಮಿತಿ ಮಾಡಿರುವ ಶಿಫಾರಸುಗಳಲ್ಲಿರುವ ಲೋಪ ದೋಷ ಮತ್ತು ಅದನ್ನು ಜಾರಿಗೊಳಿಸಲು ಇರುವ ತೊಂದರೆಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದೆ.

ಮುಂಬಯಿನ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವ ಸಂಬಂಧ ಚರ್ಚೆ ನಡೆಸಿದ ನಂತರ ಒಮ್ಮತದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ಒಂದು ರಾಜ್ಯಕ್ಕೆ ಒಂದು ಮತ, ಪದಾಧಿಕಾರಿಗಳ ಅಧಿಕಾರಾವಧಿ ಹಾಗೂ ವಯಸ್ಸಿನ ಮಿತಿ, ರಾಜ್ಯ ಮತ್ತು ಬಿಸಿಸಿಐನಲ್ಲಿ ಏಕಕಾಲಿಕ ಹುದ್ದೆ, ಟಿವಿಯಲ್ಲಿ ಪ್ರಸಾರವಾಗುವ ಕ್ರಿಕೆಟ್ ಪಂದ್ಯಗಳ ಮೇಲಿನ ಜಾಹೀರಾತು ನಿರ್ಬಂಧ ಸೇರಿದಂತೆ ಹಲವು ವಿಚಾರಗಳ ಕುರಿತು ನ್ಯಾಯಮೂರ್ತಿ ಲೋಧಾ ಸಮಿತಿ ಇತ್ತೀಚೆಗೆ ಶಿಫಾರಸು ಮಾಡಿತ್ತು.

''ನಿವೃತ್ತ ನ್ಯಾಯಮೂರ್ತಿ ಆರ್.ಎಂ.ಲೋಧಾ ಸಮಿತಿ ಶಿಫಾರಸು ಮಾಡಿದ ಅಂಶಗಳನ್ನು ಜಾರಿಗೊಳಿಸಲು ಇರುವ ಲೋಪ ದೋಷ ಮತ್ತು ತೊಂದರೆಗಳ ಕುರಿತಂತೆ ಬಿಸಿಸಿಐ ಪರವಾಗಿ ಮಂಡಳಿಯ ಕಾರ್ಯದರ್ಶಿ ಅನುರಾಗ್ ಠಾಕೂರ್ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲಿದ್ದಾರೆ,'' ಎಂದು ಸಭೆಯ ಬಳಿಕ ಬಿಡುಗಡೆಗೊಳಿಸಿದ ತನ್ನ ಪ್ರಕಟಣೆಯಲ್ಲಿ ಬಿಸಿಸಿಐ ತಿಳಿಸಿದೆ.

ಜತೆಗೆ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಪ್ರತ್ಯೇಕವಾಗಿ ಶಿಫಾರಸಿನ ಸಂಬಂಧ ಅಫಿಡವಿಟ್ ಸಲ್ಲಿಸಲಿವೆ ಎಂದು ಬಿಸಿಸಿಐ ಹೇಳಿದೆ.

ಅದರಲ್ಲೂ ಒಂದು ರಾಜ್ಯಕ್ಕೆ ಒಂದು ಮತ ಶಿಫಾರಸು ಜಾರಿಗೊಂಡರೆ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೇಲೆ ಹೆಚ್ಚು ಪರಿಣಾಮ ಬೀರಲಿದ್ದು ಹಾಲಿ ಅಧ್ಯಕ್ಷರಾಗಿರುವ ನಿರಂಜನ್ ಶಾ ವಯಸ್ಸಿನ ಆಧಾರದ ಮೇಲೆ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ. ಹೀಗಾಗಿ ಶಿಫಾರಸು ಸಂಬಂಧ ಸುಪ್ರೀಂಗೆ ಅಫಿಡಿವಿಟ್ ಸಲ್ಲಿಸಲು ನಿರ್ಧರಿಸಿರುವುದಾಗಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ನಿರಂಜನ್ ಶಾ ಹೇಳಿದ್ದಾರೆ.

ದೇಶೀಯ ಕ್ರಿಕೆಟ್‌ಗೆ ಛತ್ತೀಸ್‌ಗಡ

ಈ ಮಧ್ಯೆ, ಸಭೆಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಛತ್ತೀಸ್‌ಗಡ ರಾಜ್ಯಕ್ಕೆ ಬಿಸಿಸಿಐ ಅವಿರೋಧವಾಗಿ ಒಪ್ಪಿಗೆ ನೀಡಿದೆ. ಹೀಗಾಗಿ ಛತ್ತೀಸ್‌ಗಡ, ಮಂಡಳಿಯ 28ನೇ ದೇಶಿಯ ಕ್ರಿಕೆಟ್ ತಂಡವಾಗಿ ಗುರುತಿಸಿಕೊಂಡಿದ್ದು ರಣಜಿ ಟ್ರೋಫಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಛತ್ತೀಸ್‌ಗಡ ಕೇಂದ್ರ ವಲಯದ ಭಾಗವಾಗಲಿದ್ದು, ಬಿಸಿಸಿಐನ ಟೂರ್ನಿಗಳಲ್ಲಿ ಆಡುವ ಅವಕಾಶ ಪಡೆದಿದೆ. ಆದರೆ ಬಿಹಾರ ಕ್ರಿಕೆಟ್ ಸಂಸ್ಥೆಯ ಮನವಿಯನ್ನು ಬಿಸಿಸಿಐ ಸದ್ಯಕ್ಕೆ ತಿರಸ್ಕರಿಸಿದೆ.

ವಿಶೇಷ ಸಾಮಾನ್ಯ ಸಭೆಯ ಪ್ರಮುಖ ನಿರ್ಧಾರಗಳು

* ಲೋಧಾ ಶಿಫಾರಸಿನಲ್ಲಿರುವ ಲೋಪ ದೋಷ ಮತ್ತು ಜಾರಿಗೊಳಿಸಲು ಇರುವ ತೊಂದರೆಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲು ಬಿಸಿಸಿಐ ಅವಿರೋಧ ನಿರ್ಧಾರ

* ಬಿಸಿಸಿಐ ಪರವಾಗಿ ಸುಪ್ರೀಂಗೆ ಅಫಿಡವಿಟ್ ಸಲ್ಲಿಸಲಿರುವ ಅನುರಾಗ್ ಠಾಕೂರ್

* ದೇಶೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಛತ್ತೀಸ್‌ಗಢಕ್ಕೆ ಮಾನ್ಯತೆ

ಬಿಸಿಸಿಐ ಸುಪ್ರೀಂಗೆ ಸಲ್ಲಿಸಲಿರುವ ಅಫಿಡವಿಟ್‌ನಲ್ಲಿರುವ ಪ್ರಮುಖ ಅಂಶಗಳು

* 'ಒಂದು ರಾಜ್ಯಕ್ಕೆ ಒಂದು ಮತ' ಶಿಫಾರಸಿಗೆ ವಿರೋಧ

* 70 ವರ್ಷದ ವಯಸ್ಸಿನ ಮಿತಿ, ಮಂಡಳಿಯಲ್ಲಿ 3 ಅವಧಿಗಿಂತ ಹೆಚ್ಚು ಬಾರಿ ಅಧಿಕಾರ ಹೊಂದದಿರುವುದು

* ರಾಜ್ಯ ಮತ್ತು ಬಿಸಿಸಿಐನಲ್ಲಿ ಏಕಕಾಲದಲ್ಲಿ ಅಧಿಕಾರ ಹೊಂದದಿರುವುದು

* ಕ್ರಿಕೆಟ್ ನಡೆಯದ ಸಂದರ್ಭದಲ್ಲಿ ಕ್ರಿಕೆಟ್ ಕ್ರೀಡಾಂಗಣಗಳನ್ನು ಇತರೆ ಕ್ರೀಡೆಗಳಿಗೆ ನೀಡುವ ವಿಚಾರ

* ಅಂತಾರಾಷ್ಟ್ರೀಯ ಪಂದ್ಯಗಳ ಅವಧಿಯಲ್ಲಿ ಭೋಜನ ಅಥವಾ ಚಹಾ ವಿರಾಮದ ವೇಳೆ ಜಾಹೀರಾತು ಪ್ರಸಾರದ ಶಿಫಾರಸಿಗೆ ವಿರೋಧ (ಬಿಸಿಸಿಐಗೆ ಅಂದಾಜು 1500 ಕೋಟಿ ರೂ. ನಷ್ಟವಾಗುವ ಆತಂಕ).


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಬಟ್ಟೆ ಕಳಚಿ ಸೆಕ್ಸ್ ಗೆ ಕರೆದ ಮಂಗಳಮುಖಿಯರು


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>