Quantcast
Channel: VijayKarnataka
Viewing all articles
Browse latest Browse all 6795

ಸಿಲೆಬ್ರಿಟಿ ಟ್ರಾವೆಲ್‌ : ಕೋಲ್ಕತ್ತಾ ನನ್ನ ಕನಸಿನ ತಾಣ

$
0
0

ನನಗೆ ಟೂರು ಹೋಗುವುದೆಂದರೆ ಏನೋ ಉಲ್ಲಾಸ. ಅರಣ್ಯ ಪ್ರದೇಶಗಳಿಗೆ ಹೋಗುವುದೆಂದರೆ ಥ್ರಿಲ್‌. ಬೆಟ್ಟಗುಡ್ಡ ಕಾಡುಮೇಡುಗಳನ್ನು ಅಲೆಯುವುದಲ್ಲಿ ಒಂಥರಾ ಮಜಾ ಇರುತ್ತದೆ. ಆಗಾಗ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರೆ ಜಾಗ ಬದಲಾದಂತೆ ಮನಸ್ಸು ಕೂಡ ಬದಲಾಗಿ ನವೋಲ್ಲಾಸ ಮೂಡುತ್ತದೆ.

ಚಳಿಗಾಲದಲ್ಲಿ ಸುತ್ತುವುದೆಂದರೆ ಬಲು ಖುಷಿ. ಚುಮು ಚುಮು ಚಳಿಗೆ ಬೆಚ್ಚಗಿನ ತಾಣಗಳಲ್ಲಿ ಹೊಸ ಹೊಸ ತಾಣಗಳಲ್ಲಿ ವಿಭಿನ್ನ ಅನುಭವ ದೊರೆಯುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಪ್ರವಾಸಿ ತಾಣಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ. ಬೇಸಿಗೆಯ ಸೆಕೆಗೆ ಪ್ರಯಾಣ ಮಾಡುವುದು ನನಗೆ ಇಷ್ಟವಾಗುವುದಿಲ್ಲ. ಮಳೆಗಾಲದಲ್ಲೂ ಸುತ್ತುವುದು ಕಡಿಮೆ.

ನನ್ನ ಕನಸಿನ ಪ್ರವಾಸಿ ಸ್ಥಳ ಕೋಲ್ಕತ್ತಾ. ಇಲ್ಲಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕು ಎಂದುಕೊಂಡಿದ್ದೇನೆ. ಯಾಕೆಂದರೆ ಅಲ್ಲಿನ ವಾತಾವರಣ ಅತ್ಯದ್ಭುತವಾಗಿದೆಯಂತೆ. ಅದನ್ನು ಎಲ್ಲರ ಬಾಯಲ್ಲಿ ಕೇಳಿಯೇ ಹೋಗಬೇಕು ಎಂಬ ಆಸೆ ದಿನೇದಿನೆ ಹೆಚ್ಚಾಗುತ್ತಿದೆ. ಊಟಿಗೆ ಆಗಾಗ ಹೋಗಿ ಬರುತ್ತೇನೆ. ಶ್ರೀಲಂಕಾ, ಯುಎಸ್‌ಎ, ಇಟಲಿ ಸೇರಿದಂತೆ ಹಲವಾರು ದೇಶಗಳನ್ನು ಸುತ್ತುತ್ತಿರುತ್ತೇನೆ. ಭೇಟಿ ನೀಡಿದ ಸ್ಥಳದಲ್ಲಿನ ವಿಶೇಷತೆ, ಆಹಾರ ಶೈಲಿ, ಸಂಸ್ಕೃತಿಯನ್ನು ನೋಡಲು ಇಷ್ಟಪಡುತ್ತೇನೆ. ಫ್ಯಾಮಿಲಿ ಮತ್ತು ಫ್ರೆಂಡ್ಸ್‌ ಜತೆ ಊರೂರು ಸುತ್ತುತ್ತಿರುತ್ತೇನೆ . ಎರಡು ಕೂಡ ನನಗೆ ಕಂಫರ್ಟ್‌. ಗುಡ್‌ ಕಂಪೆನಿ ಇದ್ದರೆ ಎಲ್ಲಿ ಬೇಕಾದರೂ ಕೂಡ ಎಂಜಾಯ್‌ ಮಾಡಬಹುದು.

ಹೋದಲ್ಲೆಲ್ಲಾ ಶಾಪಿಂಗ್‌ ಮಾಡುತ್ತೇನೆ. ಅಷ್ಟೆ ಅಲ್ಲ, ಬಟ್ಟೆಯನ್ನು ಕೂಡ ಓವರ್‌ ಆಗಿ ಕ್ಯಾರಿ ಮಾಡುತ್ತೇನೆ. ಪ್ರವಾಸ ಮಾಡುವಾಗ ಲಗೇಜ್‌ ಕಮ್ಮಿ ಇರಬೇಕು ಎನ್ನುವುದು ಸತ್ಯವಾದರೂ ಕಡಿಮೆ ಬಟ್ಟೆ ನನ್ನ ಬ್ಯಾಗಿನಲ್ಲಿ ಇರುವುದೇ ಇಲ್ಲ. ಮತ್ತೆ ಭೇಟಿ ನೀಡದಂತಹ ಸ್ಥಳಗಳಲ್ಲಿ ನೆನಪಿಗಾಗಿ ಏನಾದರೂ ವಸ್ತುವನ್ನು ತೆಗೆದುಕೊಂಡು ಬರಬೇಕು. ಹೋಗುವ ಸ್ಥಳದ ಸೌಂದರ್ಯವನ್ನು ಎಷ್ಟು ಸವಿಯಲು ಸಾಧ್ಯವಾಗುತ್ತದೋ ಅಷ್ಟು ಸವಿಯಿರಿ. ಪ್ರಕೃತಿಯ ವಿಸ್ಮಯಗಳನ್ನು ನೋಡಿ ಅನುಭವಿಸಿದಾಗಲೇ ಮಜಾ ಸಿಗುತ್ತದೆ. ಸಾರ್ಥಕ ಭಾವ ಕೂಡ ಮೂಡುತ್ತದೆ.

ಟ್ರಿಪ್‌ ಹೋಗುವಾಗ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇನೆ. ಮೇಕಪ್‌ ಕಿಟ್‌, ಸ್ವೆಟರ್‌, ಟೋಪಿ, ಪವರ್‌ಬ್ಯಾಂಕ್‌, ಪೆಪ್ಪರ್‌ ಸೆ್ೊ್ರ, ಲೋಷನ್ಸ್‌, ಕ್ರಿಮ್ಸ್‌, ಮ್ಯಾಚಿಂಗ್‌ ಸ್ಲಿಪ್ಪರ್ಸ್‌ಗಳು ಬೇಕೆ ಬೇಕು. ಭೇಟಿ ನೀಡುತ್ತಿರುವ ಸ್ಥಳದ ಬಗ್ಗೆ, ಅಲ್ಲಿ ಸಿಗುವ ಸೌಕರ್ಯದ ಬಗ್ಗೆ ಮೊದಲೇ ತಿಳಿದುಕೊಂಡಾಗ ಮಾತ್ರ ಸುತ್ತಾಡಲು ಸಮಯ ಸಿಗುತ್ತದೆ ಎನ್ನುತ್ತಾರೆ ನಟಿ ತೇಜಸ್ವಿನಿ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>