Quantcast
Channel: VijayKarnataka
Viewing all articles
Browse latest Browse all 6795

ಹಿಂದುಳಿದವರಿಗೆ ಕೊಟ್ಟ ಅನುದಾನದ ಲೆಕ್ಕ ಕೊಡಲಿ: ಬಿಎಸ್‌ವೈ

$
0
0

ಭಾರತೀಯ ಜನತಾ ಪಕ್ಷ 'ಹಿಂದ' ಜಪಕ್ಕೆ ಹರಿದುಬಂದ ಜನಸಾಗರ

ಬೆಂಗಳೂರು: ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದರೂ, ಸಿದ್ದರಾಮಯ್ಯ ಸರಕಾರ ನಿದ್ರಿಸುತ್ತಿದೆ. ರೈತರ ನೆರವಿಗೆ ಧಾವಿಸದ ಸರಕಾರ ಇತರೆ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಲು ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅರಮನೆ ಮೈದಾನದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಏಕತಾ ಸಮಾವೇಶದಲ್ಲಿ ಮಾತನಾಡಿದ ಅವರು,‘‘ಹಿಂದುಳಿದವರ ಪರ ಎಂದು ಬಡಾಯಿ ಕೊಚ್ಚುವ ಬದಲು ಮೂರೂವರೆ ವರ್ಷದಲ್ಲಿ ಈ ವರ್ಗಕ್ಕೆ ಖರ್ಚು ಮಾಡಿರುವ ಅನುದಾನದ ಲೆಕ್ಕ ಕೊಡಲಿ ಇಲ್ಲದಿದ್ದರೆ ಚರ್ಚೆಗೆ ಬರಲಿ,’’ ಎಂದು ಆಗ್ರಹಿಸಿದರು.

‘‘ಹಿಂದೆ ಬಿಜೆಪಿ ಅವಧಿಯಲ್ಲಿ ಬಡವರು ಸೇರಿದಂತೆ ನಾನಾ ವರ್ಗಗಳ ಕಲ್ಯಾಣ ಹತ್ತಾರು ಯೋಜನೆಗಳನ್ನು ರೂಪಿಸಿ ಜಾರಿ ಮಾಡಲಾಗಿತ್ತು. ಒಂದು ವರ್ಗಕ್ಕೆ ಸೀಮಿತವಾಗದೆ ಹಿಂದುಳಿದ, ಅಲ್ಪಸಂಖ್ಯಾತರು ಸಹಿತ ನಾನಾ ವರ್ಗಗಳ ಏಳಿಗೆಗೆ ಪ್ರಾತಿನಿಧ್ಯ ನೀಡಿತ್ತು. ಇದರಿಂದ ಹಿಂದುಳಿದವರಿಗೆ ಅಧಿಕಾರ ದೊರೆತಂತಾಗಿದ್ದು, ಮುಂದಿನ ಬಾರಿಯೂ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಹಿಂದುಳಿದವರಿಗೆ ಹೆಚ್ಚಿನ ಅನುದಾನ, ಅಧಿಕಾರ ನೀಡಲಾಗುವುದು,’’ ಎಂದು ಯಡಿಯೂರಪ್ಪ ಘೋಷಿಸಿದರು.

ಬಹಿರಂಗ ಚರ್ಚೆಗೆ ಸಿಎಂ ಸವಾಲು

ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಪಾಡಲು ವಿಫಲರಾಗಿದ್ದಾರೆ. ಅಧಿಕಾರ ಹಿಡಿಯುವ ವೇಳೆ ಕನಕದಾಸರು, ರಾಯಣ್ಣ ಹೆಸರು ಹೇಳುತ್ತಿದ್ದವರು ಈಗ ಟಿಪ್ಪು ಹೆಸರಿನ ಜಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿ ಮೀಸಲಿಟ್ಟಿರುವ ಅನುದಾನದಲ್ಲಿ ಶೇ.10ರಷ್ಟನ್ನೂ ಖರ್ಚು ಮಾಡಿಲ್ಲ. ಈ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ ಎಂದು ಈಶ್ವರಪ್ಪ ಅವರು ಸಿಎಂ ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದರು.

ಕೇಂದ್ರ ಸಚಿವ ಅನಂತಕುಮಾರ್ ಕುಮಾರ್ ಮಾತನಾಡಿ, ನೋಟು ರದ್ದು ನಿರ್ಧಾರವನ್ನು ದೇಶದ 125 ಕೋಟಿ ಜನರು ಸ್ವಾಗತಿಸಿದ್ದಾರೆ. ಆದರೆ, ಪ್ರತಿಪಕ್ಷಗಳು ಸರಕಾರದ ವಿರುದ್ಧ ಹೋರಾಟ ನಡೆಸುವ ಭರದಲ್ಲಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಪ್ರತಿಪಕ್ಷಗಳ ದುವರ್ತನೆಯನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದರು.

ಸಂಸದ ಶ್ರೀರಾಮುಲು ಮಾತನಾಡಿ, ‘‘ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಅಧಿಕ ಸಂಖ್ಯೆಯಲ್ಲಿದ್ದು, ಬಹುತೇಕ ಮಂದಿ ಬಡತನದ ರೇಖೆಗಿಂತ ಕೆಳಗಿದ್ದಾರೆ. ಈ ಸಮುದಾಯವನ್ನು ಮೇಲೆತ್ತಲು ದಶಕಗಳ ಕಾಲ ಪ್ರಯತ್ನಿಸಿದ ಕಾಂಗ್ರೆಸ್ ವಿಫಲವಾಗಿದೆ. ಬಡವರ ಉದ್ಧಾರವೇ ನಮ್ಮ ಆದ್ಯತೆ ಎಂದವರು ಈಗ ಆ ಮಾತನ್ನೇ ನಿಲ್ಲಿಸಿದ್ದಾರೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹೆಚ್ಚಿನ ಜಾತಿಗಳು ಇರುವ ಕಾರಣ ಮೀಸಲು ಪ್ರಮಾಣ ಹೆಚ್ಚಿಸಬೇಕಾದ ಅಗತ್ಯವಿದೆ,’’ಎಂದು ಆಗ್ರಹಿಸಿದರು.

-----

ಸಿಎಂ ಸಿದ್ದರಾಮಯ್ಯ ಹಿಂದುಳಿದವರು, ದಲಿತರಿಗೆ ಅನ್ಯಾಯ ಮಾಡಿದ್ದು, ಈ ವರ್ಗದವರಿಗೆ ಬಜೆಟ್‌ನಲ್ಲಿಟ್ಟಿರುವ ಅನುದಾನದಲ್ಲಿ ಶೇ.25ರಷ್ಟನ್ನೂ ಖರ್ಚು ಮಾಡಿಲ್ಲ.

- ಜಗದೀಶ್ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ

‘‘ಅಡಕೆ ಬೆಳೆಗೆ ಬೆಲೆ ಸ್ಥಿರೀಕರಣ ಹಾಗೂ ಬೆಳೆಗಾರರ ಹಿತಾಸಕ್ತಿ ರಕ್ಷಿಸಲು ಸರಕಾರ ಬದ್ಧವಾಗಿದೆ. ತಂಬಾಕು ಮಂಡಳಿ ಮೂಲಕ ಬೆಳೆಗಾರರಿಗೆ ರಕ್ಷಣೆ ಒದಗಿಸಲಾಗಿದೆ. ದೇಶದ ನಾನಾ ರಾಜ್ಯಗಳಲ್ಲಿರುವ ಬಿಜೆಪಿ ಸಿಎಂಗಳ ಪೈಕಿ ಹೆಚ್ಚಿನವರು ಹಿಂದುಳಿದ ವರ್ಗಕ್ಕೆ ಸೇರಿರುವುದು ಪಕ್ಷದ ಕಾಳಜಿಯನ್ನು ತೋರಿಸಿದೆ’’.

- ನಿರ್ಮಲಾ ಸೀತಾರಾಮ್, ಕೇಂದ್ರ ಸಚಿವೆ


Viewing all articles
Browse latest Browse all 6795

Trending Articles


Final chapter from Krishnamacharya's Yogasanagalu Part II Pranayam. Plus the...


ಶಾಕಿಂಗ್: ಸೆಕ್ಸ್ ವೇಳೆಯೇ ಉಸಿರುಗಟ್ಟಿ ಸಾವನ್ನಪ್ಪಿದ್ಲು ಯುವತಿ


ರಾಜ್ಯದ ‘ಗ್ರಾಮೀಣ’ಭಾಗದ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ‘ಬಾಪೂಜಿ ಸೇವಾ’ಕೇಂದ್ರದಲ್ಲೇ...


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಹಾಸ್ಯ : ಪಿತೃ ಪಕ್ಷದಲ್ಲಿ ಭರ್ಜರಿ ಭೋಜನಕ್ಕೆ ಮುನ್ನ ಕಾಗೆಗಳ ಮೀಟಿಂಗು!


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಲವ್, ಸೆಕ್ಸ್, ದೋಖಾ: ಖಾಸಗಿ ವಿಡಿಯೋ ಮಾಡಿ ಮಹಿಳೆ ಮೇಲೆ ಹಲ್ಲೆ


ಮದುವೆ ನಂತರ ಬ್ಲೂ ಫಿಲಂ ನೋಡಿದರೆ ಏನಾಗುತ್ತೆ?


The Ashtanga Key - Surya Namaskar


How Pattabhi Jois learned Yoga from Krishnamacharya ( from Interviews )


ಚಿರತೆ –ಹೆಬ್ಬಾವಿನ ಫೈಟ್‌ ನಲ್ಲಿ ಗೆದ್ದಿದ್ಯಾರು….?


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಜು.25 ರಂದು ಮತ್ತೆ ದೆಹಲಿಗೆ ಸಿಎಂ ಮತ್ತು ಡಿಸಿಎಂ


ಚಿಕ್ಕ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಪಾಠ ಮಾಡಿದ ಯೋಗೀಶ್ ಮಾಸ್ಟರ್ –ವಿಡಿಯೋ ವೈರಲ್


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


BIG NEWS : ‘ಹಾಸ್ಟೆಲ್ ಹುಡುಗರು’ ಸಿನಿಮಾ ವಿವಾದ : ಕೋರ್ಟ್ ಗೆ ಹಾಜರಾಗಿ ದಾಖಲೆ ಸಲ್ಲಿಸಿದ...


Aadu Aata Aadu Kannada Songs Download


ವಚನಗಳಿಂದ ಸಂಗೀತ ಲೋಕ ಶ್ರೀಮಂತ



<script src="https://jsc.adskeeper.com/r/s/rssing.com.1596347.js" async> </script>