Quantcast
Channel: VijayKarnataka
Viewing all articles
Browse latest Browse all 6795

ಜಸ್ಟ್‌ ಆಕಸ್ಮಿಕ : ಹಲವು ಕವಲುಗಳ ನಿಗೂಢ ಜಗತ್ತು

$
0
0

ಕನ್ನಡ ಚಿತ್ರ: ಜಸ್ಟ್‌ ಆಕಸ್ಮಿಕ

-ಪದ್ಮಾ ಶಿವಮೊಗ್ಗ

ಸಂಜನಾ, ವಿನೋದ್‌ ಪಾಟೀಲ್‌, ತಿಲಕ್‌ ಮುಖ್ಯ ಪಾತ್ರಗಳಲ್ಲಿ ನಟಿಸಿರುವ, ಹಿಮಾಯತ್‌ ಖಾನ್‌ ನಿರ್ದೇಶನದ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಜಸ್ಟ್‌ ಆಕಸ್ಮಿಕ.

ನಿಗೂಢ, ವಿಕೃತ ವ್ಯಕ್ತಿಯ ಸುತ್ತ ಹೆಣೆದಿರುವ ಹಳೆಯ ಕಾದಂಬರಿಯ ಛಾಯೆ ಇದರಲ್ಲಿದೆ. ಕೆಲವು ದೃಶ್ಯಗಳಲ್ಲಿ ಸೀಟಿನ ತುದಿಗೆ ಕೂರುವಂತೆ ಮಾಡುವ ನಿರ್ದೇಶಕ ಮನರಂಜಿಸುವ ಪ್ರಯತ್ನದಲ್ಲಿ ಸಿನಿಮಾದ ಹದ ಕೆಡಿಸಿದ್ದಾರೆ.

ಶಂಕರ್‌ನಾಗ್‌ ಅಭಿಮಾನಿಯಾದ ಹುಡುಗ ಶಂಕರ್‌ ಅನಾಥಾಶ್ರಮದಲ್ಲಿ ಬೆಳೆಯುತ್ತಿರುತ್ತಾನೆ. 18 ವರ್ಷಗಳ ನಂತರ ಕಳೆದುಕೊಂಡಿದ್ದ ಮಗ ಶಂಕರ (ವಿನೋದ್‌ ಪಾಟೀಲ್‌) ನನ್ನು ಅಪ್ಪ ಅಮ್ಮ ಹುಡುಕಿ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ. ಪಕ್ಕದ ಮನೆಯ ಪಿಜಿಯಲ್ಲಿರುವ ಹುಡುಗಿ ಆರೋಹಿ(ಸಂಜನಾ)ಯ ಜತೆ ಇವನಿಗೆ ಪ್ರೇಮವಾಗುತ್ತದೆ. ಅವಳು ಚಿಕ್ಕಂದಿನಲ್ಲಿ ಇವನ ಜತೆ ಕೆಲ ಗಂಟೆಗಳ ಕಾಲ ಆಡಿದ ಹುಡುಗಿ. ಇನ್ನೊಂದು ಪಕ್ಕದಲ್ಲಿ ವಾಸವಿರುವ ಜನಪ್ರಿಯ ಚಿತ್ರ ಕಲಾವಿದ ಸಚಿನ್‌(ತಿಲಕ್‌)ಗೂ ಇವನಿಗೂ ಅಷ್ಟಕ್ಕಷ್ಟೆ. ಸದಾ ದುರ್ಬೀನು ಹಿಡಿದು ಕಿಟಕಿಯಲ್ಲಿ ಪಿಜಿಯಲ್ಲಿರುವ ಹುಡುಗಿಯನ್ನು ನೋಡುತ್ತಿದ್ದ ಅವನ ಕಣ್ಣಿಗೆ ಬೀಳುವ ಸಚಿನ್‌ ನಡವಳಿಕೆ ಅನುಮಾನಾಸ್ಪದವಾಗಿ ಕಾಣುತ್ತದೆ. ಇನ್ನೊಂದೆಡೆ ಪಿಜಿಯಲ್ಲಿರುವ ಹುಡುಗಿಯೊಬ್ಬಳು ಸಚಿನ್‌ ಕಡೆ ಆಸಕ್ತಿ ತೋರಿಸುತ್ತಾಳೆ. ಇನ್ನೊಬ್ಬ ಹುಡುಗಿಯ ಹಿಂದೆ ರೌಡಿಗಳ ಗುಂಪೊಂದು ಬೀಳುತ್ತದೆ. ಶಂಕರ್‌ ಕಂಡರೆ ಆಗದ ಈ ಗುಂಪು ಅವನನ್ನೂ ಹೊಡೆಯಲು ಹೊಂಚು ಹಾಕುತ್ತಿರುತ್ತದೆ. ಹೀಗೆ ಹಲವು ಕವಲುಗಳಲ್ಲಿ ಸಾಗುವ ಕತೆ ನಿಗೂಢ ಜಗತ್ತಿನ ಕಡೆ ಸಾಗುತ್ತದೆ. ಆ ಕಲಾವಿದ ಯಾರು? ಏನು ಮಾಡುತ್ತಿರುತ್ತಾನೆ? ಇವರು ಅದನ್ನು ಹೇಗೆ ಪತ್ತೆ ಹಚ್ಚುತ್ತಾರೆ? ಇತ್ಯಾದಿ ಪ್ರಶ್ನೆಗಳಿಗೆ ಸಿನಿಮಾ ಉತ್ತರಿಸುತ್ತದೆ.

ಸ್ಕ್ರಿಪ್ಟ್‌ನಲ್ಲಿ ಲಾಜಿಕ್‌ ಇದ್ದಿದ್ದರೆ ಅತ್ಯುತ್ತಮ ಚಿತ್ರ ಇದಾಗುತ್ತಿತ್ತು. ಹಾಗಂತ ಇದನ್ನು ಕಳಪೆ ಚಿತ್ರ ಅಂತಲೂ ಹೇಳಲಾಗುವುದಿಲ್ಲ. ಮೊದಲರ್ಧ ಎಲ್ಲಾ ಕ್ಯಾರಕ್ಟರ್‌ಗಳ ಪರಿಚಯ ಇದೆ. ದ್ವಿತೀಯಾರ್ಧದ ನಂತರ ಚಿತ್ರಕ್ಕೆ ಟ್ವಿಸ್ಟ್‌ ಸಿಗುತ್ತದೆ. ಬೋರ್‌ ಹೊಡೆಸದೆ ಮುಂದೇನಾಗುತ್ತದೆ ಎಂದು ಕಾಯುವಂತೆ ಮಾಡುತ್ತದೆ. ಆದರೆ, ಕ್ಲೈಮಾಕ್ಸ್‌ ನಿರೀಕ್ಷೆಯ ಮಟ್ಟಕ್ಕೆ ಇಲ್ಲ. ವಿನೋದ್‌ ಪಾಟೀಲ್‌ ಮೊದಲ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಪಾರ್ಕೊರ್‌ ಸ್ಟಂಟ್ಸ್‌ನಲ್ಲಿ ಮಿಂಚಿದ್ದಾರೆ. ಸಂಜನಾ ಗ್ಲಾಮರಸ್‌ ಆಗಿ ಕಾಣುತ್ತಾರೆ. ಆದರೆ, ಅವರೇ ಡಬ್ಬಿಂಗ್‌ ಮಾಡಿದ್ದರೂ ಮಿಸ್‌ ಮ್ಯಾಚ್‌ ಎನ್ನಿಸುತ್ತದೆ. ವಿಭಿನ್ನ ಪಾತ್ರದಲ್ಲಿ ಸಚಿನ್‌ ಸುವರ್ಣ ಅತ್ಯುತ್ತಮ ನಟನೆ ಮನಸ್ಸಿನಲ್ಲಿ ಉಳಿಯುತ್ತದೆ. ಹಾಡುಗಳು ಚೆನ್ನಾಗಿವೆ. ಕಾಮಿಡಿ, ಆ್ಯಕ್ಷನ್‌, ಥ್ರಿಲ್‌ ಎಲ್ಲವೂ ಇರುವ ಜಸ್ಟ್‌ ಆಕಸ್ಮಿಕ ಒಮ್ಮೆ ನೋಡಲು ಅಡ್ಡಿಯಿಲ್ಲ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>