Quantcast
Channel: VijayKarnataka
Viewing all articles
Browse latest Browse all 6795

ಏರ್‌ ಪೆಗಾಸಸ್‌ ವಿಮಾನ ಹಾರಾಟ ರದ್ದು

$
0
0

ಬೆಂಗಳೂರು-ಹುಬ್ಬಳ್ಳಿ-ಮಂಗಳೂರು ನಡುವಣ ಹಾರಾಟ ರದ್ದು

ಬೆಂಗಳೂರು: ದಕ್ಷಿಣ ಭಾರತದ ಪ್ರಾದೇಶಿಕ ಏರ್‌ಲೈನ್‌ ಏರ್‌ ಪೆಗಾಸಸ್‌ ತನ್ನ ವಿಮಾನಗಳ ಹಾರಾಟವನ್ನು ಅನಿರ್ದಿಷ್ಟಾವಧಿಯ ತನಕ ರದ್ದುಪಡಿಸಿದೆ. ಕೆಲವು ತಾಂತ್ರಿಕ ಕಾರಣಗಳಿಂದ ವಿಮಾನ ಹಾರಾಟ ರದ್ದುಪಡಿಸಲಾಗಿದೆ ಎಂದು ಏರ್‌ಲೈನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆರ್ಥಿಕ ಬಿಕ್ಕಟ್ಟು ಕಾರಣವೆಂದು ಮೂಲಗಳು ತಿಳಿಸಿವೆ.

ಬೆಂಗಳೂರು, ಹುಬ್ಬಳ್ಳಿ , ಮಂಗಳೂರು, ಕೊಚ್ಚಿ, ತಿರುವನಂತಪುರಂ, ಮಧುರೈಗೆ ಏರ್‌ಪೆಗಾಸಸ್‌ ವಿಮಾನ ಹಾರಾಟ ನಡೆಸುತ್ತಿದೆ. ಏರ್‌ಲೈನ್‌ನ ವೆಬ್‌ಸೈಟ್‌ನಲ್ಲೂ ಎಲ್ಲ ವಿಮಾನ ಹಾರಾಟಗಳು ರದ್ದಾಗಿರುವುದನ್ನು ಸ್ಪಷ್ಟಪಡಿಸಲಾಗಿದೆ. ಡೆಕೋರ್‌ ಏವಿಯೇಶನ್‌ ಸಂಸ್ಥೆಯು ಏರ್‌ಪೆಗಾಸಸ್‌ ವಿಮಾನಗಳ ಹಾರಾಟವನ್ನು ನಡೆಸುತ್ತಿದೆ. ಭಾರತದ 11 ನಗರಗಳಿಗೆ ವೈಮಾನಿಕ ಸೇವೆ ಒದಗಿಸುತ್ತಿದೆ. ಶೈಸನ್‌ ಥಾಮಸ್‌ ಇದರ ಮುಖ್ಯಸ್ಥರಾಗಿದ್ದಾರೆ. ಮೂಲಗಳ ಪ್ರಕಾರ ಥಾಮಸ್‌ ಅವರು ತಮ್ಮ ಏರ್‌ಲೈನ್‌ಗೆ ಹೂಡಿಕೆಯನ್ನು ನಿರೀಕ್ಷಿಸುತ್ತಿದ್ದು, ಈ ಸಂಬಂದ ವಿದೇಶಿ ಏರ್‌ಲೈನ್‌ಗಳನ್ನು ಕೂಡ ಸಂಪರ್ಕಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>