Quantcast
Channel: VijayKarnataka
Viewing all articles
Browse latest Browse all 6795

ಬಯಲುಸೀಮೆಯ ನೀರಿನ ಹೋರಾಟಕ್ಕೆ ಚಿತ್ರರಂಗ ಬೆಂಬಲ

$
0
0

-ಗೋಕಾಕ್‌ ಚಳವಳಿಯ ನೆನಪಿಸುತ್ತಿದ್ದ ಮೆರವಣಿಗೆ-

ಕೋಲಾರ: ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟಕ್ಕೆ ಕನ್ನಡ ಚಲನಚಿತ್ರ ರಂಗ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ನಗರದ ಸರ್ವಜ್ಞ ಪಾರ್ಕ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಶಾಶ್ವತ ನೀರಾವರಿ ನಿರಂತರ ಹೋರಾಟ ವೇದಿಕೆ' ಉದ್ಘಾಟನಾ ಸಮಾರಂಭಕ್ಕೆ ಚಿತ್ರನಟರಾದ ಡಾ.ಶಿವರಾಜ್‌ಕುಮಾರ್‌, ಯಶ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಟಿಯರಾದ ರಾಗಿಣಿ, ಪೂಜಾ ಗಾಂಧಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಬೆಂಬಲ ಸೂಚಿಸಿದರು.

ಗೋಕಾಕ್‌ ಚಳವಳಿಯ ನಂತರ ಇದೇ ಮೊದಲ ಬಾರಿಗೆ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಚಿತ್ರರಂಗದ ಗಣ್ಯರು ಕೋಲಾರಕ್ಕೆ ಆಗಮಿಸಿದ್ದರು. ನಟ, ನಟಿಯರನ್ನು ನಗರದ ಪ್ರವಾಸಿ ಮಂದಿರದಿಂದ, ಮಹಾತ್ಮ ಗಾಂಧಿ ರಸ್ತೆಯ ಮೂಲಕ, ಶಾಶ್ವತ ನೀರಾವರಿ ಹೋರಾಟ ವೇದಿಕೆವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.

ಮೆರವಣಿಗೆ ವೇಳೆ ತಮ್ಮ ನೆಚ್ಚಿನ ನಟ, ನಟಿಯರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದರು. ನಂತರ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ, ಮರಗಳು, ಕಟ್ಟಡಗಳು ಹಾಗೂ ಕಾಂಪೌಂಡ್‌ಗಳ ಮೇಲೆ ನಿಂತು ನಟ, ನಟಿಯರನ್ನು ನೋಡಲು ಮುಗಿಬಿದ್ದರು.

ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಹಾಗಾಗಿ ವೇದಿಕೆ ಮುಂಭಾಗ ಸ್ವಲ್ಪ ಹೊತ್ತು ನೂಕು, ನುಗ್ಗಲು ಉಂಟಾಗಿತ್ತು. ವೇದಿಕೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆಯೇ ಜನರು ಸಿಳ್ಳೆ, ಕೇಕೆ, ಜೈಕಾರ ಹಾಕಲು ಪ್ರಾರಂಭಿಸಿದರು. ಇದರಿಂದಗಿ ಸ್ವಲ್ಪ ಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು.

ಅಭಿಮಾನಿಗಳ ಸಿಳ್ಳೆ, ಕೇಕೆ, ಗದ್ದಲದಿಂದ ಗರಂ ಆದ ನಟ ಶಿವರಾಜಕುಮಾರ್‌, ನಾವು ಇಲ್ಲಿ ಜೋಕ್‌ ಮಾಡಲು ಬಂದಿಲ್ಲ. ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸುವಂತೆ ನಡೆಸುತ್ತಿರುವ ನಿಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಲು ಬಂದಿದ್ದೇವೆ. ಹೋರಾಟದಲ್ಲಿ ಗಾಂಭೀರ್ಯತೆ ಇರಬೇಕು. ಹಾಗಾಗಿ ಸೌಮ್ಯವಾಗಿ ವರ್ತಿಸುವಂತೆ ಮನವಿ ಮಾಡಿದರು.

ನಟರಾದ ಅರುಣ್‌ ಸಾಗರ್‌, ಸಾಧು ಕೋಕಿಲಾ, ಅನೂಪ್‌, ಸಾ.ರಾ. ಗೋವಿಂದು, ಶಬರೀಶ್‌ ಶೆಟ್ಟಿ, ಎ.ವಿ.ರವಿ, ವಿಧಾನ ಪರಿಷತ್‌ ಸದಸ್ಯ ಹಾಗೂ ಚಿತ್ರ ನಿರ್ಮಾಪಕ ಸಿ.ಆರ್‌.ಮನೋಹರ್‌, ನಿರ್ಮಾಪಕರಾದ ಗಣೇಶ್‌, ಎಂ.ಎನ್‌.ಸುರೇಶ್‌, ಚಿತ್ರ ಸಾಹಿತಿ ಡಾ.ನಾಗೇಂದ್ರ ಪ್ರಸಾದ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಯಾರು ಏನು ಹೇಳಿದರು?

ಚಿನ್ನದ ನಾಡಲ್ಲಿ ನೀರಿಗೆ ಸಮಸ್ಯೆ ಉದ್ಭವಿಸಿರುವುದು ವಿಷಾದದ ಸಂಗತಿ. ನೀರಿನ ಸಮಸ್ಯೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಗುರಿ ಮಾಡುವುದಕ್ಕಿಂತ ನಮ್ಮ ತಪ್ಪನ್ನೂ ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಯಾವುದೇ ನೀರಾವರಿ ಮೂಲಗಳಿಲ್ಲ. ಸರಕಾರಗಳು ಸಹ ಯಾವುದೇ ಶಾಶ್ವತ ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿಲ್ಲ. ಆದ್ದರಿಂದ ಎಲ್ಲರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶಾಶ್ವತ ಪರಿಹಾರ ದೊರಕುವವರೆಗೆ ಹೋರಾಟವನ್ನು ಮುಂದುವರಿಸುವ ಅಗತ್ಯವಿದ್ದು, ಕನ್ನಡ ಚಿತ್ರರಂಗ ಸದಾ ನಿಮ್ಮ ಬೆಂಬಲಕ್ಕಿದೆ.

-ಶಿವರಾಜ್‌ಕುಮಾರ್‌, ನಟ

ಈ ಹೋರಾಟ ಯಾವುದೇ ಸರಕಾರದ ವಿರುದ್ಧ ಅಲ್ಲ. ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿಯನ್ನು ಕಲ್ಪಿಸಲು ಸರಕಾರಗಳು ಮೀನಮೇಷ ಎಣಿಸುತ್ತಿವೆ. ಹಾಗಾಗಿ ಜಿಲ್ಲೆಯ ಜನರ ಹೋರಾಟಕ್ಕೆ ನಾವು ಸದಾ ಬೆನ್ನೆಲುಬಾಗಿರುತ್ತೇವೆ.

-ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

ಈ ಹೋರಾಟವನ್ನು ಜಿಲ್ಲೆಯ ಜನರು ಗಂಭೀರವಾಗಿ ಪರಿಗಣಿಸುವುದರ ಜತೆಗೆ, ಭಾವನಾತ್ಮಕವಾಗೂ ಕಾಣಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ.

-ಯಶ್‌, ನಟ

ನೆಲಕ್ಕೆ ಬೆಂಕಿ ಬಿದ್ದರೆ ನೀರಿನಿಂದ ಆರಿಸಬಹುದು. ಆದರೆ ನೀರಿಗೇ ಬೆಂಕಿ ಬಿದ್ದರೆ ಆರಿಸಲು ಸಾಧ್ಯವಿಲ್ಲ. ನೀರಿಗಾಗಿ ಕರ್ನಾಟಕದಲ್ಲಿ ಮಹಾಯುದ್ಧ ಆಗುವ ಸಾಧ್ಯತೆಯಿದ್ದು, ಸರಕಾರ ಎಚ್ಚೆತ್ತುಕೊಳ್ಳಬೇಕು.

-ಪೂಜಾ ಗಾಂಧಿ, ನಟಿ

ನೀರು ಎಲ್ಲರಿಗೂ ಅವಶ್ಯಕವಾದ ಜೀವದ್ರವ್ಯವಾಗಿದೆ. ನಾವು ಇಲ್ಲಿಗೆ ಕಲಾವಿದರಾಗಿ ಆಗಮಿಸದೆ, ತಮ್ಮ ಕುಟುಂಬ ಸದಸ್ಯರಂತೆ ಪಾಲ್ಗೊಂಡಿದ್ದೇವೆ. ಈ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ತಮ್ಮ ಜತೆಗಿರುತ್ತೇವೆ.

- ರಾಗಿಣಿ, ನಟಿ


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶಾಕಿಂಗ್ ನ್ಯೂಸ್: ಶಾಲೆಯಲ್ಲೇ ಸೆಕ್ಸ್ ವಿಡಿಯೋ ತೋರಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>